ದಾಂಡೇಲಿ : ಮಕ್ಕಳಾಗದ ಕಾರಣ ಮತ್ತು ಮೊಬೈಲ್ ನಲ್ಲಿ ಕಾಲಹರಣ ಮಾಡುತ್ತಿದ್ದ ಪತ್ನಿಗೆ ಬುದ್ದಿವಾದ ಹೇಳಿದ್ದಕ್ಕೆ ಪತಿಯ ಕೊಲೆಗೆ ಸುಪಾರಿ ನೀಡಿದ ಘಟನೆ ದಾಂಡೇಲಿಯ ಗಾಂವಠಾಣಾದಲ್ಲಿನಡೆದಿದೆ.
ಪತಿ ಅಂಕುಷ ರಾಮಾ ಸುತಾರ ಕೊಲೆಗೆ ಯತ್ನಿಸಿದ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ. ಪತ್ನಿ ಸರಸ್ವತಿ ಸುತಾರ ಮತ್ತು ಬೆಳಗಾವಿಯ ನಂದಗಡದ ಗಣೇಶ ಶಾಂತರಾಂ ಪಾಟೀಲ್ ಬಂಧಿತರು.
ತನ್ನ ಪತಿಯ ಕೊಲೆಗೆ ಪತ್ನಿ ಸರಸ್ವತಿ ಸ್ನೇಹಿತೆಯ ಬಳಿ 30 ಸಾವಿರ ರೂಪಾಯಿಗೆ ಸುಪಾರಿ ನೀಡಿದ್ದಾಳೆ. ಜೂನ್ 11 ರಾತ್ರಿ ಮನೆಯಲ್ಲಿದ್ದಾಗ ಪತ್ನಿ ಮತ್ತು ಆರೋಪಿ ಗಣೇಶ ಇಬ್ಬರು ಅಪ್ರಾಪ್ತರೊಂದಿಗೆ ಸೇರಿ ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದಾರೆ. ಆಗ ಅಂಕುಷ ಕೂಗಿಕೊಂಡಾಗ ಅಕ್ಕಪಕ್ಕದಲ್ಲಿದ್ದ ಸಹೋದರರು ಓಡಿ ಬಂದಿದ್ದಾರೆ. ಆಗ ಆರೋಪಿಗಳು ಪರಾರಿಯಾಗಿದ್ದಾರೆ.
ಆರೋಪಿಯನ್ನ ದಾಂಡೇಲಿಯ ಭರ್ಚಿ ಬಳಿ ಬಂಧಿಸಲಾಗಿದ್ದು, ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.