ಕಾರವಾರ: ಜಿಲ್ಲೆಯಲ್ಲಿ ಬಿದ್ದ ಭಾರಿ ಮಳೆಯಿಂದ ಔರಾದ ಸದಾಶಿವಗಡ ರಾಜ್ಯ ಹೆದ್ದಾರಿ- 34 ಹಾದು ಹೋಗಿರುವ ಅಣಸಿ ಘಟ್ಟ ಪ್ರದೇಶದಲ್ಲಿ ಭೂ ಕೂಸಿತ ಉಂಟಾಗಿ ಹಾನಿಯಾದ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಪಡಿಸಲಾಗಿರುತ್ತದೆ.
ಈ ಹಿನ್ನಲೆಯಲ್ಲಿ ಜುಲೈ 25 ರಂದು ಹೊರಡಿಸಲಾದ ಆದೇಶದಲ್ಲಿನ ಶರತ್ತುಗಳನ್ನು ಸಡಿಲಗೊಳಿಸಿ, ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ 3.50 ಮೀ ಅಗಲ ರಸ್ತೆಯಿಂದ ಲಘು ವಾಹನಗಳು ಸಂಚಾರ ಮರು ಆರಂಭಿಸಲು ಜಿಲ್ಲಾಧಿಕಾರಿ ಮುಲೈ ಮುಗಿಲನ್ ಅವರು ಆದೇಶ ಹೊರಡಿಸಿರುತ್ತಾರೆ.