ಮುರ್ಡೇಶ್ವರ: ಸಮುದ್ರದಲೆಗೆ ಶಾಲಾ ಬಾಲಕರು ಬಲಿ; ಮೃತದೇಹಗಳು ಪತ್ತೆ

Source: S O News Service | By I.G. Bhatkali | Published on 3rd October 2017, 2:40 PM | Coastal News | Don't Miss |

ಭಟ್ಕಳ: ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಬಾಲಕರಿಬ್ಬರ ಮೃತದೇಹಗಳು ಕಡಲ ತೀರದಲ್ಲಿ ಪತ್ತೆಯಾದ ಘಟನೆ ಮುರ್ಡೇಶ್ವರದ ಸಣ್ಣಬಾವಿ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.

ಇಲ್ಲಿನ ಸ್ಥಳೀಯ ನಿವಾಸಿಗಳಾದ ಗಣೇಶ ನಾಯ್ಕ(12) ಹಾಗೂ ವಿನಾಯಕ ನಾಯ್ಕ(14) ಮೃತಪಟ್ಟವರಾಗಿದ್ದಾರೆ.

ಗಣೇಶ ನಾಯ್ಕ ಹಾಗೂ ವಿನಾಯಕ ನಾಯ್ಕ ನಿನ್ನೆ ಸಂಜೆ ಸಮುದ್ರ ಕಿನಾರೆಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದರು. ಅವರಿಗಾಗಿ ತಡರಾತ್ರಿಯವರೆಗೆ ತೀವ್ರ ಶೋಧ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಇಂದು ಬೆಳಗ್ಗೆ ಅವರಿಬ್ಬರ ಮೃತದೇಹಗಳು ಸಣ್ಣಬಾವಿ ಗ್ರಾಮದ ಕಡಲ ತೀರದಲ್ಲಿ ಪತ್ತೆಯಾಗಿದೆ.

ಈ ಬಗ್ಗೆ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...