ಆಟೊಗೆ ಟ್ರ್ಯಾಕ್ಟರ ಡಿಕ್ಕಿ:ಇಬ್ಬರು ಗಂಭೀರ

Source: so news | By MV Bhatkal | Published on 12th March 2019, 12:16 AM | Coastal News | Don't Miss |

 

ಭಟ್ಕಳ: ಇಲ್ಲಿನ ಸಾಗರ ರಸ್ತೆಯ ಕಸಲಗದ್ದೆ ಕ್ರಾಸ ಬಳಿ ಭಾನುವಾರದಂದು ರಾತ್ರಿ ಆಟೋ ರಿಕ್ಷಾಗೆ ಟ್ರಾಕ್ಟರ ಬಡಿದ ಹಿನ್ನೆಲೆ ಇಬ್ಬರು ಗಂಭೀರ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆ ಹಿನ್ನೆಲೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. 
ಗಂಭೀರ ಗಾಯಗೊಂಡ ಗಾಯಾಳು ನಾಗೇಶ ವೆಂಕಟರಮಣ ಮೋಗೇರ(30) ಆಟೋ ಚಾಲಕ, ಗಣಪತಿ ಮಂಜುನಾಥ ಗೊಂಡ(35) ಇಲ್ಲಿನ ಮಾರುಕೇರಿ ನಿವಾಸಿಗಳು ಎಂದು ತಿಳಿದು ಬಂದಿದೆ. ನಾಗೇಶ ಸಣ್ಣೂ ಗೊಂಡ ಎಂಬುವವರಿಗೆ ತಲೆಗೆ ಪೆಟ್ಟು ಬಿದ್ದಿದ್ದು ಕುಂದಾಪುರ ಆಸ್ಪತ್ರೆಗೆ ಸಾಗಿಸಲಾಗಿದೆ. ಇನ್ನುಳಿದಂತೆ ನಾಗಪ್ಪ ಮಳ್ಳ ನಾಯ್ಕ ಎಂಬುವವರು ಸಹ ಆಟೋದಲ್ಲಿ ಪ್ರಯಾಣಿಸುತ್ತಿದ್ದು ಸಣ್ಣಪುಟ್ಟ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. 
ಭಟ್ಕಳದಿಂದ ಮಾರುಕೇರಿ ಕಡೆಗೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಆಟೋಗೆ ಹಾಡುವಳ್ಳಿಯಿಂದ ಭಟ್ಕಳದ ಕಡೆಗೆ ಎದುರಿನಿಂದ ಬರುತ್ತಿದ್ದ ಟ್ರಾಕ್ಟರ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ನೇರವಾಗಿ ಬಂದು ಬಡಿದಿದೆ. ಢಿಕ್ಕಿಯ ರಭಸಕ್ಕೆ ಆಟೋದಲ್ಲಿದ್ದ ಪ್ರಯಾಣಿಕರು ಆಟೋದಿಂದ ಹೊರಗೆ ಬಿದ್ದಿದ್ದಾರೆ. ಆಟೋ ರಿಕ್ಷಾ ಮುಂಬಾಗ ಸಂಫೂರ್ಣ ನುಜ್ಜುನೂರಾಗಿದ್ದು, ತಕ್ಷಣಕ್ಕೆ ಸ್ಥಳಿಯರು ಆಟೋದಲ್ಲಿದ್ದ ಗಾಯಾಳುಗಳನ್ನು 108 ಅಂಬ್ಯುಲೇನ್ಸ ಮೂಲಕ ಇಲ್ಲಿನ ಸರಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು, ಗಂಭೀರ ಗಾಯಗೊಂಡ ನಾಗೇಶ ಮೋಗೇರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು ಗಣಪತಿ ಗೊಂಡ ತಲೆಗೆ ಪೆಟ್ಟು ಬಿದ್ದಿದ್ದು ಹಾಗೂ ಕಾಲು ಮುರಿದ್ದಿದ್ದ ಕಾರಣ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಹಿನ್ನೆಲೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಅಪಘಾತದ ಆರೋಪಿ ಟ್ರಾಕ್ಟರ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಕುರಿತು ಗಾಯಾಳು ನಾಗಪ್ಪ ಮಳ್ಳ ನಾಯ್ಕ ಇಲ್ಲಿನ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆದಿದೆ.   
ಬೈಕ್ ನಡುವೆ ಢಿಕ್ಕಿ: ಈ ಅಫಘಾತದ ಸಮಯದಲ್ಲೇ ಇಲ್ಲಿನ ಮಾರುಕೇರಿ ಕಿತ್ರೆ ಬಸ್ ನಿಲ್ದಾಣದ ಸಮೀಪ ಎರಡು ಬೈಕ ನಡುವೆ ಢಿಕ್ಕಿ ಸಂಭವಿಸಿದ್ದು, ಅಪಘಾತದಲ್ಲಿ ಮೂವರು ಮಂದಿ ಗಾಯಗೊಂಡಿದ್ದು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಕುಂದಾಪುರಕ್ಕೆ ಸಾಗಿಸಲಾಗಿದೆ

Read These Next