ಶಿವಮೊಗ್ಗ: ಬಹುತ್ವದ ವಿರೋಧಿ ಧೋರಣೆ ಮನೋಭಾವದ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯ ಪಠ್ಯ ಪರಿಷ್ಕರಣೆಯನ್ನು ರದ್ದುಗೊಳಿಸಿ, ಪ್ರೊ. ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯ ಪಠ್ಯವನ್ನೇ ಮುಂದುವರಿಸಬೇಕೆಂದು ಆಗ್ರಹಿಸಿ ಕುಪ್ಪಳ್ಳಿಯ ಕವಿಶೈಲದಿಂದ ತೀರ್ಥಹಳ್ಳಿಯವರೆಗೆ ಮಾಜಿ ಶಾಸಕ ಕಿಮ್ಮನೆ ರತ್ನಾಕರ ನೇತೃತ್ವದಲ್ಲಿ ಸಾಹಿತಿಗಳು, ಬುದ್ಧಿಜೀವಿಗಳು, ವಿದ್ವಾಂಸರು, ಸರ್ವ ಸಂಘಟನೆಗಳು, ಪಾದಯಾತ್ರೆ ಮೂಲಕ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪಠ್ಯ ಪರಿಷ್ಕರಣೆ ಸಮಿತಿಯಿಂದ ಆಗಿರುವ ವೈದಿಕೀಕರಣ, ಅಸಮಾನತೆ, ನಾಡಗೀತೆಗೆ ಅಪಮಾನ, ರಾಷ್ಟ್ರಕವಿ ಕುವೆಂಪುಗೆ ಅವಹೇಳನ, ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್,
ಹಿಂದುತ್ವ ವಾದಕ್ಕೆ ಕರ್ನಾಟಕ ಪ್ರಯೋಗಭೂಮಿಯಲ್ಲ 10 ದೇಶದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಕೋಮುವಾದಿ ನಿರ್ಮಾಣವಾಗಿದೆ. ಸಂಘಟನೆಗಳ ಪ್ರಚೋದನೆಯಿಂದ ಮಕ್ಕಳು ಉತ್ತಮ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ದೇಶ ಕೆಟ್ಟುವ ಮನಸ್ಸುಗಳಿಗೆ ವಿಕಾರ ವಿಷಯ ತುಂಬಲಾಗುತ್ತಿದೆ. ನಾಡಗೀತೆ ಹಾಡುವ ನೈತಿಕ ಅಧಿಕಾರ ಸರಕಾರಕ್ಕಿಲ್ಲ. ಲಿಂಗಾಯತ ಧರ್ಮ ಕನ್ನಡ ವಚನ ಧರ್ಮ. ಹಿಂದುತ್ವ ವಾದಕ್ಕೆ ಕರ್ನಾಟಕ ಪ್ರಯೋಗಭೂಮಿಯಲ್ಲ. ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಸಾಹಿತಿ |
ಶಂಕರಾಚಾರ್ಯರಿಗೆ ಅಗೌರವ ತೋರಿರುವ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿ ಮತ್ತು ಅದನ್ನು ಬೆಂಬಲಿಸುತ್ತಿರುವ ರಾಜ್ಯ ಸರಕಾರದ ಧೋರಣೆ ಖಂಡಿಸಿ ಕವಿಶೈಲದಲ್ಲಿ ಪ್ರತಿಭಟನಾಕಾರರು ಕನ್ನಡದ ಕಹಳೆ ಮೊಳಗಿಸಿದರು. ಕವಿಶೈಲದಲ್ಲಿ ಕುವೆಂಪು ಅವರ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ನಂತರ ಈ ಬೃಹತ್ ಪಾದಯಾತ್ರೆಗೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಹಾಗೂ ಖ್ಯಾತ ಸಾಹಿತಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಚಾಲನೆ ನೀಡಿದರು.
ಪ್ರೊ. ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಪಠ್ಯಕ್ರಮ ಪರಿಷ್ಠರಣೆಗೆ ಸರಕಾರ ಅನಧಿಕೃತ ನೇಮಕಾತಿ ಮಾಡಿದೆ. ಆದೇಶವನ್ನು ಉಲ್ಲಂಘಿಸಿ ಮಾಡಿದ ಅಕ್ರಮ ಪಠ್ಯ ಪರಿಷ್ಕರಣೆಯನ್ನು ಈ ಸರಕಾರ ಸಕ್ರಮಗೊಳಿಸಿದ ರೀತಿಯಿಂದ ಇಡೀ ಕನ್ನಡ ಪ್ರಜೆಗೆ ಅಪಮಾನವಾಗಿದೆ. ನಾಡಿನ ಕನ್ನಡ ಪ್ರಜೆ, ಭಾರತದ ಸಂಕೇತವಾದ ನಾಡಗೀತೆ 'ಜೈ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ' ಎಂಬ ನುಡಿಯನ್ನು ತಿರುಚಿರುವುದು ಬರೀ ರಾಷ್ಟ್ರಕವಿಗಲ್ಲ, ಇಡೀ ಕನ್ನಡಕ್ಕೆ ಮಾಡಿದ ಅವಮಾನ. ಅಂತಹ ವ್ಯಕ್ತಿಯನ್ನು ಪಠ್ಯ ಪರಿಷ್ಕರಣೆ ಸಮಿತಿಯ ಅಧ್ಯಕ್ಷನನ್ನಾಗಿ ಮಾಡಿದ್ದು, ಸರಕಾರದ ಬೇಜವಾಬ್ದಾರಿ ನಡೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಿಕೊಳ್ಳುವ ಶಿಕ್ಷಣವನ್ನು ಮಕ್ಕಳಿಗೆ ಕೊಡುವುದನ್ನು ಬಿಟ್ಟು, ದೇಶಭಕ್ತಿಯ ಹೆಸರಿನಲ್ಲಿ ದ್ವೇಷವನ್ನು ಪ್ರಚೋದಿಸುವ ಪಠ್ಯಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡಬೇಕೇ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಈ ಹೋರಾಟ ಪಕ್ಷಾತೀತವಾಗಿ ನಡೆಯುತ್ತಿದೆ.