ಕುಮಟಾದಲ್ಲಿ ಸೋಂಕು ನಿವಾರಕ ಸಿಂಪಡಣೆ
ಕುಮಟಾ: ಪುರಸಭೆಯ ಆದೇಶದ ಮೇರೆಗೆ ಪಟ್ಟಣದಾದ್ಯಂತ ಅಗ್ನಿಶಾಮಕ ಸಿಬ್ಬಂದಿಗಳು ಪುರಸಭೆಯ ಸಹಕಾರದೊಂದಿಗೆ ಅಗ್ನಿಶಾಮಕ ವಾಹನದ ಮೂಲಕ ಸೋಂಕು ತಡೆಯಲು ಸೋಂಕು ನಿವಾರಕ ಸಿಂಪಡಿಸಲಾಯಿತು.
ಪಟ್ಟಣದ ಬಸ್ತಿಪೇಟೆ, ಮೂರುಕಟ್ಟೆ ಮಾರ್ಗವಾಗಿ ಮೀನು ಮಾರುಕಟ್ಟೆ, ಹಳೆ ಬಸ್ ನಿಲ್ದಾಣ, ಮಾಸ್ತಿಕಟ್ಟೆ, ಹೊಸ ಬಸ್ ನಿಲ್ದಾಣ, ಸರಕಾರಿ ಆಸ್ಪತ್ರೆ ಸೇರಿದಂತೆ ಪಟ್ಟಣದ ಹಲವೆಡೆಗಳಲ್ಲಿ ಔಷಧವನ್ನು ಸಿಂಪಡಿಸಲಾಯಿತು. ಈ ವೇಳೆ ಪತ್ರಿಕೆಯೊಂದಿಗೆ ಪುರಸಭೆಯ ಆರೋಗ್ಯ ಅಧಿಕಾರಿ ಸೋಮಶೇಖರ ಅಕ್ಕಿ ಮಾತನಾಡಿ, ‘ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಪಟ್ಟಣದಾದ್ಯಂತ ಅಗ್ನಿಶಾಮಕ ದಳದ ವಾಹನದ ಮೂಲಕ ಸೋಡಿಯಂ ಸಲ್ಫೇಟ್, ಸೋಡಿಯಂ ಹೈಪೆÇೀಕ್ಲೋರೈಡ್ ಸೊಲ್ಯೂಷನ್ ಅನ್ನು ಸಿಂಪಡಿಸುವುದರ ಮೂಲಕ ಕೊರೋನಾ ತಡೆಗಟ್ಟಲು ಪ್ರಯತ್ನಿಸುತ್ತಿದ್ದೇವೆ’ ಎಂದರು.