ಜೋಯಿಡಾ: ಜೋಯಿಡಾ' ದಾಂಡೇಲಿ ಮಾರ್ಗದಲ್ಲಿ ಶನಿವಾರ 5 ತಾಸಿಗೂ ಹೆಚ್ಚು ಕಾಲ ಬಸ್ ಸಂಚಾರ ಇಲ್ಲದೇ ಶಾಲಾ, ಕಾಲೇಜ್ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪರದಾಡುವಂತಾಯಿತು. ಉಳವಿ-ಹುಬ್ಬಳ್ಳಿ ಬಸ್ ಜೊಯಿಡಾ ಬಸ್ ತಂಗುದಾಣ ಬರುತ್ತಿದ್ದಂತೆ ನೂಕುನುಗ್ಗಲು ಉಂಟಾಯಿತು. ಚಾಲಕ ಮತ್ತು ನಿರ್ವಾಹಕರು ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೆ ಬಸ್ ಬಿಟ್ಟು ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟ ಆಡುವ ನಿಷ್ಕಾಳಜಿ ಎದ್ದು ಕಾಣುತಿತ್ತು.
ಚಾಲಕ-ನಿರ್ವಾಹಕರ ನಿರ್ಲಕ್ಷ್ಯ
|
ಶನಿವಾರದಮದು ಶಾಲಾ ಕಾಲೇಜುಗಳನ್ನು ಮಧ್ಯಾಹ್ನವೇ ಬಿಡಲಾಗಿತ್ತು. ಗಾವಡೇವಾಡಾ ಖಾಪ್ರಿದೇವರ ಜಾತ್ರೆ ಇರುವುದರಿಂದ ನೂರಾರು ಸಂಖ್ಯೆಯಲ್ಲಿ ಈ ಮಾರ್ಗದ ಪ್ರಯಾಣ ಮಾಡುವವರು ಸಹ ಇದ್ದರೂ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನದ ತನಕ ಜೊಯಿಡಾ ದಾಂಡೇಲಿ ಮಾರ್ಗಕ್ಕೆ ಯಾವ ಬಸ್ ಸಂಚಾರವಿರಲಿಲ್ಲ. ಸಂಜೆ ಮೂರು ಗಂಟೆಗೆ ಉಳವಿ ಹುಬ್ಬಳ್ಳಿ ಬಸ್ ಜೊಯಿಡಾ ಬಸ್ ತಂಗುದಾಣಕ್ಕೆ ಬಂದಾಗ ಬಸ್ ಏರಲು ನೂರಾರು ಪ್ರಯಾಣಿಕರು, ವಿದ್ಯಾರ್ಥಿಗಳು ತಾನು ಮುಂದೆ. ತಾ ಮುಂದೆ ಎನ್ನುತ್ತ ಬಸ್ ಏರಲು ನೂಕು ನುಗ್ಗಲು ಉಂಟಾಯಿತು. ಅನೇಕರು ಬಸ್ ಕಿಟಕಿಯಿಂದ ಒಳ ಹೋಗಲು ಪ್ರಯತ್ನಿಸಿದರು