ಭಟ್ಕಳ: ಶಿಕ್ಷಕಿಯರನ್ನು ವರ್ಗಾಯಿಸುವಂತೆ ಆಗ್ರಹಿಸಿ ವಿದ್ಯಾರ್ಥಿ ಪಾಲಕರಿಂದ ಬಿಇಒ ಕಚೇರಿ ಮುತ್ತಿಗೆ
ಭಟ್ಕಳ: ಕಳೆದ ಇಪ್ಪತ್ತು ವರ್ಷಗಳಿಂದ ಒಂದೇ ಶಾಲೇಯಲ್ಲಿ ಠಿಕಾಣಿ ಹೋಡಿ ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣವನ್ನು ನೀಡದೆ ಪಾಲಕರೊಂದಿಗೆ ಅಸಭ್ಯತನದಿಂದ ವರ್ತಿಸುತ್ತಿರುವ ಇಬ್ಬರು ಶಿಕ್ಷಕಿಯರನ್ನು ಕೂಡಲೇ ವರ್ಗಾಯಿಸಬೇಕೆಂದು ಆಗ್ರಹಿಸಿ ವಿಧ್ಯಾರ್ಥಿಗಳು ಹಾಗೂ ಪಾಲಕರು ಇಲ್ಲಿನ ಸಾಗರ್ ರಸ್ತೆಯಲ್ಲಿರುವ ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ ಅಪರೂಪದ ಘಟನೆ ಜರಗಿದೆ.
ತಾಲೂಕಿನ ಮುಠ್ಠಳ್ಳಿ ಪಂಚಯಾತ್ ವ್ಯಾಪ್ತಿಯ ಮುಠ್ಠಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ೨೦ ವರ್ಷಗಳಿಂದ ಮಂಗಳ ನಾಯಕ ಹಾಗೂ ಕಳೆದ ೭ ವರ್ಷಗಳಿಂದ ಪದ್ಮಾ ನಾಯ್ಕ ಎಂಬ ಶಿಕ್ಷಕೀಯರು ಇಲ್ಲೇ ಠಿಕಾಣೆ ಹೂಡಿದ್ದು ಸರಿಯಾದ ಪಾಠ ಮಾಡದೆ ತಮ್ಮ ಕರ್ತವ್ಯದಿಂದ ನಿರ್ಲಕ್ಷತನ ತೋರುತ್ತಿದ್ದಾರೆ. ಮಕ್ಕಳೊಂದಿಗೆ ಹಾಗೂ ಪಾಲಕರೊಂದಿಗೆ ಸೌಜನ್ಯದೊಂದಿಗೆ ವರ್ತಿಸುತ್ತಿಲ್ಲ ಇದರಿಂದಾಗಿ ವಿದ್ಯಾರ್ಥಿಗಳು ಶಾಲೆಗೆ ಹೋಗಲು ನಿರಾಕರಿಸುತ್ತಿದ್ಧಾರೆ, ಮಕ್ಕಳ ಸಂಖ್ಯೆ ತೀರಾ ಕಡಿಮೆಯಾಗುತ್ತಿದೆ ಎಂದು ಆರೋಪಿಸಿ ಅಲ್ಲಿನ ಶಾಲಾ ಎಸ್.ಡಿ.ಎಂ. ಸಿ ಸಮಿತಿ ಸದಸ್ಯರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ವ್ಯಕ್ತಪಡಿದರು.
ಪಾಲಕರೊಂದಿಗೆ ವಿದ್ಯಾರ್ಥಿಗಳೂ ಕೈಜೋಡಿಸಿದ್ದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ಕುರಿತು ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಊರಿನ ನಾಗರೀಕರು ಕ್ಷೇತ್ರ ಶಿಕ್ಷಾಣಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿಯನ್ನು ಅರ್ಪಿಸಿದ್ದು ಕೂಡಲೆ ಇಬ್ಬರು ಶಿಕ್ಷಕಿಯರನ್ನು ವರ್ಗಾಯಿಸಬೇಕು ಇಲ್ಲದೆ ಹೋದಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೆ ಬಿಇಒ ಕಚೇರಿಗೆ ಕಳುಹಿಸಬೇಕಾದೀತು ಎಂದು ಮನವಿಯಲ್ಲಿ ಎಚ್ಚರಿಕೆಯನ್ನು ನೀಡಲಾಗಿದೆ.