ಕೈಗಾರಿಕಾ ಪ್ರಕೋಷ್ಠದ ರಾಜ್ಯ ಸಂಚಾಲಕರಾಗಿ ಹಾಂಗ್ಯೋ ಐಸ್ ಕ್ರೀಂ ವ್ಯ.ನಿರ್ದೆಶಕ ಪ್ರದೀಪ ಪೈ ನೇಮಕ.
ಮಂಗಳೂರು : ಕರ್ನಾಟಕ ಬಿಜೆಪಿಯ ಕೈಗಾರಿಕಾ ಪ್ರಕೋಷ್ಠದ ರಾಜ್ಯ ಸಂಚಾಲಕರನ್ನಾಗಿ ಉತ್ತರಕನ್ನಡ ಜಿಲ್ಲೆಯ ಭಟ್ಕಳ ಮೂಲದ ಹಾಂಗ್ಯೊ ಐಸ್ಕ್ರೀಂ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ ಪೈ ಅವರನ್ನು ನೇಮಿಸಲಾಗಿದೆ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲ ವಿವಿಧ ಪ್ರಕೋಷ್ಡದ ನೇಮಕ ಪ್ರಕ್ರೀಯೆ ನಡೆಸಿ ಪಟ್ಟಿ ಬಿಡುಗಡೆ ಮಾಡಿದ್ದಾರೆ. ರಾಜ್ಯ ಬಿಜೆಪಿ ಪಕ್ಷದ ಒಟ್ಟು 15 ಪ್ರಕೋಷ್ಠಗಳ ರಾಜ್ಯ ಸಂಚಾಲಕ ಮತ್ತು ಸಹಸಂಚಾಲಕರನ್ನು ರಾಜ್ಯಾಧ್ಯಕ್ಷ ನಳಿನ ಕುಮಾರ ನೇಮಕ ಮಾಡಿ ಆದೇಶ ನೀಡಿದ್ದಾರೆ. ಅದರಲ್ಲಿ ಕೈಗಾರಿಕಾ ಪ್ರಕೋಷ್ಠಕ್ಕೆ ಸಂಚಾಲಕರನ್ನಾಗಿ ಭಟ್ಕಳ ಮೂಲದ ಹಾಂಗ್ಯೊ ಐಸ್ಕ್ರೀಂ ಸಮೂಹದ ಪ್ರದೀಪ ಜಿ. ಪೈ ಹಾಗೂ ಸಹಸಂಚಾಲಕರನ್ನಾಗಿ ಸಪ್ತಗಿರಿ ಗೌಡ ಅವರನ್ನು ನೇಮಕ ಮಾಡಿದ್ದಾರೆ.
ಕೈಗಾರಿಕೆ, ಸಣ್ಣ, ಮದ್ಯಮ ಕೈಗಾರಿಕೆ ಉತ್ತೇಜನ ಸೇರಿದಂತೆ ಕೈಗಾರಿಕಾ ವಲಯವನ್ನು ಅಭಿವೃದ್ಧಿ ಪಡಿಸುವಲ್ಲಿ ಕೈಗಾರಿಕಾ ಪ್ರಕೋಷ್ಠ ಕಾರ್ಯ ನಿರ್ವಹಿಸಲಿದೆ. ಹಾಲಿನ ಉತ್ಪನ್ನಗಳಲ್ಲಿ ರಾಜ್ಯವಲ್ಲದೇ ದೇಶದಲ್ಲಿ ಪ್ರಸಿದ್ದಿಯಾಗಿರುವ ಹಾಂಗ್ಯೋ ಐಸ್ ಕ್ರೀಂ ಸಮೂಹ ಸಂಸ್ಥೆಗೆ ಇನ್ನೊಂದು ಗರಿ ಮೂಡಿದಂತಾಗಿದೆ.