ಬೆಂಗಳೂರು: ರಾಜ್ಯದ 32 ಜಿಲ್ಲೆಗಳಲ್ಲಿ 541 ಕಾಲೇಜುಗಳಲ್ಲಿ ದಾಖಲಾತಿಗಳು ನಡೆದಿಲ್ಲ. ನಿಯಮಾನುಸಾರ ಇಂತಹ ಕಾಲೇಜುಗಳನ್ನು ಮುಚ್ಚಲಾಗುತ್ತದೆ. ಕೋವಿಡ್ ಪರಿಸ್ಥಿತಿಯಿಂದಾಗಿ, ಸರಕಾರವು ಈ ಕಾಲೇಜುಗಳಿಗೆ ದಾಖಲಾತಿ ಮಾಡಿಕೊಳ್ಳಲು ಒಂದು ವರ್ಷಕ್ಕೆ ಷರತ್ತುಬದ್ಧ ನೀಡಿದೆ. ಬೆಂಗಳೂರು ದಕ್ಷಿಣ 93, ಬೆಂಗಳೂರು ಉತ್ತರ 61, ಬಿಜಾಪುರ 26, ತುಮಕೂರು ಮತ್ತು ಮೈಸೂರು ತಲಾ 24, ಕಲಬುರಗಿ 23, ಚಿತ್ರದುರ್ಗ 21, ದಾವಣಗೆರೆ 19, ಧಾರವಾಡ ಮತ್ತು ಬೀದರ್ ತಲಾ 18, ಚಿಕ್ಕೋಡಿ 17, ಚಿಕ್ಕಬಳ್ಳಾಪುರ 16, ರಾಯಚೂರು, ಹಾಸನ, ಬೆಳಗಾವಿ 15, ಬಳ್ಳಾರಿ 13, ಬಾಗಲಕೋಟೆ 11, ಕೋಲಾರ ಮತ್ತು ಮಂಗಳೂರು ತಲಾ 10, ಹಾವೇರಿ, ಯಾದಗಿರಿ ತಲಾ 8, ಉಡುಪಿ 7, ಚಾಮರಾಜನಗರ, ಚಿಕ್ಕಮಗಳೂರು, ರಾಮನಗರ, ಗದಗ ಮತ್ತು ಕೊಡಗು ತಲಾ 6, ಕೊಪ್ಪಳ ಮತ್ತು ಶಿವಮೊಗ್ಗ ತಲಾ 5 ಕಾಲೇಜುಗಳು, ಉತ್ತರ ಕನ್ನಡ 3 ಶೂನ್ಯ ದಾಖಲಾತಿ ಹೊಂದಿವೆ.
ನಿಯಮದ ಪ್ರಕಾರ ಕನಿಷ್ಠ 40 ವಿದ್ಯಾರ್ಥಿಗಳು ಅಂತಹ ಕಾಲೇಜುಗಳಿಗೆ ದಾಖಲಾಗಬೇಕು. ಪ್ರವೇಶ ಪ್ರಕ್ರಿಯೆ ಮುಗಿದ ನಂತರ ಪಿಯು ಇಲಾಖೆ ಪರಿಶೀಲನೆ ನಡೆಸಲಿದೆ. ಭೇಟಿ ವೇಳೆ ಕಾಲೇಜಿನಲ್ಲಿ ಮೂಲ ಸೌಕರ್ಯ ಹಾಗೂ 40 ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಬೋಧಕ ಸಿಬ್ಬಂದಿ ಇರುವುದು ಕಂಡುಬಂದಲ್ಲಿ, ಅಂತಹ ಕಾಲೇಜುಗಳನ್ನು 2022-23ನೇ ಶೈಕ್ಷಣಿಕ ವರ್ಷಕ್ಕೆ ನಡೆಸಲು ಅನುಮತಿ ನೀಡಲಾಗುವುದು ಎಂದು ಪಿಯು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.