ರಾಷ್ಟ್ರೀಯ ಯುವಜನೋತ್ಸವ ಸಮಾರೋಪ. ದೇಶದ ಸಮಗ್ರ ಅಭಿವೃದ್ಧಿಗೆ ಯುವಜನರ ಕೊಡುಗೆಗಳನ್ನು ನೀಡಲಿ : ರಾಜ್ಯಪಾಲ ಥಾವರಚಂದ್ ಗೆಹ್ಲೋಟ್

Source: SO News | By Laxmi Tanaya | Published on 16th January 2023, 11:14 PM | State News | Don't Miss |

ಧಾರವಾಡ : ಭಾರತವು ಯುವ ಜನರ ದೇಶವಾಗಿದೆ. ದೇಶದ ಸಮಗ್ರ ವಿಕಾಸಕ್ಕೆ ಯುವಕರು ತಮ್ಮ ಕೊಡುಗೆಗಳನ್ನು ನೀಡುವ ಮೂಲಕ ಭಾರತ ಮಾತೆಯ ಕೀರ್ತಿಯನ್ನು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಹೇಳಿದರು.

ಭಾರತ ಸರ್ಕಾರದ ಯುವ ವ್ಯವಹಾರಗಳ ಹಾಗೂ ಕ್ರೀಡಾ ಮಂತ್ರಾಲಯ, ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಆಯೋಜಿಸಿದ್ದ 26ನೇ ರಾಷ್ಟ್ರೀಯ ಯುವಜನೋತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.

ಉತ್ಸಾಹ ಮತ್ತು ಕ್ರಿಯಾಶೀಲತೆಯಿಂದ ಭಾಗವಹಿಸಿದ ಯುವಜನತೆ ಭಾರತದ ಏಕತೆಯನ್ನು ಪ್ರತಿಬಿಂಬಿಸಿದೆ. ಭಾರತದ ಸಂಸ್ಕøತಿಗೆ ಪ್ರಾಚೀನತೆಯಿದೆ. ವಸುಧೈವ ಕುಟುಂಬಕಂ ಧ್ಯೇಯದೊಂದಿಗೆ ದೇಶ ಮುನ್ನಡೆಯುತ್ತಿದೆ. ಶಿಕ್ಷಣ ಮತ್ತು ಕೌಶಲ್ಯಕ್ಕೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಆದ್ಯತೆ ನೀಡಿದೆ. ಮಾತೃಭಾಷೆಯ ಕಲಿಕೆಯೊಂದಿದೆ ಐಚ್ಛಿಕ ಭಾಷೆಗಳ ಕಲಿಕೆಗೂ ನೀತಿ ಅವಕಾಶ ನೀಡಿದೆ. ದೇಶದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ. ಯೋಗ ಮತ್ತು ಕ್ರೀಡೆ ಶಿಕ್ಷಣದ ಅವಿಭಾಜ್ಯ ಅಂಗವಾಗಿವೆ. ಮನುಷ್ಯ ಜೀವನದ ಅವಕಾಶ ದೊರೆತಿದೆ. ಇದು ಶ್ರೇಷ್ಟ ಅವಕಾಶ ಇದರ ಸದ್ಬಳಕೆ ಸಮರ್ಪಣಾ ಭಾವದೊಂದಿಗೆ ಪೂರ್ಣವಾಗಬೇಕು. ದೇಶದ ವಿಕಾಸಕ್ಕೆ ಯುವಜನರು ತಮ್ಮ ಕೊಡುಗೆಗಳನ್ನು ನೀಡಬೇಕು. ಭಾರತ ಸರ್ಕಾರವು ನೀಡಿದ ರಾಷ್ಟ್ರೀಯ ಯುವಜನೋತ್ಸವ ಅವಕಾಶವನ್ನು ರಾಜ್ಯಕ್ಕೆ ನೀಡಿತ್ತು. ರಾಜ್ಯ ಅತ್ಯಂತ ಸಮರ್ಥವಾಗಿ ಅದನ್ನು ನಿರ್ವಹಿಸಿದೆ. ದೇಶದ ಮೂಲೆ ಮೂಲೆಗಳಿಂದ ಆಗಮಿಸಿರುವ ಯುವಜನ ಇಲ್ಲಿಂದ ಸಿಹಿ ನೆನಪುಗಳನ್ನು ತಮ್ಮೊಂದಿಗೆ ಕೊಂಡೊಯ್ಯಲಿ. ದೇಶವು ಯುವಜನರದ್ದಾಗಿದೆ.ಯುವಜನರು ಭಾರತದ ಭವಿಷ್ಯವಾಗಿದ್ದಾರೆ. ಭಾರತ ಮಾತೆಯ ಉಜ್ವಲ ಭವಿಷ್ಯಕ್ಕೆ ಯುವಜನರು ತಮ್ಮ ಕೊಡುಗೆಗಳನ್ನು ನೀಡಬೇಕು ಎಂದರು.

ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಲ್ಹಾದ ಜೋಶಿ ಮಾತನಾಡಿ, ರಾಷ್ಟ್ರೀಯ ಯುವಜನೋತ್ಸವ ಯಾವ ರಾಜ್ಯ ಹಾಗೂ ಜಿಲ್ಲೆಯಲ್ಲಿ ಆಯೋಜಿಸಬೇಕೆಂಬ ಚರ್ಚೆ ಕೇಂದ್ರ ಸರ್ಕಾರ ಮಟ್ಟದಲ್ಲಿ ನಡೆದಾಗ, ಯುವ ವ್ಯವಹಾರಗಳ ಸಚಿವರು ಕರ್ನಾಟಕದ ಹುಬ್ಬಳ್ಳಿ ಧಾರವಾಡ ಅವಳಿ ನಗರಗಳ ಮೇಲೆ ವಿಶ್ವಾಸವಿರಿಸಿ ಅವಕಾಶ ನೀಡಲಾಯಿತು. ಕರ್ನಾಟಕದ ಸಾಂಸ್ಕøತಿಕ ಕೇಂದ್ರವಾಗಿರುವ ಹುಬ್ಬಳ್ಳಿ ಧಾರವಾಡ ಶಹರಗಳಲ್ಲಿ ಈ ಉತ್ಸವ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಭಾರತ ಸರ್ಕಾರ, ಕರ್ನಾಟಕ ಸರ್ಕಾರ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳ, ಸಿಬ್ಬಂದಿಯ ಅವಿರತ ಶ್ರಮ ಇದರ ಹಿಂದೆ ಇದೆ. ದೇಶದ ರಾಷ್ಟ್ರೀಯ ಸಮಗ್ರತೆಗೆ ಇಂತಹ ಉತ್ಸವ ಮುಖ್ಯ. ಹುಬ್ಬಳ್ಳಿ ಧಾರವಾಡದಲ್ಲಿ ಹಲವಾರು ಹೆಸರಾಂತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದರ ಪರಂಪರೆ ಇದೆ. ಪೇಡಾ ನಗರಿಯಿಂದ ದೇಶಕ್ಕೆ ಸಿಹಿಯಾದ ಸಂದೇಶವನ್ನು ಯುವಜನತೆ ನೀಡಬೇಕು ಎಂದರು.

ಕೇಂದ್ರ ಯುವ ವ್ಯವಹಾರಗಳು, ಕ್ರೀಡಾ ಹಾಗೂ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್ ಮಾತನಾಡಿ, ಕರ್ನಾಟಕದ ರಾಜ್ಯಪಾಲರು, ಮುಖ್ಯಮಂತ್ರಿಗಳು, ಸ್ಥಳೀಯ ಸಂಸದರಾಗಿರುವ ಕೇಂದ್ರ ಸಚಿವರ ಸಹಕಾರದಿಂದ ಕರ್ನಾಟಕದಲ್ಲಿ 26ನೇ ರಾಷ್ಟ್ರೀಯ ಯುವಜನೋತ್ಸವ ಅತ್ಯಂತ ಯಶಸ್ವಿಯಾಗಿ ನಡೆದಿದೆ.
ನವಯುಗದ ನವ ಸೃಜನೆ ಯುವಜನತೆಯ ಕೈಯಲ್ಲಿದೆ. ಯುವ ಜನತೆ ಕೇವಲ ತಮ್ಮ ಭವಿಷ್ಯಕ್ಕಾಗಿ ಮಾತ್ರವಲ್ಲ ದೇಶವನ್ನು ಸಮಗ್ರವಾಗಿ ಮುನ್ನಡೆಸುವ ಅಭಿವೃದ್ಧಿಪಡಿಸಲು ತಮ್ಮ ಕೊಡುಗೆಗಳನ್ನು ನೀಡಬೇಕು. ರಾಷ್ಟ್ರೀಯ ಯುವಜನೋತ್ಸವವು ಪ್ರಗತಿ ಶೀಲತೆಯ ಸಂಕೇತವಾಗಿದೆ. ಹೊಸ ಅನ್ವೇಷಣೆಗಳೊಂದಿಗೆ ಹೊಸ ಭಾರತ ಕಟ್ಟಬೇಕು.
 ಪ್ರಧಾನಮಂತ್ರಿಯವರು ಓಲಿಂಪಿಕ್ ಪದಕ ವಿಜೇತರನ್ನು ಮಾತ್ರವಲ್ಲ, ಸ್ಪರ್ಧಿಸಿ, ಪರಾಜಿತರಾದವರನ್ನೂ ಕೂಡ ಭೇಟಿಯಾಗಿ ಅವರ ಮನೋಬಲ ಹೆಚ್ಚಿಸುವ ಪ್ರಯತ್ನ ಮಾಡಿರುವುದು ಮಹತ್ವದ ಬೆಳವಣಿಗೆಯಾಗಿದೆ. ಜಗತ್ತಿನ ಅತ್ಯಧಿಕ ಆರ್ಥಿಕ ವಹಿವಾಟು ಹೊಂದಿರುವ ನಾಲ್ಕು ರಾಷ್ಟ್ರಗಳಲ್ಲಿ ಶಿಕ್ಷಣ, ಆರೋಗ್ಯ ಸೌಕರ್ಯಗಳನ್ನು ನೀಡುವುದಕ್ಕಿಂದ ಭಾರತದಂತಹ ಬೃಹತ್ ರಾಷ್ಟ್ರದ ಅಗತ್ಯಗಳನ್ನು ಪೂರೈಸುವುದು ಸವಾಲಿನ ಸೌಕರ್ಯವಾಗಿದೆ. ದೇಶದಲ್ಲಿ 80 ಸಾವಿರ ಸ್ಟಾರ್ಟ್ ಅಪ್‍ಗಳ ಮೂಲಕ ಯುವಜನ ಉದ್ಯಮಶೀಲರಾಗಿದ್ದಾರೆ. ದೇಶದ ಕೋಟ್ಯಂತರ ಬಡಜನರ ಜೀವನ ನಿರ್ವಹಣೆಗೆ ಸರ್ಕಾರ ಹಲವಾರು ಸೌಕರ್ಯಗಳನ್ನು ನೀಡಿದೆ. ಭಾರತದಂತಹ ವೈವಿಧ್ಯತೆಗಳ ರಾಷ್ಟ್ರದಲ್ಲಿ ಕಲಿಯಲು ವಿಪುಲ ಅವಕಾಶಗಳಿವೆ.

ರೆಡ್ಯೂಸ್, ರಿ ಯೂಸ್, ರಿ ಸೈಕಲ್ ಈ ಮೂರು ಆರ್‍ಗಳನ್ನು ಜೀವನದಲ್ಲಿ ಪಾಲಿಸಬೇಕು. ಉತ್ಸವವನ್ನು ಹಸಿರು ಉತ್ಸವನ್ನಾಗಿ ಮಾಡಿರುವುದು ಹೆಮ್ಮೆಯ ಕಾರ್ಯವಾಗಿದೆ. ಹಿಂದಿನ ಯೋಗಥಾನ್‍ಗಳಲ್ಲಿ ಒಂದು ಲಕ್ಷ ಜನರು ಸೇರಿ ದಾಖಲೆ ಮಾಡಿದ್ದರು, ಈ ಬಾರಿ ಕರ್ನಾಟಕದಲ್ಲಿ ಸುಮಾರು 5 ಲಕ್ಷ ಜನರು ಭಾಗವಹಿಸಿರುವುದು ಅಭಿಮಾನದ ವಿಷಯವಾಗಿದೆ. ದೇಶವು ಜಿ-20 ಅಧ್ಯಕ್ಷತೆ ವಹಿಸಿರುವ ಈ ವರ್ಷದ ಅವಧಿಯಲ್ಲಿ ಯುವಕರನ್ನು ಒಗ್ಗೂಡಿಸಿ ವೈ-20 ಸಂವಾದ ಸಭೆಗಳನ್ನು ಆಯೋಜಿಸಲಾಗುತ್ತಿದೆ. ದೇಶದ ಯುವಜನರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ಯೋಗಥಾನ್ ದಾಖಲೆ:  ಕರ್ನಾಟಕದಲ್ಲಿ ಜನವರಿ 15 ರಂದು ನಡೆದ ಯೋಗಥಾನ್‍ನಲ್ಲಿ ಇದುವರೆಗೆ ನಡೆದ ಎಲ್ಲಾ ಯೋಗಾಥಾನ್ ಕಾರ್ಯಕ್ರಮಗಳಲ್ಲಿ ಅತ್ಯಧಿಕ ಸಂಖ್ಯೆಯ ಭಾಗವಹಿಸುವಿಕೆಯಿಂದ ಹೊಸ ದಾಖಲೆ ಸೃಷ್ಟಿಸಿದೆ. ಬೆಳಗಾವಿ, ಮೈಸೂರಿನಲ್ಲಿ ಹೆಚ್ವು ಜನರು ಭಾಗವಹಿಸಿದ್ದರು ಎಂದು ಯುವಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಡಾ.ಕೆ.ಸಿ. ನಾರಾಯಣಗೌಡ ಘೋಷಿಸಿದರು.

ಲಡಾಕ್‍ನ ಯುವ ಪ್ರತಿನಿಧಿ ಮಾಸೂಮ್, ಸಿಕ್ಕಿಂನ ಭೀಮ್ ಸುಭಾ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ವಿವಿಧ ರಂಗಗಳಲ್ಲಿ ಸಾಧನೆಗೈದ ಯುವಕರಿಗೆ ಸನ್ಮಾನ ಹಾಗೂ ರಾಷ್ಟ್ರೀಯ ಯುವಜನೋತ್ಸವದ ಪ್ರಶಸ್ತಿ ವಿಜೇತ ತಂಡಗಳಿಗೆ ಬಹುಮಾನಗಳನ್ನು ಹಸ್ತಾಂತರಿಸಲಾಯಿತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ರಾಜ್ಯ ಸರ್ಕಾರದ ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣಗೌಡ, ಗಣಿ, ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಮೇಯರ್ ಈರೇಶ ಅಂಚಟಗೇರಿ, ರಾಜ್ಯ ಜಂಗಲ್ ರೆಸಾರ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜು ಕೋಟೆಣ್ಣವರ ಮತ್ತಿತರರು ವೇದಿಕೆಯಲ್ಲಿದ್ದರು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಬಿಜೆಪಿ ಮುಖಂಡನಿಗೆ ಪೆನ್‌ಡ್ರೈವ್ ನೀಡಿದ್ದೆ; ಪ್ರಜ್ವಲ್ ಕಾರು ಚಾಲಕನಿಂದ ಹೇಳಿಕೆ

ಪ್ರಜ್ವ ರೇವಣ್ಣರದ್ದು ಎನ್ನಲಾದ ಅಶ್ಲೀಲ ವೀಡಿಯೊ ಪೆನ್ ಡ್ರೈವ್ ಬಿಜೆಪಿ ಮುಖಂಡರೂ ಆಗಿರುವ ವಕೀಲ ದೇವರಾಜೇಗೌಡ ಬಿಟ್ಟು ಬೇರೆ ಯಾರಿಗೂ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಅವಧಿ ಉಲ್ಲೇಖಿಸದೇ ಪ್ರಜ್ವಲ್ ರೇವಣ್ಣ ಜೆಡಿಎಸ್‌ನಿಂದ ಅಮಾನತು

ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಪ್ರಕರಣ ಸಂಬಂಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ರೇವಣ್ಣ, ಪ್ರಜ್ವಲ್ ಉಚ್ಚಾಟನೆಗೆ ಜೆಡಿಎಸ್ ಶಾಸಕರ ಪಟ್ಟು

ರಾಜ್ಯದ ಜನತೆಯ ಮುಂದೆ ತಲೆ ತಗ್ಗಿಸುವಂತಹ ಕೆಲಸ ಮಾಡಿದವರನ್ನು ರಾಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಘನತೆಯನ್ನು ಉಳಿಸಬೇಕಿದೆ ಎಂದು ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ: ಕುಮಾರಸ್ವಾಮಿ

ಜೆಡಿಎಸ್ ಸಂಸದ ಪ್ರಜಿ ಕುಮಾರಸ್ವಾಮಿ ಡ್ರೈವ್ ಪ್ರಕರಣದಲ್ಲಿ ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ' ಎಂದು ಮಾಧ್ಯಮಗಳ ಮುಂದೆ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ತ್ವರಿತಗತಿಯಲ್ಲಿ ತನಿಖೆ ನಡೆಸಿ, ವರದಿ ಸಲ್ಲಿಸಲು ಸೂಚನೆ: ಪರಮೇಶ್ವ‌ರ್

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿ, ವರದಿ ಸಲ್ಲಿಸುವಂತೆ ...