ಮುರ್ಡೇಶ್ವರ: ಇತ್ತೀಚೆಗೆ ಲಯನ್ಸ್ ಕ್ಲಬ್ ಮುರ್ಡೇಶ್ವರ ವತಿಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮುರ್ಡೇಶ್ವರದ ಬಿದ್ರಮನೆ ನಿವಾಸಿಯಾಗಿರುವ ಹನುಮಂತ ನಾಯ್ಕ ಇವರನ್ನು ಯಕ್ಷರಕ್ಷೆ ಮುರ್ಡೇಶ್ವರದಲ್ಲಿ ಸನ್ಮಾನಿಸಲಾಯಿತು. ಇವರು ಹದಿನಾಲ್ಕು ವರ್ಷಗಳಿಂದ ಭಾರತೀಯ ಸೇನೆಯಲ್ಲಿ ವಿವಿಧ ಸ್ಥಳಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ.
ಸನ್ಮಾನದ ತರುವಾಯ ಇವರೊಂದಿಗೆ ಲಯನ್ಸ್ ಕ್ಲಬ್ನ ಪದಾಧಿಕಾರಿಗಳು ಸಂವಾದ ನಡೆಸಿದರು. ಶ್ರೀಯುತರು ಭಾರತ ಸರ್ಕಾರವು ಸೈನಿಕರಿಗೆ ನೀಡುವ ವಿವಿಧ ರೀತಿಯ ಸೌಲಭ್ಯ, ವಿವಿಧ ರೀತಿಯ ಹುದ್ದೆಗಳು ಕುರಿತಾಗಿ ಹೆಮ್ಮೆಯಿಂದ ಹೇಳಿಕೊಂಡರು. ದೇಶ ಸೇವೆಗೆ ಇದು ಉತ್ತಮ ಅವಕಾಶವಾಗಿದ್ದು, ಇಂದಿನ ಯುವಕರಿಗೆ ಸೇನೆ ಸೇರಲು ಇರುವ ಹಲವಾರು ಅವಕಾಶಗಳ ಕುರಿತು ಮಾಹಿತಿ ನೀಡಿದರು. ಲಯನ್ ಸದಸ್ಯರಾದ ಡಾ.ಸುನೀಲ್ ಜತ್ತನ್ರವರು ಇವರನ್ನು ಪರಿಚಯಿಸಿದರು. ಕ್ಲಬ್ನ ಅಧ್ಯಕ್ಷರಾದ ಮಂಜುನಾಥ ನಾಯ್ಕ ಹಾಗೂ ಕ್ಲಬ್ನ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.