ಮುರ್ಡೇಶ್ವರ, ಜು ೧೦: ಜೀವನದ ಮೌಲ್ಯಗಳು ಕುಸಿಯುತ್ತಿರುವ ಇಂದಿನ ಆಧುನಿಕ ಜಗತ್ತಿನಲ್ಲಿ ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ, ಯುವಜನರಲ್ಲಿ ಹಾಗೂ ಸಾರ್ವಜನಿಕರಲ್ಲಿ ಬಿತ್ತುವ ಉದ್ದೇಶದಿಂದ ಗಾಂಧೀ ರಿಸರ್ಚ್ ಫೌಂಡೇಶನ್ ಜಲಗಾಂವ್,ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಬೆಂಗಳೂರು, ರಾಷ್ಟ್ರೀಯ ಸೇವಾ ಯೋಜನೆ ಬೆಂಗಳೂರು, ಮತ್ತು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ “ಗಾಂಧೀ ವಿಚಾರ ಸಂಸ್ಕಾರ ಪರೀಕ್ಷೆ”ಯನ್ನು ರಾಜ್ಯಾದಾದ್ಯಂತ ನಡೆಸಲಾಗುತ್ತದೆ.
ಹಿರಿಯ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ, ಡಿಪ್ಲೋಮಾ, ಐ.ಟಿ. ಐ ವಿದ್ಯಾರ್ಥಿಗಳಿಗಾಗಿ ಒಂದು ಹಂತದಲ್ಲಿ ಹಾಗೂ ಪದವಿ ವಿದ್ಯಾರ್ಥಿಗಳಿಗಾಗಿ ಮತ್ತೊಂದು ಹಂತದಲ್ಲಿ ಈ ಪರೀಕ್ಷೆಯನ್ನು ನಡೆಸಲಾಗುವುದು.
ಈ ಪರೀಕ್ಷೆಯು ಮೊದಲಿಗೆ ತಾಲೂಕಾ ಹಂತದಲ್ಲಿ ನಡೆಯುತ್ತದೆ. ಹಿರಿಯ ಪ್ರಾಥಮಿಕ 5 ನೇ ತರಗತಿಯಿಂದ 7 ನೇ ತರಗತಿಯವರಿಗೆ “ನಮ್ಮ ಗಾಂಧಿ ತಾತ ” ಪುಸ್ತಕವನ್ನು ರೂ.20/- ನೊಂದಣ ಫಿನೊಂದಿಗೆ ನೀಡಲಾಗುವುದು.8 ನೇ ತರಗತಿಯಿಂದ 12 ನೇ ತರಗತಿಯವರಿಗೆ “ನನ್ನ ಜೀವನ ಕತೆ””ಪುಸ್ತಕವನ್ನು ರೂ.40/- ನೊಂದಣ ಫಿನೊಂದಿಗೆ ನೀಡಲಾಗುವುದು.
ಈ ಪರೀಕ್ಷೆಗಾಗಿ ನೊಂದಾಯಿಸಿಕೊಳ್ಳಲು ಜಿಲ್ಲೆಯ ಎಲ್ಲಾ ಶಾಲೆ, ಕಾಲೇಜುಗಳಿಂದ ಮುಖ್ಯೋಪಾದ್ಯಾಯರು, ಪ್ರಾಚಾರ್ಯರ ಮೂಲಕ ಆಸಕ್ತಿ ಇರುವ ವಿದ್ಯಾರ್ಥಿಗಳು ನೊಂದಣ ಫಿಯನ್ನು ದಿನಾಂಕ :-08/07/2017 ರಿಂದ 20/07/2017 ರ ವರೆಗೆ ಸಲ್ಲಿಸಬೇಕು, ನಂತರ ಪರೀಕ್ಷೆಗೆ ಸಂಬಂಧಿಸಿದ ವಿದ್ಯಾರ್ಥಿಗಳಿಗೆ ಅವರ ಮಟ್ಟಕ್ಕೆ ಹೊಂದುವ ಗಾಂಧೀಜಿಯವರನ್ನು ಕುರಿತ ಪುಸ್ತಕ ಒದಗಿಸಲಾಗುವುದು. ಪುಸ್ತಕದ ಬೆಲೆಯನ್ನು ಮಾತ್ರ ನೊಂದಣ ಶುಲ್ಕವಾಗಿ ಸಂಗ್ರಹಿಸಲಾಗುತ್ತದೆ. ಪ್ರತಿ ತಾಲೂಕಿನಲ್ಲಿ ಕನಿಷ್ಠ ನೂರು ವಿದ್ಯಾರ್ಥಿಗಳಿಗೆ ಒಂದು ಪರೀಕ್ಷೆ ಕೇಂದ್ರ ತೆರೆಯಲಾಗುವುದು. 16 ಶನಿವಾರ ಸಪ್ಟೆಂಬರ್ 2017 ರಂದು ಪರೀಕ್ಷೆಯನ್ನು ನಡೆಸಲಾಗುವುದು, ವಿದ್ಯಾರ್ಥಿಗಳು ಆ ಪುಸ್ತಕವನ್ನು ಓದಿ ನಿಗದಿಪಡಿಸಿದ ದಿನಾಂಕದಂದು ಪರೀಕ್ಷೆಗೆ ಹಾಜರಾಗಬೇಕೆಂದು ತಿಳಿಸಲಾಗಿದೆ. ಪರೀಕ್ಷೆ ಅವಧಿ 1 ಗಂಟೆ ಇದ್ದು ಪ್ರಾಥಮಿಕ ವಿಭಾಗಕ್ಕೆ 50 ಅಂಕಗಳು, ಫ್ರೌಢ ಶಾಲೆ ಮತ್ತು ಪದವಿ ಪೂರ್ವ ವಿಭಾಗಕ್ಕೆ 60 ಅಂಕಗಳು ಇದರಲ್ಲಿ ಅಬ್ಜೆಕ್ಟೀವ್ 40,50 ಅಂಕಗಳು ಮತ್ತು 10 ಅಂಕ ವಿವರಿಸಿ ಬರೆಯುವುದು ಇರುತ್ತದೆ.
ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣ ಪತ್ರ ಜೊತೆಗೆ ಕೇಂದ್ರಕ್ಕೆ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಥಮ , ದ್ವಿತೀಯ , ತೃತೀಯ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ಹಾಗೂ ಪರೀಕ್ಷೆಗೆ ಕುಳಿತ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು. ಪರೀಕ್ಷೆಯು ಕನ್ನಡ, ಇಂಗ್ಲೀಷ ಹಾಗೂ ಹಿಂದಿ ಭಾಷೆಗಳಲ್ಲಿ ಬರೆಯಬಹುದು.
ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಅಹ್ವಾನಿಸಿ ಗೌರವಿಸಲಾಗುವುದು. ಕಳೆದ ವರ್ಷ ಉತ್ತರಕನ್ನಡ ಜಿಲ್ಲೆಯಿಂದ 1200 ವಿದ್ಯಾರ್ಥಿಗಳು ಪರೀಕ್ಷೆ ಬೆರೆದಿದ್ದು ಇದರಲ್ಲಿ ಭಟ್ಕಳ ತಾಲೂಕಿನಲ್ಲಿ 690 ವಿದ್ಯಾರ್ಥಿಗಳು ಪರೀಕ್ಷೆ ಬರೆದು ಜಿಲ್ಲೆಗೆ 6 ಬಂಗಾರದ ಪದಕ, 7 ಕಂಚಿನ ಪದಕ ಪಡೆದು ಭಟ್ಕಳ ತಾಲೂಕ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುತ್ತದೆ. ಮತ್ತು ರಾಜ್ಯ ಮಟ್ಟದಲ್ಲಿ ಮುರ್ಡೇಶ್ವರದ ಕೆ. ಮರಿಸ್ವಾಮಿ ಇವರಿಗೆ ರಾಜ್ಯದ ಉತ್ತಮ ಸಂಚಾಲಕರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಇವರಿಗೆ ಸಹಕಾರ ನೀಡಿದ ಪ್ರಾಚಾರ್ಯರಾದ ಎ.ಬಿ ರಾಮರಥ ಶಿರಾಲಿ, ಉಪಪ್ರಾಚಾರ್ಯರಾದ ಶ್ರೀನಾಥ ಪೈ ಭಟ್ಕಳ, ಮುಖ್ಯೋಪಾಧ್ಯಾಯರಾದ ಡಾ. ಸುರೇಶ ಶೆಟ್ಟಿ, ಮುರ್ಡೇಶ್ವರ, ತಿಮ್ಮಪ್ಪ ಜಿ ನಾಯ್ಕ ತೆರ್ನಮಕ್ಕಿ, ಸಿಸ್ಟರ್ ಸರೀತಾ ಗೊನ್ಸಾಲಿಸ್ ಭಟ್ಕಳ, ಹಾಗೂ ಶಿಕ್ಷಕರಾದ ಪಾಂಡುರಂಗ ಅಳ್ವೆಗದ್ದೆ ಇವರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಗಿದೆ. ಪರೀಕ್ಷಗೆ ಸಬಂಧಿಸಿದಂತೆ ಆನ್ಲೈನ್ ನಲ್ಲಿ ನೊಂದಣ ಮಾಹಿತಿಗಾಗಿ ವೆಬ್ಸೈಟ್ www.gandhifoundation.net ನೋಡಿರಿ.
ಹೆಚ್ಚಿನ ಮಾಹಿತಿಗಾಗಿ ತಾಲೂಕಾ ಹಾಗೂ ಜಿಲ್ಲಾ ಸಂಚಾಲಕರಾದ ಕೆ.ಮರಿಸ್ವಾಮಿ (9448235284) ಇವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Read These Next
ಮದ್ಯಾಹ್ನ ೩ ಗಂಟೆ ವೇಳೆಗೆ ಶಿರಸಿಯಲ್ಲಿ ಅತಿ ಹೆಚ್ಚು ಶೇ.೬೦ ಕಾರವಾರ ಅತಿಕಡಿಮೆ ಶೇ.೫೪ ಮತದಾನ
ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಶೇ. ೫೪.೯೭ ಮತದಾನ
ಸಾವಿಷ್ಕಾರ್ ಫೆಸ್ಟ್; ಅಂಜುಮನ್ ವಿದ್ಯಾರ್ಥಿಗಳು ಚಾಂಪಿಯನ್
ಭಟ್ಕಳ: ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳಾದ ಮೊಹಮ್ಮದ್ ಇಸ್ಮಾಯಿಲ್ (4ನೇ ವರ್ಷದ ...
ಐಸಿಎಸ್ಇ ಪರೀಕ್ಷೆಯಲ್ಲಿ ವಿದ್ಯಾಂಜಲಿ ಶಾಲೆಯ ಸಾಧನೆ
ಶಾಲೆಯ ವಿದ್ಯಾರ್ಥಿಗಳಾದ ಅನುಷ್ಕಾ ನಾಗರಾಜ ದೇಶಭಂಡಾರಿ 94.80%, ಪೂರ್ಣಿಮಾ ಭೋಸಲೆ 94.60%, ಶಮಂತ್ ಕುಮಾರ ನಾಯ್ಕ 91.60%, ಅವನಿ ಶ್ರೀನಿವಾಸ ಪಡಿಯಾರ ...
ಐ.ಸಿ.ಎಸ್.ಇ ೧೦ನೇ ತರಗತಿ ಫಲಿತಾಂಶ ಪ್ರಕಟ; ನ್ಯೂ ಶಮ್ಸ್ ಸ್ಕೂಲ್ ಶೇ.೧೦೦ ಫಲಿತಾಂಶ
ಒಟ್ಟು ೮೫ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ೨೮ ವಿದ್ಯಾರ್ಥಿಗಳು ಉನ್ನತ ...
ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...
ಕಾರವಾರ: ಮದವಣಗಿತ್ತಿಯಂತೆ ಕಂಗೊಳಿಸುತ್ತಿರುವ ಜಿಲ್ಲೆಯ ಮತಗಟ್ಟೆಗಳು
ಮತದಾನದ ದಿನವನ್ನು ಹಬ್ಬದಂತೆ ಆಚರಿಸಿ ಎನ್ನುವುದು ಚುನಾವಣಾ ಆಯೋಗದ ಆಶಯ. ಅದಕ್ಕೆ ಪೂರಕವಾಗಿ ಮತಗಟ್ಟೆಗಳಲ್ಲಿ ಮತದಾರರಿಗೆ ಯಾವುದೇ ...
ಪದವಿಧರ ಕ್ಷೇತ್ರ ಚುನಾವಣೆ: ಸಂಚಾರಿ ವಿಚಕ್ಷಣಾ ತಂಡಗಳ ರಚನೆ
ಧಾರವಾಡ : ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಅಕ್ಟೋಬರ್ 28 ರಂದು ನಡೆಯುವ ಹಿನ್ನೆಲೆಯಲ್ಲಿ ಸಮಾಜ ...
ಪ್ರಜಾಸತ್ತೆಯ ಬಂಧನ!
ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...
ಚಿಂದಿ ಆಯುವ ಹಕ್ಕು
ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...
ಜಿದ್ದಾ: ಐಎಫ್ಎಫ್ ಕುಟುಂಬ ಸಮ್ಮಿಲನ “ ಸಂಭ್ರಮ-2019” ವಿಜೃಂಭಣೆಯಿಂದ ಸಂಭ್ರಮಿಸಿದ ಅನಿವಾಸಿ ಕನ್ನಡಿಗರು
ಜಿದ್ದಾ: ಐಎಫ್ಎಫ್ ಕುಟುಂಬ ಸಮ್ಮಿಲನ “ ಸಂಭ್ರಮ-2019” ವಿಜೃಂಭಣೆಯಿಂದ ಸಂಭ್ರಮಿಸಿದ ಅನಿವಾಸಿ ಕನ್ನಡಿಗರು.
’ದಲಿತ’ ಪದವನ್ನು ’ಪರಿಶಿಷ್ಟ ಜಾತಿ’ ಎಂಬ ಅರ್ಥಕ್ಕೆ ಸೀಮಿತಗೊಳಿಸಬಾರದು
ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆಯು ಇನ್ನು ಮುಂದೆ ಮಾಧ್ಯಮಗಳು ದಲಿತ ಎಂಬ ಪದವನ್ನು ಬಳಸಬಾರದೆಂದು ಇತ್ತೀಚೆಗೆ ಸಲಹಾತ್ಮಕ ...
ನಿಜಕ್ಕೂ ಸಾದಿಯಾ ಯಾರು?
ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...