೭ನೇ ತರಗತಿ ವಿದ್ಯಾರ್ಥಿ ನೇಣಿಗೆ ಶರಣು

Source: S O News service | By Staff Correspondent | Published on 22nd February 2017, 7:58 PM | Coastal News | Don't Miss |

ಮುಂಡಗೋಡ ; ತನಗೆ ಜಾತ್ರೆಗೆ ಕರೆದುಕೊಂಡು ಹೋಗಿಲ್ಲಾ ಎಂದು ೭ ತರಗತಿ ವಿದ್ಯಾರ್ಥಿ ಬೇಸರಿಸಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡ ಘಟನೆ ತಾಲೂಕಿನ ಮೈನಳ್ಳಿ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. 

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಮೈನಳ್ಳಿ ಗ್ರಾಮದ ಕಿರಣ ಫಕೀರಪ್ಪ ವಡ್ಡರ(೧೪), ಎಂದು ಗುರುತಿಸಲಾಗಿದೆ

ಮೃತನು ೭ ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದ್ದು, ಬುಧವಾರ ಶಾಲೆಗೆ ಹೋಗದೇ ಮನೆಯಲ್ಲಿದ್ದ ಎನ್ನಲಾಗಿದ್ದು ಮಧ್ಯಾಹ್ನ ಈತನ ತಂದೆ ಹಾನಗಲ್ ಜಾತ್ರೆಗೆ ಹೋಗುತ್ತಿದ್ದ ವಿಷಯ ಗೊತ್ತಾಗಿ ತಾನೂ ಜಾತ್ರೆಗೆ ಬರುವುನೆಂದು  ಹಠ ಹಿಡಿದಿದ್ದನು ಎನ್ನಲಾಗಿದೆ. 

ತಂದೆ ಫಕೀರಪ್ಪ ನೀನು ಬರವುದು ಬೇಡ ಪರೀಕ್ಷೆ ಇದೆ ಈ ಸಮಯದಲ್ಲಿ ನಿನ್ನನು ಕರೆದುಕೊಂಡು ಹೋದರೆ ನಿನ್ನ ಅಭ್ಯಾಸ ಹಾಳಾಗುತ್ತದೆ ಎಂದು ಬುದ್ದಿವಾದ ಹೇಳಿ ಹೋದ ಇದನ್ನೆ ಮನಸ್ಸಿಗೆ ಹಚ್ಚಿಕೊಂಡು ತನಗೆ ಜಾತ್ರೆಗೆ ಕರೆದುಕೊಂಡು ಹೋಗಿಲ್ಲಾ ಎಂದು ಮನನೊಂದು ತಮ್ಮ ಮನೆಯ ಅಡುಗೆ ಕೋಣೆಯ ಎಳೆಗೆ ಪ್ಲಾಸ್ಟಿಕ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎಂದು ಈತನ ತಂದೆ ಫಕೀರಪ್ಪ ಮುಂಡಗೋಡ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು  ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. 
 

Read These Next

ಕಾರವಾರ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ಹತ್ತೂವರೆ ಸಾವಿರ: ಸೈಲ್

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಗೆಲ್ಲಿಸಿದರೆ ತಿಂಗಳಿಗೆ ಹತ್ತೂವರೆ ಸಾವಿರ ಬಡ ಮಹಿಳೆಯರ ಖಾತೆಗೆ ಬರಲಿದೆ. ಈ ಅವಕಾಶವನ್ನ ...

ಭಟ್ಕಳದ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ - ಡಾ. ದಿನೇಶ್ ಗಾಂವ್ಕರ್

೨೦೨೪- ಶಿಕ್ಷಕ ಶೀರ್ಷಿಕೆ ಅಡಿಯಲ್ಲಿ ಅಂಜುಮಾನ್ ತಾಂತ್ರಿಕ ವಿದ್ಯಾಲಯದಲ್ಲಿ ಕನ್ನಡ ವೇದಿಕೆಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ...