ಪ್ಯಾರಾಮೋಟಾರ್ ರೈಡ್ ವೇಳೆ ಅವಘಢ. ಸಮುದ್ರಕ್ಕೆ ಬಿದ್ದು ಪ್ರವಾಸಿಗ ದುರ್ಮರಣ. ಪೈಲೆಟ್ ಪಾರು.
ಕಾರವಾರ : ಕಾರವಾರ ಪ್ರವಾಸಕ್ಕೆ ಬಂದಿದ್ದ ವ್ಯಕ್ತಿಯೋರ್ವ ಹಾರುತ್ತಿರುವ ಪ್ಯಾರಾಮೋಟರನಿಂದ ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ರವೀಂದ್ರನಾಥ ಟಾಗೋರ್ ಕಡಲತೀರದಲ್ಲಿ ನಡೆದಿದೆ.
ಆಂದ್ರ ಮೂಲದ ಮಧುಸೂದನ ರೆಡ್ಡಿ(56) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಕದಂಬ ನೌಕಾನೆಲೆ ಕಮಾಂಡೆಂಟ್ ಆಗಿದ್ದ ಆಂಧ್ರ ಮೂಲದ ಮಧುಸೂದನ ಶುಕ್ರವಾರ ಸಂಜೆ ಬೆಂಗಳೂರಿನಿಂದ ಬಂದಿದ್ದ ತನ್ನ ಸ್ನೇಹಿತರೊಂದಿಗೆ ಬಂದಿದ್ದರು. ಕಡಲತೀರದಲ್ಲಿ ಆಕರ್ಷಣೆಯಾಗಿದ್ದ ಪ್ಯಾರಾಮೋಟರ್ ಏರಲು ಮನಸ್ಸಾಗಿದ್ದರಿಂದ ಸ್ನೇಹಿತರು ಮೂವರು ಆಗಸದಲ್ಲಿ ರೈಡ್ ಮಾಡಿ ವಾಪಾಸ್ಸಾಗಿದ್ದರು. ಕೊನೆಯದಾಗಿ ಮಧುಸೂದನ್ ರೈಡ್ ಮಾಡುತ್ತಿದ್ದ ವೇಳೆ ಗಾಳಿಯ ವೆಡಗ ಹೆಚ್ಚಾಗಿದ್ದರಿಂದ ಮೋಟಾರ್ನಲ್ಲಿ ತಾಂತ್ರಿಕ ದೋಷ ಉಂಟಾಗಿದೆ. ಹೀಗಾಗಿ ಸಮುದ್ರದಲ್ಲಿ ಪೈಲೆಟ್ ಮತ್ತು ಮಧುಸೂದನ್ ಬಿದ್ದಿದ್ದಾರೆ.
ಘಟನೆಯಲ್ಲಿ ಪೈಲಟ್ ವಿದ್ಯಾಧರ ವೈದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ಯಾರಾ ಮೋಟಾರ್ ಬಿದ್ದಾಕ್ಷಣ ಸ್ಥಳೀಯ ಮೀನುಗಾರರು ಮತ್ತು ಲೈಪ್ವಗಾರ್ಡ್ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಮಾಡಿದರಾದರೂ ಪ್ರಯೋಜನವಾಗಲಿಲ್ಲ.
ಕಾರವಾರ ನಗರಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.