ಕೋಲಾರ,ಜು.12: ಪೊಲೀಸ್ ಪಬ್ಲಿಕ್ ಪ್ರೆಸ್ ದಿನಪತ್ರಿಕೆಯ ವಾರ್ಷಿಕೋತ್ಸವ ಸಮಾರಂಭವನ್ನು ನಗರದ ಪತ್ರಕರ್ತರ ಭವನದಲ್ಲಿ ಆಯೋಜಿಸಲಾಗಿತ್ತು.
ಡಿ.ವೈ.ಎಸ್.ಪಿ ಅಬ್ದುಲ್ ಸತ್ತಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಪೊಲೀಸರ ಮತ್ತು ಸಾರ್ವಜನಿಕರ ಸಂಬಂಧ ಉತ್ತಮವಾಗಿರಬೇಕು. ಆಗ ಮಾತ್ರ ಸಮಾಜದಲ್ಲಿ ಭ್ರಷ್ಟಾಚಾರ, ಕಳ್ಳತನ ಇನ್ನಿತರೆ ಘಟನೆಗಳಿಗೆ ಕಡಿವಾಣ ಸಾಧ್ಯ ಎಂದು ತಿಳಿಸಿದರು.
ಪೊಲೀಸ್ ಪಬ್ಲಿಕ್ ಪ್ರೆಸ್ನ ಚೀಫ್ ಎಡಿಟರ್ ಪವನ್ಕುಮಾರ್ ಬೂತ್ ಮಾತನಾಡುತ್ತಾ ಸಾರ್ವಜನಿಕರು ಪೊಲೀಸ್ ಠಾಣೆಗಳಲ್ಲಿ ದೂರು ನೀಡಲು ಹೋದಾಗ ದೂರು ಸ್ವೀಕರಿಸಲು ನಿರಾಕರಿಸಿದ್ದಲ್ಲಿ ನಮ್ಮ ಪೊಲೀಸ್ ಪಬ್ಲಿಕ್ ಪ್ರೆಸ್ ಸಹಾಯವಾಣಿ ಸಂಖ್ಯೆಗೆ 1800115100 ಕರೆ ಮಾಡಿದಲ್ಲಿ ಕೂಡಲೇ ಅವರಿಗೆ ಸಹಾಯ ಹಸ್ತ ಮಾಡುವುದರೊಂದಿಗೆ ಅವರಿಗೆ ನ್ಯಾಯ ಸಿಗುವಂತೆ ಮಾಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ವರದಿಗಾರರಾದ ಉಸ್ಮಾನ್ಗನಿ, ಸಲ್ಮಾಬೇಗಂ, ಕೋಲಾರ ಜಿಲ್ಲಾ ವರದಿಗಾರರಾದ ಅಯಾಜ್ಉದ್ದೀನ್ ಆರ್.ಕೆ, ಗಣೇಶನ್, ಪೀರದೋಸ್ಪಠಾಣ್ ಎಲ್ಲಾ ತಾಲೂಕಿನ ವರದಿಗಾರರು ಉಪಸ್ಥಿತರಿದ್ದರು.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ