ಕೋಲಾರ,ಜು.20: ಜಿಲ್ಲೆಯ ಬರಡು ನೆಲದಲ್ಲಿ ಹಸಿರು ಬೆಳೆಸುವ ಪ್ರಯತ್ನಕ್ಕೆ ಮುಂದಾಗುವ ನಿಟ್ಟಿನಲ್ಲಿ ಆರಣ್ಯ ಮಾಯಾ ಜಿಲ್ಲೆಯನ್ನಾಗಿ ಮಾಡಲು ಶ್ರಮಿಸಲಾಗುತ್ತಿದೆ ಎಂದು ಬೆಂಗಳೂರು ರೋಟರಿ ಆರ್ಚಡಾಸ್ ಅಧ್ಯಕ್ಷ ಅಲೀಂ ಉಲ್ಲಾಖಾನ್ ಹೇಳಿದರು.
ತಾಲೂಕಿನ ಗುಡ್ಡನಾಪುರ ಸುತ್ತಮುತ್ತಲ ಆರಣ್ಯ ಪ್ರದೇಶದಲ್ಲಿ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಸಸಿ ಮತ್ತು ಬೀಜದುಂಡೆ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಮನುಷ್ಯರ ಅತಿಯಾದ ಆಸೆಯಿಂದ ಆಳಿವಿನ ಅಂಚಿಗೆ ತಲುಪಿರುವ ಪರಿಸರವನ್ನ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ದೆಸೆಯಲ್ಲಿ ಜನರಿಗೆ ಪರಿಸರದ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡಲಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚಿನ ಸಸಿಗಳನ್ನು ಮತ್ತು ಮೂವತ್ತು ಸಾವಿರಕ್ಕೂ ಹೆಚ್ಚು ಬೀಜದುಂಡೆಗಳನ್ನ ಹಾಕುವ ಜತೆಗೆ ಸಾರ್ವಜನಿಕರು ತಾಲೂಕಿನ ಪ್ರತಿ ಗ್ರಾಪಂ ವ್ಯಾಪ್ತಿಗೆ ಬರುವ ಸರ್ಕಾರಿ ಜಾಗ ಹಾಗೂ ಗುಂಡು ತೋಪು, ಖಾಲಿ ನಿವೇಶನಗಳಲ್ಲಿ ಗಿಡಗಳನ್ನು ನೆಟ್ಟು ಪೆÇೀಷಣೆ ಮಾಡಲು ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ತಿಳಿಸಿದರು,
ರೋಟರಿ ಬೆಂಗಳೂರು ಆರ್ಚಡಾಸ್ ಸಂಸ್ಥೆ ಸದಸ್ಯ ನರೇಶ್ ಮಾತನಾಡಿ, ಪ್ರತಿಯೊಬ್ಬರು ಮರ ಗಿಡಗಳನ್ನು ಉಳಿಸಿ ಬೆಳೆಸಲು ಮುಂದಾಗಿ ಯುವಶಕ್ತಿಗೆ ಪರಿಸರದ ಮಹತ್ವವನ್ನು ತಿಳಿಸುವ ದೆಸೆಯಲ್ಲಿ ಕಾಡು ಬೆಳೆಸಲು ಅರಿವು ಮೂಡಿಸಬೇಕು ಎಂದರಲ್ಲದೆ ಇಂತಹ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅಂರ್ತಜಲವನ್ನು ಹೆಚ್ಚಿಸುವ ಕೆಲಸವನ್ನು ಸಂಸ್ಥೆಗಳು ಮಾಡಲು ಪಣತೊಟ್ಟಿದಿ ಎಂದರು.
ಹೆಚ್ಚುತ್ತಿರುವ ತಾಪಮಾನದಲ್ಲಿ ಸೂಕ್ತ ಸಮಯಕ್ಕೆ ಸರಿಯಾಗಿ ಮಳೆ ಬೆಳೆಯಾಗುವ ಹಾಗೆ ಮಾಡಲು ದಾರಿ ಪರಿಸರವನ್ನು ಉಳಿಸಿ ಬೆಳಸುವುದೊಂದೆ ಮಾರ್ಗೋಪಾಯವಾಗಿಬೇಕು ಎಂದು ತಿಳಿಸಿದರು.
ಪ್ರತಿಯೊಬ್ಬ ವ್ಯಕ್ತಿಯು ಒಂದೊಂದು ಸಸಿಯನ್ನು ನೆಟ್ಟು ನಶಿಸಿ ಹೋಗುತ್ತಿರುವ ಪರಿಸರ ಉಳಿಸಿ ಮಾನವ ಸಂಕುಲಕ್ಕೆ ಉಳಿದಿರುವ ದಾರಿ ದೀಪವಾಗಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿಗಳಾದ ಡಿ.ರವಿಶಂಕರ್, ನೀಲ್ ಜೋಸಫ್, ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ಡಿ.ಎಫ್ಓ ಶ್ರೀರಾಮ ಲಿಂಗೇಗೌಡ, ಸಮರ್ಥ ಭಾರತದ ಪ್ರತಿನಿಧಿ ತ್ಯಾಗರಾಜ ಉಪಸ್ಥಿತರಿದ್ದರು.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ