ಭಟ್ಕಳ: ತಾಲೂಕಿನಲ್ಲಿ ಕೊರೊನಾ ಲಾಕ್ಡೌನ್ನಿಂದ ಸ್ಥಗಿತಗೊಂಡಿದ್ದ ಕ್ರೀಡಾ ಚಟುವಟಿಕೆಗಳು ಇದೀಗ ನಿಧಾನವಾಗಿ ಚಿಗುರೊಡೆಯಲಾರಂಭಿಸಿವೆ.
ಕೊರೊನಾ ಲಾಕ್ಡೌನ್ ನಂತರ ಇದೇ ಮೊದಲ ಬಾರಿಗೆ ಇಲ್ಲಿನ ಕೆಎಚ್ಬಿ ಮೈದಾನದಲ್ಲಿ ರವಿವಾರ ಆಯೋಜಿಸಲಾದ ವಾಲಿಬಾಲ್ ಪಂದ್ಯಾವಳಿಗೆ ಉದ್ಯಮಿ ಅತೀಕ್ ಉರ್ರೆಹೆಮಾನ್ ಮುನಿರಿ ಚಾಲನೆ ನೀಡಿದರು. ಇರ್ಫಾನ್ ಮೋತಿಶಮ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಫಾ ಕೆ.ಎಮ್., ಅಬ್ದುಸ್ಸಲಾಮ್ ರುಕ್ನುದ್ದೀನ್, ಉಸ್ಮಾನ್ ಘನಿ, ಅಬ್ದುಲ್ ಬಾಕಿ ಖರೂರಿ, ಅಬ್ದುಬಾಸಿತ್ ಮೌಲೀಮ್, ಇರ್ಷಾದ್ ಮೊದಲಾದವರು ಉಪಸ್ಥಿತರಿದ್ದರು. ತಾಲೂಕಿನ ವಿವಿದೆಡೆಯಿಂದ 5 ತಂಡಗಳು ಭಾಗವಹಿಸಿದ್ದು, ಲೀಗ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.