ಕರ್ನಾಟಕ ಸರಕಾರದ ಆಹ್ವಾನದ ಮೇರೆಗೆ ಲಂಡನ್‌ನಿಂದ ಆಗಮಿಸಿದ್ದ ಲೇಖಕಿಯ ಬಂಧನ, ಗಡಿಪಾರು

Source: Vb | By I.G. Bhatkali | Published on 27th February 2024, 12:29 AM | State News | National News |

ಬೆಂಗಳೂರು: ಕರ್ನಾಟಕ ಸರಕಾರದ ಆಹ್ವಾನದ ಮೇರೆಗೆ 'ಸಂವಿಧಾನ ಹಾಗೂ ಭಾರತದ ಏಕತೆ' ಸಮಾವೇಶದಲ್ಲಿ ಉಪನ್ಯಾಸ ನೀಡಲು ಭಾರತಕ್ಕೆ ಆಗಮಿಸಿದ್ದ ಖ್ಯಾತ ಲೇಖಕಿ, ಕವಯತ್ರಿ ಹಾಗೂ ಸಾಮಾಜಿಕ ಕಾರ್ಯಕರ್ತೆ ನಿತಾಶಾ ಕೌಲ್ ಅವರನ್ನು ವಲಸೆ ಇಲಾಖೆಯ ಅಧಿಕಾರಿಗಳು ಶುಕ್ರವಾರ ಬೆಂಗಳೂರಿನ ವಿಮಾನನಿಲ್ದಾಣದಲ್ಲಿ ವಶಕ್ಕೆ ತೆಗೆದುಕೊಂಡು, ಆನಂತರ ಅವರನ್ನು ಬ್ರಿಟನ್‌ಗೆ ಗಡಿಪಾರು ಮಾಡಿದ ಘಟನೆ ರವಿವಾರ ವರದಿಯಾಗಿದೆ.

ಬ್ರಿಟನ್‌ನ ವೆಸ್ಟ್‌ಮಿನ್‌ಸ್ಟರ್‌ ವಿವಿಯಲ್ಲಿ ಪ್ರೊಫೆಸ‌ರ್ ಆಗಿರುವ ನಿತಾಶಾ ಅವರು ಕಾಶ್ಮೀರಿ ಪಂಡಿತ ಸಮುದಾಯದವರಾಗಿದ್ದು, ಸಂಘಪರಿವಾರದ ನೀತಿಗಳನ್ನು ತೀಕ್ಷ್ಮವಾಗಿ ಟೀಕಿಸುತ್ತಾ ಬಂದಿದ್ದಾರೆ. ಫೆ.24 ಹಾಗೂ 25ರಂದು ಬೆಂಗಳೂರಿನಲ್ಲಿ ಆಯೋಜಿಸಲಾದ 'ಸಂವಿಧಾನ ಹಾಗೂ ಭಾರತದ ಏಕತೆ' ವಿಷಯದ ಕುರಿತ ಸಮಾವೇಶದಲ್ಲಿ ಉಪನ್ಯಾಸ ನೀಡಲು ಅವರನ್ನು ಕರ್ನಾಟಕ ಸರಕಾರ ಆಹ್ವಾನಿಸಿತ್ತು. ಶುಕ್ರವಾರ ಬೆಂಗಳೂರು ವಿಮಾನನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆಯೇ ಯಾವುದೇ ಕಾರಣ ನೀಡದೆ ವಲಸೆ ಇಲಾಖೆಯ ಅಧಿಕಾರಿಗಳು ತನ್ನನ್ನು ಬಂಧಿಸಿದ್ದಾರೆಂದು ನಿತಾಶಾ ಅವರು ಆಪಾದಿಸಿದ್ದಾರೆ. ಆರೆಸ್ಸೆಸ್ ವಿರುದ್ಧ ಟೀಕೆಗಳನ್ನು 2 ಮಾಡುತ್ತಿರುವುದಕ್ಕಾಗಿ ತನಗೆ ಭಾರತ ಪ್ರವೇಶವನ್ನು ನಿರಾಕರಿಸಲಾಗಿದೆಯೆ೦ದು ಅಧಿಕಾರಿಗಳು ತನಗೆ ಅನಧಿಕೃತವಾಗಿ ತಿಳಿಸಿದ್ದಾರೆಂದು ನಿತಾಶಾ ಆರೋಪಿಸಿದ್ದಾರೆ. ಸುಮಾರು 24 ತಾಸುಗಳ ಕಾಲ ತನ್ನನ್ನು ಬಂಧನದಲ್ಲಿರಿಸಲಾಗಿತ್ತು ಎಂದವರು ಹೇಳಿದ್ದಾರೆ. 

'ಕೆಲವು ವರ್ಷಗಳ ಹಿಂದೆ ಆರೆಸ್ಸೆಸ್ ವಿರುದ್ಧ ನಾನು ಮಾಡಿದ್ದ ಟೀಕೆಗಳ ಬಗ್ಗೆ ಈ ಅಧಿಕಾರಿಗಳು ಅನೌಪಚಾರಿಕವಾಗಿ ಪ್ರಸ್ತಾವಿಸಿದ್ದರು. ನನ್ನನ್ನು ರಾಜ್ಯ ಸರಕಾರವು ಆಹ್ವಾನಿಸಿತ್ತು. ಆದರೆ ಕೇಂದ್ರ ಸರಕಾರವು ನನಗೆ ಪ್ರವೇಶವನ್ನು ನಿರಾಕರಿಸಿದೆ'' ಎಂದು ನಿತಾಶಾ ಸಾಮಾಜಿಕ ಜಾಲತಾಣ 'ಎಕ್ಸ್' ನಲ್ಲಿ ಬರೆದಿದ್ದಾರೆ. ತಾನು ಬ್ರಿಟನ್ ಪಾಸ್‌ಪೋರ್ಟ್ ಹಾಗೂ ಸಾಗರೋತ್ತರ ಭಾರತೀಯ ಪೌರತ್ವ ಕಾರ್ಡ್ (ಒಸಿಐ) ಹೊಂದಿರುವುದಾಗಿಯೂ ಆಕೆ ಹೇಳಿದ್ದಾರೆ.

ತನ್ನನ್ನು ಬಂಧಿಸಿದ ಅಧಿಕಾರಿಗಳು ತನಗೆ ಮೂಲಭೂತ ಸೌಕರ್ಯಗಳನ್ನು ಕೂಡಾ ನಿರಾಕರಿಸಿದ್ದರು. ವಿಮಾನನಿಲ್ದಾಣದ ಅಧಿಕಾರಿಗಳಿಗೆ ಹಲವಾರು ಸಲ ಕರೆ ಮಾಡಿದ ಹೊರತಾಗಿಯೂ ಅವರು ನನಗೆ ಆಹಾರ, ನೀರು, ತಲೆದಿಂಬು ಹಾಗೂ ಹೊದಿಕೆಯನ್ನು ನೀಡಲು ನಿರಾಕರಿಸಿದರೆಂದು ಆಕೆ ಆಪಾದಿಸಿದ್ದಾರೆ.

ತನ್ನ ವಿರುದ್ದ ಕೇಂದ್ರ ಸರಕಾರದ ಕ್ರಮದ ಬಗ್ಗೆ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿರುವ ನಿತಾಶಾ ಅವರು, ಇಂತಹ ಲೋಪವನ್ನು ಸರಿಪಡಿಸದೆ ಇದ್ದಲ್ಲಿ, ನಾನು ದೇಶಭ್ರಷ್ಟ ಟಿಬೆಟಿಯನ್ನರು ಹಾಗೂ ಉಕ್ರೇನಿಗರು ಮತ್ತು ಇತಿಹಾಸದುದ್ದಕ್ಕೂ ಅತಾರ್ಕಿಕವಾದ ಅಧಿಕಾರದ ದಬ್ಬಾಳಿಕೆಗೆ ಒಳಗಾದ ಜನರ ಸಾಲಿಗೆ ಸೇರುತ್ತೇನೆ'' ಎಂದವರು ಎಕ್ಸ್ ಹೇಳಿದ್ದಾರೆ.

ಕೇಂದ್ರ ಸರಕಾರವನ್ನು ತೀವ್ರವಾಗಿ ಖಂಡಿಸಿದ ಅವರು, ನನ್ನ ಲೇಖನಿ ಹಾಗೂ ಪದಗಳಿಗೆ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವು ಯಾಕೆ ಹೆದರುತ್ತದೆ?. ರಾಜ್ಯ ಸರಕಾರದಿಂದ ಆಹ್ವಾನಿತಳಾದ ಪ್ರೊಫೆಸರ್‌ಗೆ ಸಂವಿಧಾನದ ಕುರಿತ ಸಮಾವೇಶದಲ್ಲಿ ಪಾಲ್ಗೊಳ್ಳಲು ಕೇಂದ್ರ ಸರಕಾರ ಅನುಮತಿ ನೀಡದಿರುವುದು ಹೇಗೆ ಸರಿ? ನಾವು ಪೋಷಿಸಿದ ಭಾರತವು ಇದೇನಾ? ಎಂದು ಆಕೆ ಪ್ರಶ್ನಿಸಿದ್ದಾರೆ.

Read These Next

ಶಿರೂರು ಗುಡ್ಡ ಕುಸಿತ; ಗಂಗಾವಳಿ ನದಿಯಲ್ಲಿ ಟ್ರಕ್ಕೊಂದು ಮುಳುಗಿರುವುದನ್ನಖಚಿತ ಪಡಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಅಂಕೋಲಾದ ಶಿರೂರಿನಲ್ಲಿ ಜುಲೈ 16ರಂದು ಸಂಭವಿಸಿದ ಭೂಕುಸಿತದಲ್ಲಿ ತಮ್ಮ ಟ್ರಕ್‌ನೊಂದಿಗೆ ನಾಪತ್ತೆಯಾಗಿದ್ದ ...

ಅಂಕೋಲಾ ಗುಡ್ಡ ಕುಸಿದು ಮೃತಪಟ್ಟ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರ; ಸರ್ಕಾರದಿಂದ ಘೋಷಣೆ

ಘಟನೆಯಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ 5ಲಕ್ಷ ರೂ.ಪರಿಹಾರ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ...

ಡೆಹ್ರಾಡೂನ್: ಕ್ರೈಸ್ತ ಪ್ರಾರ್ಥನಾ ಸಭೆಯ ಮೇಲೆ ಸಂಘ ಪರಿವಾರದಿಂದ ದಾಳಿ; ಏಳು ಜನರಿಗೆ ಹಲ್ಲೆ

ಸಂಘ ಪರಿವಾರ ಕಾರ್ಯಕರ್ತರ ಗುಂಪೊಂದು ರವಿವಾರ ಇಲ್ಲಿ ಕ್ರೈಸ್ತ ಪ್ರಾರ್ಥನಾ ಸಭೆ ನಡೆಯುತ್ತಿದ್ದ ಮನೆಯ ಮೇಲೆ ದಾಳಿ ನಡೆಸಿದೆ. ಕನಿಷ್ಠ ...

ಲೋಕಸಭಾ ಚುನಾವಣೆಯ ಬಳಿಕ ಮುಸ್ಲಿಮರ ವಿರುದ್ಧ ಗುಂಪು ದಾಳಿ ಪ್ರಕರಣದಲ್ಲಿ ಹೆಚ್ಚಳ; ಜಮಾಅತೆ ಇಸ್ಲಾಮೀ ಹಿಂದ್ ಕಳವಳ

ಹೊಸದಿಲ್ಲಿ : ದೇಶದಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರದ ಪ್ರಕರಣಗಳು ಅಧಿಕಗೊಂಡಿದ್ದು, ಅದರಲ್ಲೂ ಲೋಕಸಭಾ ಚುನಾವಣೆಯ ಬಳಿಕ ...

ಬ್ರಿಟಿಷ್ ಯುಗದ ಕಾನೂನುಗಳಿಗೆ ತೆರೆ; ಇಂದಿನಿಂದ ಮೂರು ನೂತನ ಕ್ರಿಮಿನಲ್ ಕಾಯ್ದೆಗಳು ಜಾರಿ

ಸೋಮವಾರ, ಜುಲೈ 1ರಂದು ಮೂರು ನೂತನ ಕ್ರಿಮಿನಲ್ ಕಾನೂನುಗಳು ದೇಶಾದ್ಯಂತ ಜಾರಿಗೊಳ್ಳಲಿದ್ದು ಬ್ರಿಟಿಷ್ ಯುಗದ ಕಾನೂನುಗಳು ಅಸ್ತಿತ್ವ ...