ಕಾರವಾರ : ನಗರಸಭೆ ಸಾಮಾನ್ಯ ಸಭೆಯಲ್ಲಿ ದೇವನಾಗರಿ ಲಿಪಿಯಲ್ಲಿ ನಾಮಫಲಕ ಹಾಕಲು ಠರಾವು.

Source: SO News | By Laxmi Tanaya | Published on 30th June 2022, 10:43 PM | Coastal News |

ಕಾರವಾರ : ವಿವಾದಕ್ಕೆ ಕಾರಣವಾಗಿದ್ದ ಕಾರವಾರ ನಗರಸಭೆಯ ಹಿಂದಿ ನಾಮಫಲಕದ ಬಗ್ಗೆ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ತೀವೃ ಚರ್ಚೆ ನಡೆಯಿತು.

ಈ ಹಿಂದೆ ಹಾಕಿದ್ದ ಕೊಂಕಣಿಗರ ದೇವನಾಗರಿ ಲಿಫಿಗೆ ಮಸಿ ಬಳಿದಿರುವುದಕ್ಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಕನ್ನಡ ಸಂಘಟನೆ ಹೆಸರಲ್ಲಿ ಕಾರವಾರದವರಲ್ಲದ ಹೊರಗಿನ ವ್ಯಕ್ತಿಗಳು ಗೊಂದಲ ಸೃಷ್ಟಿಸಿ ಇಲ್ಲಿನ ಜನರಲ್ಲಿ ಒಡಕು ಮುಡಿಸುತ್ತಿದ್ದಾರೆ ಎಂದು ಸಭೆಯಲ್ಲಿ ಕೆಲ ಸದಸ್ಯರು ಆರೋಪಿಸಿದರು.

ನಗರಸಭೆಯ ಯಾವ ಸದಸ್ಯರ ಅಭಿಪ್ರಾಯ ಪಡೆಯದೇ ಬೋರ್ಡ್ ಅಳವಡಿಸುವುದು ಸರಿಯಲ್ಲ. ವಿವಾದಕ್ಕೆ ಆಯುಕ್ತರು ಮತ್ತು ಅಧ್ಯಕ್ಷರೇ ಕಾರಣ ಎಂಬ ಆರೋಪವನ್ನ. ಸದಸ್ಯ ಗಣಪತಿ ನಾಯ್ಕ ಮಾಡಿದರು. ಇದಕ್ಕೆ ಉತ್ತರಿಸಿದ ಆಯುಕ್ತರಾದ ಆರ್ ಪಿ‌ ನಾಯ್ಕ ಅಧ್ಯಕ್ಷರ ಒಪ್ಪಿಗೆ ಪಡೆದೇ ಬೋರ್ಡ್ ಹಾಕಲಾಗಿದೆ ಎಂದರು.

ಕಾರವಾರದಲ್ಲಿ ಎಲ್ಲಾ ಜಾತಿ ಜನರು ಸೌಹಾರ್ಧತೆಯಿಂದಿದ್ದಾರೆ. ಹೀಗಾಗಿ ಭಾಷಾ ವಿಚಾರದಲ್ಲಿ ಮತ್ತೆ ಗಲಾಟೆಯಾಗೋದು ಬೇಡ. ನಾಮಫಲಕ ದೇವನಾಗರಿ ಲಿಫಿಯಲ್ಲಿರಬೇಕೆಂದು ಕೊಂಕಣಿ ಸಂಘಟನೆಗಳು ಮನವಿ ನೀಡಿದೆ. ಹೀಗಾಗಿ ಅಭಿಪ್ರಾಯ ನೀಡುವಂತೆ ಅಧ್ಯಕ್ಷ ರಾದ ನಿತಿನ್ ಪಿಕಳೆ ಹೇಳಿದಾಗ ಕೆಲ ಸದಸ್ಯರು ಎದ್ದು ನಿಂತು ಸ್ಥಳೀಯರಿಗೆ ಅನುಕೂಲವಾಗಲು ಕೊಂಕಣಿ ಸಾಮ್ಯತೆಯಲ್ಲಿ ಬರುವ ಹಾಗೆ ಬೋರ್ಡ್ ಬರೆಸುವಂತೆ ತಿಳಿಸಿದರು.

ಹೀಗಾಗಿ ಸಭೆಯಲ್ಲಿ ಒಮ್ಮತದ ಅಭಿಪ್ರಾಯದಂತೆ ದೇವನಾಗರಿ ಲಿಪಿಯಲ್ಲಿ ಬೋರ್ಡ್ ಬರೆಸುವಂತೆ ಠರಾವು ಮಾಡಲಾಯಿತು. ಕೊನೆಗೆ ಸರ್ಕಾರಕ್ಕೆ ಠರಾವು ಪ್ರತಿ ಕಳಿಸಿ ಅನುಮತಿ ಪಡೆಯಬೇಕೆಂದು ‌ತಿಳಿಸಲಾಯಿತು.

Read These Next

ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ರಾಸಾಯನಿಕ ಬಳಕೆ ಕುರಿತು ವ್ಯಾಪಕವಾಗಿ ಪರಿಶೀಲಿಸಿ : ಜಿಲ್ಲಾಧಿಕಾರಿ

ಕಾರವಾರ :ಜಿಲ್ಲೆಯಲ್ಲಿನ ಆಹಾರ ತಯಾರಿಕಾ ಘಟಕಗಳು, ಬೀದಿ ಬದಿ ವ್ಯಾಪಾರಿಗಳು ತಯಾರಿಸುವ ಆಹಾರ ಪದಾರ್ಥಗಳಲ್ಲಿ ಸಾರ್ವಜನಿಕರ ಆರೋಗ್ಯದ ...

ಮಳೆಗಾಲದಲ್ಲಿ ಮುನ್ನೆಚ್ಚರಿಕೆ; ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರವಹಿಸಲು ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ಸೂಚನೆ

ಮಳೆಗಾಲದಲ್ಲಿ ಕಂಡು ಬರಬಹುದಾದ ಡೆಂಗಿ, ಚಿಕುನ್ ಗುನ್ಯಾ, ಮಲೇರಿಯಾ, ಮಿದುಳು ಜ್ವರ ಮತ್ತಿತರ ರೋಗಗಳ ಲಕ್ಷಣಗಳು, ಅವುಗಳ ಹರಡುವಿಕೆ ಹಾಗೂ ...

ಸರ್ಕಾರದಿಂದ ಕೋಟಿಗಟ್ಟಲೆ ಅನುದಾನ ಬಂದರೂ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಭಟ್ಕಳ ತಾಲೂಕು

ನೀರಿನ ಸಮಸ್ಯೆಯಿಂದಾಗಿ ಭಟ್ಕಳದ ನಗರ ಮತ್ತು ಗ್ರಾಮೀಣ ಪ್ರದೇಶಗಳ ನಿವಾಸಿಗಳು ಟ್ಯಾಂಕರ್ ಮೂಲಕ ಸರಬರಾಜು ಮಾಡುವ ನೀರಿಗಾಗಿ ಸರತಿ ...