ಗೋಕರ್ಣ : ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಮುಖ್ಯ ಕಡಲತೀರದಲ್ಲಿ ಈಜಲು ಹೋಗಿದ್ದ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಅಂಕೋಲಾ ತಾಲೂಕಿನ ಅವರ್ಸಾ ಮೂಲದ ಅರವಿಂದ ಪಾಂಡುರಂಗ ಶೆಣೈ (45) ಮೃತ ದುರ್ದೈವಿ. ಕೆಲ ತಿಂಗಳಿಂದ ಅವರ್ಸಾದಲ್ಲಿಯೇ ಇದ್ದ ಅರವಿಂದ ಇಂದು ತನ್ನ ಹೆಂಡತಿಯೊಂದಿಗೆ ಗೋಕಣ೯ಕ್ಕೆ ಬಂದಿದ್ದ.
ಇಲ್ಲಿನ ಶ್ರೀ ಮಹಾಬಲೇಶ್ವರ ದೇವರ ದರ್ಶನ ಪಡೆದ ಬಳಿಕ ಈತ ಕಡಲತೀರಕ್ಕೆ ಹೋಗಿದ್ದ ಎನ್ನಲಾಗಿದೆ. ಬಳಿಕ ಸಮುದ್ರದಲ್ಲಿ ಈಜಾಡಲು ಮನಸ್ಸಾಗಿದ್ದರಿಂದ ಹೆಂಡತಿ ಬಳಿ ಹೇಳಿ ನೀರಿಗೆ ಇಳಿದಿದ್ದ. ಆದ್ರೆ ಅಲೆಯ ಸುಳಿಗೆ ಸಿಲುಕಿ ಸಾವನ್ನಪ್ಪಿದ್ದಾನೆ.. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.