ಭಟ್ಕಳ: ರಾತ್ರಿ ಮನೆಯಲ್ಲಿ ಮಲಗಿದ ವ್ಯಕ್ತಿಯಬ್ಬರ ಕುತ್ತಿತಿಗೆ ತಲವಾರು ಇಟ್ಟು ಮನೆ ದರೋಡೆಗೆ ಯತ್ನಿಸಿದ ಘಟನೆ ಸೋಮವಾರ ರಾತ್ರಿ ಮೂರು ಗಂಟೆಗೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಕಾರಗದ್ದೆ 1ನೇ ಕ್ರಾಸ್ ನಲ್ಲಿ ನಡೆದಿದ್ದು ಘಟನೆಗೆ ಸಂಬಧಿಸಿದಂತೆ ಪೊಲೀಸರು ವಿಚಾರಣೆಗಾಗಿ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸಲಾಹುದ್ದೀನ್ ಲೌನಾ ಎಂಬುವವರಿಗೆ ಸೇರಿದ ಮನೆಯಲ್ಲಿ ರಾತ್ರಿ ಸಮಯದಲ್ಲಿ ಮನೆಯ ಮೇಲ್ಛಾವಣಿಯಿಂದ ಒಳಗೆ ನುಗ್ಗಿದ ನಾಲ್ವರು ದರೋಡೆಕೋರರು ಮಲಗಿದ್ದ ಸಲಾಹುದ್ದೀನ್ ರ ಕತ್ತಿಗೆ ತಲವಾರು ಇಟ್ಟು ಮನೆಯಲ್ಲಿರುವ ಎಲ್ಲ ಆಭರಣ ಹಣವನ್ನು ತಂದುಕೊಡು ಎಂದು ಬೆದರಿಕೆ ಒಡ್ಡಿದ್ದು ಹೆದರಿಕೊಂಡ ಸಲಾಹುದ್ದೀನ್ ಮನೆಯಲ್ಲಿ ರೂ 19800 ರನ್ನು ತಂದು ಕೊಟ್ಟರು ಎನ್ನಲಾಗಿದೆ. ಆದರೆ ಇದಾವುದಕ್ಕೂ ತೃಪ್ತಿಪಟ್ಟುಕೊಳ್ಳದ ದರೋಡೆಕೋರರು ಮನೆಯನ್ನು ಸಂಪೂರ್ಣವಾಗಿ ಜಾಲಾಡಿದ್ದಾರೆ. ಯಾವುದೇ ಬೆಲೆಬಾಳುವ ಆಭರಣಗಳಾಗಲಿ ಹೆಚ್ಚಿನ ಹಣವನ್ನಾಗಲಿ ದೊರೆಯದೆ ಇದ್ದಾಗ ದರೋಡೆಕೋರರು ಪರಾರಿಯಾಗಿದ್ದಾರೆ. ನಾಲ್ವರಲ್ಲಿ ಇಬ್ಬರು ಕನ್ನಡ ಹಾಗೂ ಮತ್ತಿಬ್ಬರು ಉರ್ದುಭಾಷೆ ಮಾತನಾಡುತ್ತಿದ್ದರು ಎಂದು ಸಲಾಹುದ್ದೀನ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಶ್ವಾನದಳದಿಂದ ಪರಿಶೀಲನೆ:ದರೋಡೆ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಪೊಲೀಸರು ಮಂಗಳವಾರ ಬೆಳಿಗ್ಗೆ ಕಾರವಾರದಿಂದ ಪೊಲೀಸ್ ಶ್ವಾನ ದಳವನ್ನು ಕರೆಸಿ ಪರಿಶೀಲನೆ ನಡೆಸಿದ್ದಾರೆ.
ಭಟ್ಕಳದಂತ ಪಟ್ಟಣದಲ್ಲೂ ಸಿನಿಮೀಯ ರೀತಿಯಲ್ಲಿ ಮನೆ ದರೋಡೆ ನಡೆದಿದೆ ಎಂಬ ಸುದ್ದಿ ಊರೆಲ್ಲ ಹಬ್ಬಿಕೊಂಡಿದ್ದು ಆ ಭಾಗದಲ್ಲಿ ಜನರಲ್ಲಿ ಭಯ ಮತ್ತು ಆತಂಕವನ್ನುಂಟು ಮಾಡಿದೆ.
Read These Next
ಮದ್ಯಾಹ್ನ ೩ ಗಂಟೆ ವೇಳೆಗೆ ಶಿರಸಿಯಲ್ಲಿ ಅತಿ ಹೆಚ್ಚು ಶೇ.೬೦ ಕಾರವಾರ ಅತಿಕಡಿಮೆ ಶೇ.೫೪ ಮತದಾನ
ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಶೇ. ೫೪.೯೭ ಮತದಾನ
ಸಾವಿಷ್ಕಾರ್ ಫೆಸ್ಟ್; ಅಂಜುಮನ್ ವಿದ್ಯಾರ್ಥಿಗಳು ಚಾಂಪಿಯನ್
ಭಟ್ಕಳ: ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳಾದ ಮೊಹಮ್ಮದ್ ಇಸ್ಮಾಯಿಲ್ (4ನೇ ವರ್ಷದ ...
ಐಸಿಎಸ್ಇ ಪರೀಕ್ಷೆಯಲ್ಲಿ ವಿದ್ಯಾಂಜಲಿ ಶಾಲೆಯ ಸಾಧನೆ
ಶಾಲೆಯ ವಿದ್ಯಾರ್ಥಿಗಳಾದ ಅನುಷ್ಕಾ ನಾಗರಾಜ ದೇಶಭಂಡಾರಿ 94.80%, ಪೂರ್ಣಿಮಾ ಭೋಸಲೆ 94.60%, ಶಮಂತ್ ಕುಮಾರ ನಾಯ್ಕ 91.60%, ಅವನಿ ಶ್ರೀನಿವಾಸ ಪಡಿಯಾರ ...
ಐ.ಸಿ.ಎಸ್.ಇ ೧೦ನೇ ತರಗತಿ ಫಲಿತಾಂಶ ಪ್ರಕಟ; ನ್ಯೂ ಶಮ್ಸ್ ಸ್ಕೂಲ್ ಶೇ.೧೦೦ ಫಲಿತಾಂಶ
ಒಟ್ಟು ೮೫ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ೨೮ ವಿದ್ಯಾರ್ಥಿಗಳು ಉನ್ನತ ...
ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...
ಕಾರವಾರ: ಮದವಣಗಿತ್ತಿಯಂತೆ ಕಂಗೊಳಿಸುತ್ತಿರುವ ಜಿಲ್ಲೆಯ ಮತಗಟ್ಟೆಗಳು
ಮತದಾನದ ದಿನವನ್ನು ಹಬ್ಬದಂತೆ ಆಚರಿಸಿ ಎನ್ನುವುದು ಚುನಾವಣಾ ಆಯೋಗದ ಆಶಯ. ಅದಕ್ಕೆ ಪೂರಕವಾಗಿ ಮತಗಟ್ಟೆಗಳಲ್ಲಿ ಮತದಾರರಿಗೆ ಯಾವುದೇ ...
ಕಾರವಾರ ಮೀನು ಮಾರುಕಟ್ಟೆಯಲ್ಲಿ ಡಾ.ಅಂಜಲಿ ಮತ ಬೇಟೆ
ಕಾರವಾರ:ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ತಾಲೂಕಿನ ಮೀನು ಮಾರುಕಟ್ಟೆಯಲ್ಲಿ ಮತ ...
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ
ಮಂಗಳೂರು : ಉಗ್ರ ಸಂಘಟನೆಯ ಹೆಸರಲ್ಲಿ ಇಮೇಲ್ ಮೂಲಕ ಇಲ್ಲಿನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ...
ಮುಗಿಲೆತ್ತರಕ್ಕೆ ಏರಲಿ ಜಿಲ್ಲೆಯ ಖ್ಯಾತಿ : ಜಿಲ್ಲಾಧಿಕಾರಿ
ಕಾರವಾರ : ಸಾರ್ವತ್ರಿಕ ಲೋಕಸಭಾ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮತದಾನ ಜಾಗೃತಿಯ ಕುರಿತಂತೆ ಈಗಾಗಲೇ ಹಲವು ...
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...
ಕಾರವಾರ: ಗೊಂದಲಕ್ಕೆ ಒಳಗಾಗಬೇಡಿ, ಯಶಸ್ವಿ ಚುನಾವಣೆ ನಡೆಸಿ :ಜಿಲ್ಲಾಧಿಕಾರಿ
ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು, ತರಬೇತಿಯ ಅವಧಿಯಲ್ಲಿ ತಮ್ಮಲ್ಲಿರುವ ಎಲ್ಲಾ ಗೊಂದಲಗಳನ್ನು ಬಗೆಹರಿಸಿಕೊಂಡು, ...
ಕಾರವಾರ: ಟ್ರೆಕ್ಕಿಂಗ್ ಮೂಲಕ ಮತದಾನ ಜಾಗೃತಿ
ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸದಂತೆ, ಮೇ 7ರಂದು ನಡೆಯಲಿರುವ ಹಿನ್ನಲೆ ಜಿಲ್ಲೆಯಲ್ಲಿ ಮತದಾನದ ಪ್ರಮಾಣವನ್ನು ...