ಮನೆ ಮಾಲಿಕನ ಕುತ್ತಿಗೆಗೆ ತಲವಾರು ಇಟ್ಟು ದರೋಡೆಗೆ ಯತ್ನ;ನಾಲ್ವರು ವಶಕ್ಕೆ

Source: sonews | By Staff Correspondent | Published on 21st November 2017, 11:27 PM | Coastal News | Don't Miss |

ಭಟ್ಕಳ: ರಾತ್ರಿ ಮನೆಯಲ್ಲಿ ಮಲಗಿದ ವ್ಯಕ್ತಿಯಬ್ಬರ ಕುತ್ತಿತಿಗೆ ತಲವಾರು ಇಟ್ಟು ಮನೆ ದರೋಡೆಗೆ ಯತ್ನಿಸಿದ ಘಟನೆ ಸೋಮವಾರ ರಾತ್ರಿ ಮೂರು ಗಂಟೆಗೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಕಾರಗದ್ದೆ 1ನೇ ಕ್ರಾಸ್ ನಲ್ಲಿ ನಡೆದಿದ್ದು ಘಟನೆಗೆ ಸಂಬಧಿಸಿದಂತೆ ಪೊಲೀಸರು ವಿಚಾರಣೆಗಾಗಿ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸಲಾಹುದ್ದೀನ್ ಲೌನಾ ಎಂಬುವವರಿಗೆ ಸೇರಿದ ಮನೆಯಲ್ಲಿ ರಾತ್ರಿ ಸಮಯದಲ್ಲಿ ಮನೆಯ ಮೇಲ್ಛಾವಣಿಯಿಂದ ಒಳಗೆ ನುಗ್ಗಿದ ನಾಲ್ವರು ದರೋಡೆಕೋರರು ಮಲಗಿದ್ದ ಸಲಾಹುದ್ದೀನ್ ರ ಕತ್ತಿಗೆ ತಲವಾರು ಇಟ್ಟು ಮನೆಯಲ್ಲಿರುವ ಎಲ್ಲ ಆಭರಣ ಹಣವನ್ನು ತಂದುಕೊಡು ಎಂದು ಬೆದರಿಕೆ ಒಡ್ಡಿದ್ದು ಹೆದರಿಕೊಂಡ ಸಲಾಹುದ್ದೀನ್ ಮನೆಯಲ್ಲಿ ರೂ 19800 ರನ್ನು ತಂದು ಕೊಟ್ಟರು ಎನ್ನಲಾಗಿದೆ. ಆದರೆ ಇದಾವುದಕ್ಕೂ ತೃಪ್ತಿಪಟ್ಟುಕೊಳ್ಳದ ದರೋಡೆಕೋರರು ಮನೆಯನ್ನು ಸಂಪೂರ್ಣವಾಗಿ ಜಾಲಾಡಿದ್ದಾರೆ. ಯಾವುದೇ ಬೆಲೆಬಾಳುವ ಆಭರಣಗಳಾಗಲಿ ಹೆಚ್ಚಿನ ಹಣವನ್ನಾಗಲಿ ದೊರೆಯದೆ ಇದ್ದಾಗ ದರೋಡೆಕೋರರು ಪರಾರಿಯಾಗಿದ್ದಾರೆ. ನಾಲ್ವರಲ್ಲಿ ಇಬ್ಬರು ಕನ್ನಡ ಹಾಗೂ ಮತ್ತಿಬ್ಬರು ಉರ್ದುಭಾಷೆ ಮಾತನಾಡುತ್ತಿದ್ದರು ಎಂದು ಸಲಾಹುದ್ದೀನ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. 
ಶ್ವಾನದಳದಿಂದ ಪರಿಶೀಲನೆ:ದರೋಡೆ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಪೊಲೀಸರು ಮಂಗಳವಾರ ಬೆಳಿಗ್ಗೆ ಕಾರವಾರದಿಂದ ಪೊಲೀಸ್ ಶ್ವಾನ ದಳವನ್ನು ಕರೆಸಿ ಪರಿಶೀಲನೆ ನಡೆಸಿದ್ದಾರೆ. 
ಭಟ್ಕಳದಂತ ಪಟ್ಟಣದಲ್ಲೂ ಸಿನಿಮೀಯ ರೀತಿಯಲ್ಲಿ ಮನೆ ದರೋಡೆ ನಡೆದಿದೆ ಎಂಬ ಸುದ್ದಿ ಊರೆಲ್ಲ ಹಬ್ಬಿಕೊಂಡಿದ್ದು ಆ ಭಾಗದಲ್ಲಿ ಜನರಲ್ಲಿ ಭಯ ಮತ್ತು ಆತಂಕವನ್ನುಂಟು ಮಾಡಿದೆ.
 

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...