ಭಟ್ಕಳ:-ಮಂಗಳೂರು ಕಡೆಯಿಂದ ಭಟ್ಕಳ ಕಡೆಗೆ ಅತಿವೇಗದಲ್ಲಿ ಬರುತಿದ್ದ ಥವೇರ ವಾಹನವು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಸಾವು ಕಂಡ ಘಟನೆ ಮಂಗಳವಾರ ನಡೆದಿದೆ.
ಭಟ್ಕಳ ನಗರದ ರಾಷ್ಟ್ರೀಯ ಹೆದ್ದಾರಿ 66 ರ ದಾನಿಸ್ ಹೋಟಲ್ ಬಳಿ ಮಧ್ಯರಾತ್ರಿ 11:35 ರ ಸಮಯ ಘಟನೆ ನಡೆದಿದೆ.
ಭಟ್ಕಳ ನಗರದ ಪುರವರ್ಗದ ನಿವಾಸಿ ಮಂಜಪ್ಪ ನಾರಾಯಣ ನಾಯ್ಕ (63)ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಮೃತರು ಅಂಗಡಿಯಿಂದ ಮನೆಗೆ ಹೋಗಿತಿದ್ದ ವೇಳೆ ಈ ದುರ್ಘಟನೆ ನಡೆದಿದ್ದು ಅಪಘಾತ ಪಡಿಸಿದ ವಾಹನವನ್ನು ವಶಕ್ಕೆ ಪಡೆಯಲಾಗಿದ್ದು ಈ ಬಗ್ಗೆ ಭಟ್ಕಳ ನಗರ ಠಾಣೆಯಲ್ಲಿ ಮೃತನ ಮಗ ತಿಮ್ಮಪ್ಪ ನಾಯ್ಕ ಪ್ರಕರಣ ದಾಖಲು ಮಾಡಿದ್ದಾರೆ.