ಭಟ್ಕಳ:ಪಾದಚಾರಿಗೆ ವಾಹನ ಡಿಕ್ಕಿ:ಸ್ಥಳದಲ್ಲೇ ಸಾವು!

Source: so news | By MV Bhatkal | Published on 2nd May 2019, 12:59 AM | Coastal News | Don't Miss |

 

ಭಟ್ಕಳ:-ಮಂಗಳೂರು ಕಡೆಯಿಂದ ಭಟ್ಕಳ ಕಡೆಗೆ ಅತಿವೇಗದಲ್ಲಿ ಬರುತಿದ್ದ ಥವೇರ ವಾಹನವು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಸಾವು ಕಂಡ ಘಟನೆ ಮಂಗಳವಾರ ನಡೆದಿದೆ.

ಭಟ್ಕಳ ನಗರದ ರಾಷ್ಟ್ರೀಯ ಹೆದ್ದಾರಿ 66 ರ ದಾನಿಸ್ ಹೋಟಲ್ ಬಳಿ ಮಧ್ಯರಾತ್ರಿ 11:35 ರ ಸಮಯ ಘಟನೆ ನಡೆದಿದೆ.
ಭಟ್ಕಳ ನಗರದ ಪುರವರ್ಗದ ನಿವಾಸಿ ಮಂಜಪ್ಪ ನಾರಾಯಣ ನಾಯ್ಕ (63)ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಮೃತರು ಅಂಗಡಿಯಿಂದ ಮನೆಗೆ ಹೋಗಿತಿದ್ದ ವೇಳೆ ಈ ದುರ್ಘಟನೆ ನಡೆದಿದ್ದು ಅಪಘಾತ ಪಡಿಸಿದ ವಾಹನವನ್ನು ವಶಕ್ಕೆ ಪಡೆಯಲಾಗಿದ್ದು ಈ ಬಗ್ಗೆ ಭಟ್ಕಳ ನಗರ ಠಾಣೆಯಲ್ಲಿ ಮೃತನ ಮಗ ತಿಮ್ಮಪ್ಪ ನಾಯ್ಕ ಪ್ರಕರಣ ದಾಖಲು ಮಾಡಿದ್ದಾರೆ.

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...