ಅಂಕೋಲಾದಲ್ಲಿ ಭೀಕರ ಅಪಘಾತ. ಕಾರಿನಲ್ಲಿದ್ದ ಇಬ್ಬರ ಸಾವು.

Source: SO News | By Laxmi Tanaya | Published on 13th April 2021, 5:50 PM | Coastal News |

ಅಂಕೋಲಾ : ಲಾರಿ ಮತ್ತು ವ್ಯಾಗನರ್ ಕಾರುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರುಬಸಾವನ್ನಪ್ಪಿದ ಘಟನೆ  ಅಂಕೋಲಾದಲ್ಲಿ ನಡೆದಿದೆ. 

 ರಾಷ್ಟ್ರೀಯ ಹೆದ್ದಾರಿ  63 ಹೆಬ್ಬುಳ ಸಮೀಪ ಈ ಅಪಘಾತ ಸಂಭವಿಸಿದೆ. ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದ ಸಂಜನಾ ಸುರೇಶ ರಾಯ್ಕರ್ (7), ಗುರುಪ್ರಸಾದ ಅಣ್ವೇಕರ (25) ಮೃತ ದುರ್ದೈವಿಗಳೆಂದು ಗುರುತಿಸಲಾಗಿದೆ.
ಕಾರಿನಲ್ಲಿದ್ದ ಇನ್ನೂ ನಾಲ್ವರಿಗೆ ಗಾಯಗಳಾಗಿದ್ದು  ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. 

ವ್ಯಾಗನರ್ ಕಾರು  ಮಹಾರಾಷ್ಟ್ರದಿಂದ ಅಂಕೋಲಾ ಕಡೆ ಬರುತಿತ್ತು.  ಅಂಕೋಲಾದಿಂದ ಹುಬ್ಬಳ್ಳಿ ಕಡೆ ತೆರಳುತ್ತಿದ್ದ ಲಾರಿ ಢಿಕ್ಕಿ ಹೊಡೆದಿದ್ದರಿಂದ ಅಪಘಾತ ಸಂಭವಿಸಿದೆ.  ಲಾರಿ ಚಾಲಕನ ನಿರ್ಲಕ್ಷ್ಯದ ಚಾಲನೆಯೇ  ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...