‘ಯುವಜಾಗೃತಿ ದೇಶ ಸಮೃದ್ಧಿ’ ಪ್ರಬಂಧ ಸ್ಪರ್ಧೆ; ಪ್ರೀತಿ ಕಾಮತ್ ಪ್ರಥಮ

Source: S O News service | By Staff Correspondent | Published on 25th February 2017, 5:46 PM | Coastal News | Don't Miss |

ಭಟ್ಕಳ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉತ್ತರಕನ್ನಡ ಜಿಲ್ಲಾ ಘಟಕ ‘ಯುವಜಾಗೃತಿ ದೇಶ ಸಮೃದ್ಧಿ’ ಯುವ ಸಮಾವೇಶದ ನಿಮಿತ್ತ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ  ಕಾರವಾರದ ಪ್ರೀತಿ ವಿನಾಯಕ ಕಾಮತ್ ಪ್ರಥಮ ಬಹುಮಾನ ಪಡೆದುಕೊಂಡಿದ್ದು ಭಟ್ಕಳದ ವಿದ್ಯಾಭಾರತಿ ಪ್ರೌಢಶಾಲೆಯ ಎಂಟನೆ ತರಗತಿ ವಿದ್ಯಾರ್ಥಿ ಆದರ್ಶ ಎಚ್. ನಾಯ್ಕ ದ್ವಿತೀಂii  ಹಾಗೂ ಝಕೀಯಾ ಎಚ್.ಝರಝರಿ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಶೌಕತ್ ಕತೀಬ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಬಹುಮಾನ ವಿಜೇತರಿಗೆ ಫೆ.೨೬ ರಂದು ಭಟ್ಕಳದ ಹಳೆ ಬಸ್ ನಿಲ್ದಾಣದ ಎದುರ ನಡೆಯುವ ಯುವ ಸಮಾವೇಶದಲ್ಲಿ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ನೀಡಿ ಪುರಸ್ಕರಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ. 
ಬಿ.ಸಿದ್ದರಾಜು ಬೆಳ್ಳಯ್ಯ (ಉಪನ್ಯಾಸಕರು) ಮಡಿಕೇರಿ, ಶ್ರೀಮತಿ ಸಂಧ್ಯಾ ಶ್ರೀಧರ್ ಭಟ್ಕಳ, ದೇವಿದಾಸ್ ನಾಯಕ್ ಶಿರಸಿ, ಸಂದೀಪ್ ಭಟ್ ಹೊನ್ನಾವರ, ಅಜಯ್ ಪಾಂಡೆಲ್ ದಾಂಡೇಲಿ, ಜಿ.ಯೂ.ನಾಯಕ್ ಅಂಕೋಲಾ, ಪ್ರಸನ್ನ ಕುಮಾರ್ ಜಿ.ಎ. ಶಿರಸಿ, ಮಾನಸ ಪಿ.ಹೆಗಡೆ ಶಿರಸಿ ಸಮಧಾನಕರ ಬಹುಮಾನ ಪಡೆದುಕೊಂಡಿದ್ದಾರೆ.  

Read These Next

ಬೀಫ್ ಎಕ್ಸ್‌ಪೋರ್ಟ್ ಕಂಪನಿ ಸೇರಿದಂತೆ ಪಾಕಿಸ್ತಾನಿ ಏಜೆನ್ಸಿಗಳಿಂದಲೂ ಬಿಜೆಪಿ ದೇಣಿಗೆ ತೆಗೆದುಕೊಂಡಿದೆ- ಭಟ್ಕಳದಲ್ಲಿ ಕಾಂಗ್ರೆಸ್ ಸುದ್ದಿಗೋಷ್ಠಿ

ಭಟ್ಕಳ:  ಗೋಹತ್ಯೆ ವಿರೋಧಿಸುವ ಬಿಜೆಪಿ ಬೀಫ್ ರಫ್ತು ಮಾಡುವ ಕಂಪನಿ ಸೇರಿದಂತೆ ಪಾಕಿಸ್ಥಾನಿ ಎಜೆನ್ಸಿಗಳಿಂದಲೂ ದೇಣಿಗೆ ...