ರಾಜ್ಯದ ವಿವಿಧೆಡೆ ಸಿಡಿಲು ಬಡಿದು ಇಬ್ಬರ ಸಾವು; ಹಲವರಿಗೆ ಗಾಯ
ಭಟ್ಕಳ: ಭಾನುವಾರ ರಾತ್ರಿಯಿಂದ ಸೋಮವಾರ ಸಂಜೆವರೆಗೆ ರಾಜ್ಯದ ವಿವಿಧೆಡೆ ಸಿಡಿಲು ಬಡಿದ ಪರಿಣಾಮವಾಗಿ ಇಬ್ಬರು ಮೃತಪಟ್ಟಿದ್ದು ಹಲವರಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ಅಲ್ಲದೆ ಪ್ರಾಣಿಗಳು ಮೃತಪಟ್ಟಿದ್ದು ಸಾವಿರಾರು ರೂ ಆಸ್ತಿ ನಷ್ಟವಾಗಿರುವ ಕುರಿತು ವರದಿಯಾಗಿದೆ.
ಪುತ್ತೂರು ತಾಲೂಕಿನ ಸವಣೂರಿನ ಪುಣ್ಚಪ್ಪಾಡಿ ಎಂಬಲ್ಲಿ ಧನುಂಜಯ ಎಂಬುವವರು ಹಾಗೂ ಉತ್ತಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮನಮನೆಯ ನಿವಾಸಿ ಸಾವಿತ್ರಿ ನಾಯ್ಕ್ (೪೦) ಎಂಬುವವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಸಿದ್ದಾಪುರ ತಾಲುಕಾ ಅವರಗುಪ್ಪಾದಲ್ಲಿ ಆಲೆಮನೆಯಲ್ಲಿ ಕೆಲಸ ಮಾಡುತ್ತಿರುವಾಗ 1) ರೇವಣ್ಣ ಬಂಗಾರ್ಯ ನಾಯ್ಕ. 53 ವರ್ಷ ಸಾ: ಅವರಗುಪ್ಪಾ. 2)ಮಾಬ್ಲೇಶ್ವರ ಗೌರ್ಯ ನಾಯ್ಕ 50 ವರ್ಷ ಸಾ: ಅವರಗುಪ್ಪಾ ಇವರಿಗೆ ಸಿಡಿಲು ಬಡಿದು ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಮತ್ತು ಒಂದು ಕೋಣ ಸಿಡಿಲು ಬಡಿದು ಸತ್ತು ಹೋಗಿರುತ್ತದೆ. ಪುತ್ತೂರಿನ ಗೀತಾ ಹಾಗೂ ದೊಡ್ಡಪ್ಪ ಕುಂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಇಬ್ಬರನ್ನೂ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಾಯುಭಾರ ಕುಸಿತದ ಪರಿಣಾಮ ದಕ್ಷಿಣಕನ್ನಡ ಜಿಲ್ಲೆಯ ಹಲವೆಡೆ ಇಂದೂ ಕೂಡಾ ಮಳೆಯಾಗಿದ್ದು, ಸವಣೂರು ಪರಿಸರದಲ್ಲಿ ಗಾಳಿ, ಮಳೆ ಜೊತೆಗೆ ಸಿಡಿಲಿನ ಆರ್ಭಟವೂ ಹೆಚ್ಚಾಗಿತ್ತು.