ಭಟ್ಕಳ: ಕ್ವಿಟ್ ಇಂಡಿಯಾ ಚಳುವಳಿಗೆ ೭೫ ವರ್ಷ ತುಂಬಿದ ಹಿನ್ನೆಲೆಯಲ್ಲಿ ಭಟ್ಕಳ ತಾಲೂಕಾ ಬಿ.ಜೆ.ಪಿ. ಘಟಕದ ವತಿಯಿಂದ ಬೈಕ ರ್ಯಾಲಿ ಮೂಲಕ ತಿರಂಗಾ ರ್ಯಾಲಿ ಆಯೋಜಿಸಲಾಗಿತ್ತು.
ಪ್ರವಾಸಿ ಬಂಗಲೆಯಿಂದ ಆರಂಭಗೊಂಡ ಬೈಕ್ ರ್ಯಾಲಿ ದೇಶದ ಬಗ್ಗೆ ಹಾಗು ಕ್ವಿಟ್ ಇಂಡಿಯಾ ಚಳುವಳಿ ಸಂಬಂಧಿತ ಘೋಷವಾಕ್ಯವನ್ನು ಕೂಗುತ್ತಾ ಹಳೆ ಬಸ್ ನಿಲ್ದಾಣ ಮಾರ್ಗವಾಗಿ ಮಾರಿಕಾಂಬಾ ದೇವಸ್ಥಾನದಿಂದ, ಮುಖ್ಯ ರಸ್ತೆಯಲ್ಲಿ ಹಾದು ಹೋಗಿ ಶಮ್ಸುದ್ದೀನ್ ವೃತ್ತದಲ್ಲಿ ಸಮಾಪ್ತಿಗೊಂಡಿತು.
ಧನ್ಯಕುಮಾರ್ ಜೈನ್, ಈಶ್ವರ ನಾಯ್ಕ ಮಾವಳ್ಳಿ, ದಿನೇಶ ನಾಯ್ಕ, ಹನುಮಂತ ನಾಯ್ಕ, ಸುಬ್ರಾಯ ದೇವಡಿಗ, ಲಕ್ಷ್ಮಣ ನಾಯ್ಕ, ಸಂದೀಪ್ ಶೇಟ್, ಮೋಹನ ನಾಯ್ಕ ಲಕ್ಷ್ಮೀನಾರಾಯಣ ನಾಯ್ಕ ಹಡೀನ, ರವಿ ನಾಯ್ಕ ಜಾಲಿ, ಮಹೇಂಧ್ರ ನಾಯ್ಕ ಸೇರಿದಂತೆ ಹಲವಾರು ಕಾರ್ಯಕರ್ತರು ರ್ಯಾಲಿಯಲ್ಲಿ ಭಾಗವಹಿಸಿದ್ದರು.