ನೂತನ ವೃತ್ತ ನಿರೀಕ್ಷಕರಾಗಿ ಮಹಾಬಲೇಶ್ವರ ನೇಮಕ
ಭಟ್ಕಳ: ಇಲ್ಲಿನ ಗ್ರಾಮೀಣ ಠಾಣೆಯ ನೂತನ ವೃತ್ತ ನಿರೀಕ್ಷಕರಾಗಿ ಮಹಾಬಲೇಶ್ವರ ಎಸ್. ಎನ್. ಅಧಿಕಾರ ವಹಿಸಿಕೊಂಡಿದ್ದಾರೆ. ಈ ಮೊದಲು ಗುಪ್ತಚರ ಇಲಾಖೆಯ ಆಂತರಿಕ ಭದ್ರತಾ ವಿಭಾಗದ ಇನ್ಸಪೆಕ್ಟರ್ ಆಗಿ ಬಂಟ್ವಾಳ ಮತ್ತು ಭಟ್ಕಳದಲ್ಲಿ ಇವರು ಸೇವೆ ಸಲ್ಲಿಸಿದ್ದರು.
ಭಟ್ಕಳ ನಗರ ಠಾಣೆ ಮತ್ತು ಭಟ್ಕಳ ಗ್ರಾಮಾಂತರ ಠಾಣೆಗಳನ್ನು ಸರಕಾರ ಮೇಲ್ದರ್ಜೆಗೆ ಏರಿಸಿ, ಗ್ರಾಮಾಂತರ ಠಾಣೆಗೆ ಹೊಸದಾಗಿ ಇನ್ಸಪೆಕ್ಟರ್ ಹುದ್ದೆಯನ್ನು ಸರಕಾರ ಸೃಷ್ಟಿಸಿದೆ. ಭಟ್ಕಳ ಗ್ರಾಮಾಂತರ, ಮುರುಡೇಶ್ವರ ಮತ್ತು ಮಂಕಿ ವ್ಯಾಪ್ತಿಯ ಪ್ರದೇಶಗಳು ಗ್ರಾಮೀಣ ಠಾಣಾ ಇನ್ಸಪೆಕ್ಟರ್ ವ್ಯಾಪ್ತಿಗೆ ಬರಲಿದೆ. ಈ ಹಿಂದೆ ಭಟ್ಕಳ ನಗರ ಠಾಣೆಯ ಇನ್ಸಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ದಿವಾಕರ ಅವರನ್ನು ನಗರ ಠಾಣೆಯ ಇನ್ಸಪೆಕ್ಟರ್ ಆಗಿ ಮುಂದುವರೆಸಿದ್ದು, ಇವರ ವ್ಯಾಪ್ತಿ ಭಟ್ಕಳ ನಗರ ಪ್ರದೇಶಕ್ಕೆ ಸೀಮಿತಗೊಳಿಸಲಾಗಿದೆ.