ಭಟ್ಕಳ: ಗಂಗೋಳ್ಳಿಯಿಂದ ಮೀನುಗಾರಿಕೆಗೆ ತೆರಳಿದ್ದ ಭಟ್ಕಳದ ಬೆಳಕೆ ಮೊಗೇರಕೇರಿಯ ಯುವಕ ಮಂಜುನಾಥ ತಿಮ್ಮಪ್ಪ ಮೊಗೇರ (32) ಈತನು ಕಾಲು ಜಾರಿ ಅಕಸ್ಮಾತ್ ನೀರಿಗೆ ಬಿದ್ದು ಮೃತ ಪಟ್ಟಿರುವ ಕುರಿತು ವರದಿಯಾಗಿದೆ.
ಗಂಗೊಳ್ಳಿಯ ಮ್ಯಾಂಗನೀಸ್ ರೋಡ್ ಬಂದರಿನಲ್ಲಿ ಸಿದ್ಧಿವಿನಾಯಕ ಬೋಟ್ನಲ್ಲಿ ಕೆಲಸ ಮಾಡಿಕೊಂಡಿದ್ದು ಮಂಗಳವಾರ ಮೀನುಗಾರಿಕೆಗೆ ತೆರಳುವ ಸಿದ್ದತೆಯಲ್ಲಿ ರಾತ್ರಿ 8.20ರ ಸುಮಾರಿಗೆ ಪೇಟೆಗೆ ಹೋಗಿ ಬರಲು ಬೋಟಿನಿಂದ ನಾಲ್ಕೈದು ಬೋಟುಗಳನ್ನು ದಾಟಿ ಬರುವಾಗ ಬೋಟಿನಿಂದ ಇನ್ನೊಂದು ಬೋಟಿಗೆ ಹೋಗುತ್ತಿರುವಾಗ ಅಕಸ್ಮಾತ್ ಕಾಲು ಜಾರಿ ಪಂಚಗಂಗಾವಳಿ ನದಿಗೆ ಬಿದ್ದು, ಬುದುವಾರ ಕುಂದಾಪುರ ಗೊಪಾಡಿ ಎಂಬಲ್ಲಿ ಮೃತದೇಹ ಪತ್ತೆಯಾಗಿದೆ.ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.