ಮೀನುಗಾರಿಕಾ ಬೋಟ್ ಅವಘಡ; ೩೦ ಮಂದಿ ಪಾರು

Source: sonews | By Staff Correspondent | Published on 12th August 2017, 6:08 PM | Coastal News | State News | Don't Miss |

ಭಟ್ಕಳ: ಮೀನುಗಾರಿಕೆಗೆ ತೆರಳಿದ್ದ ಕುಂದಾಪುರ ತಾಲೂಕಿನ ರಾಮಾ ಖಾರ್ವಿ ಹಾಗೂ ಪ್ರಭಾಕರ್ ಖಾರ್ವಿಯವರ ಬೋಟ್ ನ ಫ್ಯಾನ್ ತುಂಡಾಗಿ ಮುಳುಗಡೆಯ ಭೀತಿ ಎದುರಿಸುತ್ತಿದ್ದು ಅದರಲ್ಲಿ ಮೂವತ್ತು ಮಂದಿ ಪ್ರಣಾಪಾಯದಿಂದ ಪಾರಾದ ಘಟನೆ ಶುಕ್ರವಾರ ತಡರಾತ್ರಿ ಭಟ್ಕಳ ತಾಲೂಕಿನ ಮುಂಡಳ್ಳಿಯ ನಸ್ತಾರ ಸಮುದ್ರ ತೀರದಲ್ಲಿ ಜರಗಿದೆ.

‘ಯಕ್ಷೇಶ್ವರಿ’ ಎಂಬ ಹೆಸರಿನ ಮೀನುಗಾರಿಕಾ ಬೋಟ್ ಇಲ್ಲಿನ ಬಂದರ್ ದಕ್ಕೆಯಿಂದ ಮೀನುಗಾರಿಗೆ ತೆರಳಿ ಭಟ್ಕಳ ಬಂದರ್ ಗೆ ಮರಳುವಾಗಿ ಅದರ ಫ್ಯಾನ್ ತುಂಡಾಗಿ ಕಾರ್ಯವನ್ನು ಸ್ಥಗಿತಗೊಳಿಸಿತು ಎಂದು ಹೇಳಲಾಗಿದ್ದು ಮುಳುಗುವ ಭೀತಿ ಎದುರಿಸುತ್ತಿದೆ ಎಂದು ತಿಳಿದುಬಂದಿದೆ. 

ಆಗ ಬೇರೆ ಬೋಟ್‌ಗಳಿಂದ ಹಗ್ಗದ ಸಹಾಯ ಪಡೆದು ಮುಳುಗುತ್ತಿದ್ದ ಬೋಟ್ ಎಳೆಯಲು ಪ್ರಯತ್ನಿಸಿದ್ದು ಅದು ಯಶಸ್ವಿಯಾಗಲು ಸಾಧ್ಯವಾಗಲಿಲ್ಲ. ಜೋರಾಗಿ ಬೀಸುತ್ತಿರುವ ಗಾಳಿ ಮಳೆ ಹಾಗೂ ಸಮುದ್ರದ ರಭಸದ ಅಲೆಗಳಿಗೆ ಸಿಲುಕಿದ ಬೋಟ್ ಮುಂಡಳ್ಳಿಯ ನಸ್ತಾರ ಸಮುದ್ರ ತೀರಕ್ಕೆ ಬಂದು ತಲುಪಿದೆ. ಬೋಟ್‌ನ ತಳಭಾಗ ಸಂಪುರ್ಣ ಒಡೆದು ಸಮುದ್ರದ ನೀರು ಸೇರಿ ಉಸುಕು ತುಂಬಿ ಸಮುದ್ರದ ದಡದಲ್ಲಿಯೇ ಸಿಲುಕಿಕೊಂಡಿತು. ರಾತ್ರಿ ಇಡೀ ಹರಸಾಹಸ ಪಟ್ಟು ಸಮುದ್ರವನ್ನು ಮೇಲ್ದಡೆಗೆ ಎಳೆಯಲು ಸಾಧ್ಯವಾಗದೇ ಇಲ್ಲಿನ ಸ್ಥಳಿಯರು ಹಾಗೂ ಮೀನುಗಾರರು ವಿಫಲರಾದರು. ಬೋಟ್ ಸಂಪೂರ್ಣ ಹಾನಿಯಾಗಿದ್ದು, ೧.೫ ಕೋಟಿಗೂ ಅಧಿಕ ಮೌಲ್ಯ ರೂ. ಹಾನಿಯಾದ ಬಗ್ಗೆ ಅಂದಾಜಿಸಲಾಗಿದೆ. ಬೋಟ್‌ನಲ್ಲಿದ್ದ ಒಟ್ಟು ೫೦೦೦ಲೀ. ಡೀಸೆಲ್ ಸಹ ಹಾನಿಯಾಗುವುದರೊಂದಿಗೆ ಸಮುದ್ರಕ್ಕೆ ಸೇರಿದೆ. 

ಸ್ಥಳಕ್ಕೆ ಕರಾವಳಿ ಪೋಲೀಸ್ ಪಡೆ ಹಾಗೂ ಗ್ರಾಮೀಣ ಪೋಲೀಸ್‌ರು ಬಂದಿದ್ದು, ಸದ್ಯ ಕ್ರೇನ್ ಮೂಲಕ ಬೋಟ್ ಸಮುದ್ರ ದಡದಿಂದ ಮೇತ್ತಲಾಗಿದೆ. ಈ ಬಗ್ಗೆ ಭಟ್ಕಳ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

Read These Next

ಕಾರವಾರ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ಹತ್ತೂವರೆ ಸಾವಿರ: ಸೈಲ್

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಗೆಲ್ಲಿಸಿದರೆ ತಿಂಗಳಿಗೆ ಹತ್ತೂವರೆ ಸಾವಿರ ಬಡ ಮಹಿಳೆಯರ ಖಾತೆಗೆ ಬರಲಿದೆ. ಈ ಅವಕಾಶವನ್ನ ...

ಭಟ್ಕಳದ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ - ಡಾ. ದಿನೇಶ್ ಗಾಂವ್ಕರ್

೨೦೨೪- ಶಿಕ್ಷಕ ಶೀರ್ಷಿಕೆ ಅಡಿಯಲ್ಲಿ ಅಂಜುಮಾನ್ ತಾಂತ್ರಿಕ ವಿದ್ಯಾಲಯದಲ್ಲಿ ಕನ್ನಡ ವೇದಿಕೆಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಬಿಜೆಪಿ ಮುಖಂಡನಿಗೆ ಪೆನ್‌ಡ್ರೈವ್ ನೀಡಿದ್ದೆ; ಪ್ರಜ್ವಲ್ ಕಾರು ಚಾಲಕನಿಂದ ಹೇಳಿಕೆ

ಪ್ರಜ್ವ ರೇವಣ್ಣರದ್ದು ಎನ್ನಲಾದ ಅಶ್ಲೀಲ ವೀಡಿಯೊ ಪೆನ್ ಡ್ರೈವ್ ಬಿಜೆಪಿ ಮುಖಂಡರೂ ಆಗಿರುವ ವಕೀಲ ದೇವರಾಜೇಗೌಡ ಬಿಟ್ಟು ಬೇರೆ ಯಾರಿಗೂ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಅವಧಿ ಉಲ್ಲೇಖಿಸದೇ ಪ್ರಜ್ವಲ್ ರೇವಣ್ಣ ಜೆಡಿಎಸ್‌ನಿಂದ ಅಮಾನತು

ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಪ್ರಕರಣ ಸಂಬಂಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ರೇವಣ್ಣ, ಪ್ರಜ್ವಲ್ ಉಚ್ಚಾಟನೆಗೆ ಜೆಡಿಎಸ್ ಶಾಸಕರ ಪಟ್ಟು

ರಾಜ್ಯದ ಜನತೆಯ ಮುಂದೆ ತಲೆ ತಗ್ಗಿಸುವಂತಹ ಕೆಲಸ ಮಾಡಿದವರನ್ನು ರಾಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಘನತೆಯನ್ನು ಉಳಿಸಬೇಕಿದೆ ಎಂದು ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ: ಕುಮಾರಸ್ವಾಮಿ

ಜೆಡಿಎಸ್ ಸಂಸದ ಪ್ರಜಿ ಕುಮಾರಸ್ವಾಮಿ ಡ್ರೈವ್ ಪ್ರಕರಣದಲ್ಲಿ ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ' ಎಂದು ಮಾಧ್ಯಮಗಳ ಮುಂದೆ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ತ್ವರಿತಗತಿಯಲ್ಲಿ ತನಿಖೆ ನಡೆಸಿ, ವರದಿ ಸಲ್ಲಿಸಲು ಸೂಚನೆ: ಪರಮೇಶ್ವ‌ರ್

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿ, ವರದಿ ಸಲ್ಲಿಸುವಂತೆ ...