ಭಟ್ಕಳ: ದೇಶಪಾಂಡೆ ಮುಖದಲ್ಲಿ ನಗುವಿದ್ದರೆ ಆನಂದ ಗೆಲ್ಲುತ್ತಾರೆ: ಆರ್.ಎನ್.ನಾಯ್ಕ

Source: S O News Service | By I.G. Bhatkali | Published on 20th April 2019, 12:28 AM | Coastal News | Don't Miss |

ಭಟ್ಕಳ: ಈ ಬಾರಿ ಆನಂದ ಆಸ್ನೋಟಿಕರ್ ಗೆಲ್ಲಲಿದ್ದಾರೆ. ಅದಕ್ಕೆ ಸಚಿವ ಆರ್.ವಿ.ದೇಶಪಾಂಡೆ ಮುಖದಲ್ಲಿನ ನಗುವೇ ಸಾಕ್ಷಿಯಾಗಿದೆ ಎಂದು ಮಾಜಿ ಸಚಿವ ಆರ್.ಎನ್.ನಾಯ್ಕ ಹೇಳಿದರು.

ಆನಂದ ಆಸ್ನೋಟಿಕರ್ ಗೆಲುವಿಗೆ ಕಾಂಗ್ರೆಸ್ ಜೆಡಿಎಸ್ ಮುಖಂಡರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕಾಗಿದೆ. ದೇಶಪಾಂಡೆಯವರನ್ನು ಅಂಟಿಕೊಂಡೇ ಮುಖಂಡರು ಕುಳಿತುಕೊಂಡರೆ ಕೆಲಸ ಆಗುವುಲ್ಲ. ಅಲ್ಲಿಂದ ಹೊರಗೆ ಬಂದು ಜನರ ಸಂಪರ್ಕ ಸಾಧಿಸಬೇಕು.

ಸಂಸದರಾಗಿದ್ದ ಅನಂತಕುಮಾರ ಹೆಗಡೆ ಅಲ್ಲಿಂದ ಇಲ್ಲಿಯವರೆಗೂ ಸುಸಂಸ್ಕøತರಾಗಿ ಬದುಕಿಲ್ಲ. ಅವರ ಭಾಷೆಯೇ ಅವರ ಸಂಸ್ಕøತಿಯನ್ನು ಹೇಳುತ್ತದೆ. ದುರಾದೃಷ್ಟವಶಾತ್ ಕಾಂಗ್ರೆಸ್, ಜೆಡಿಎಸ್ ಪಕ್ಷದ ಮುಖಂಡರಾಗಲೀ ಅಥವಾ ಅವರ ಸ್ವಪಕ್ಷ ಬಿಜೆಪಿಯ ಹಿರಿಯರೇ ಆಗಲೀ ಪ್ರತಿಭಟಿಸುವ ಅಥವಾ ತಿಳಿ ಹೇಳುವ ಕೆಲಸ ಮಾಡದಿರುವುದರಿಂದ ಅನಂತಕುಮಾರ ಹೆಗಡೆ ಬಾಯಿಗೆ ಬಂದಂತೆ ಮಾತನಾಡುತ್ತ ನಡೆದಿದ್ದಾರೆ. ಈ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮೇಲೆಯೂ ಜವಾಬ್ದಾರಿ ಇದೆ. ಅನಂತಕುಮಾರ ಬಾಯಿಯಿಂದ ಹಿಂದುಳಿದ ಮತ್ತು ದಲಿತರು ತಪ್ಪಿಸಿಕೊಳ್ಳಲು ನಿವೇ ಮುಂದೆ ನಿಂತು ಸಹಾಯ ಮಾಡಿ ಎಂದು ವಿನಂತಿಸಿಕೊಂಡರು.

Read These Next

ಕಾರವಾರ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ಹತ್ತೂವರೆ ಸಾವಿರ: ಸೈಲ್

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಗೆಲ್ಲಿಸಿದರೆ ತಿಂಗಳಿಗೆ ಹತ್ತೂವರೆ ಸಾವಿರ ಬಡ ಮಹಿಳೆಯರ ಖಾತೆಗೆ ಬರಲಿದೆ. ಈ ಅವಕಾಶವನ್ನ ...

ಭಟ್ಕಳದ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ - ಡಾ. ದಿನೇಶ್ ಗಾಂವ್ಕರ್

೨೦೨೪- ಶಿಕ್ಷಕ ಶೀರ್ಷಿಕೆ ಅಡಿಯಲ್ಲಿ ಅಂಜುಮಾನ್ ತಾಂತ್ರಿಕ ವಿದ್ಯಾಲಯದಲ್ಲಿ ಕನ್ನಡ ವೇದಿಕೆಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ...