ಲೋಕಸಭೆ ಚುನಾವಣೆ; ಬಿಜೆಪಿಯಿಂದ ಅನಂತಮೂರ್ತಿ ಹೆಗಡೆಗೆ ಟಿಕೇಟ್ ನೀಡುವಂತೆ ಬಿಜೆಪಿ ಕಾರ್ಯಕರ್ತರ ಆಗ್ರಹ

Source: SOnews | By Staff Correspondent | Published on 6th January 2024, 5:30 PM | Coastal News |

ಭಟ್ಕಳ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ ಸಮಾಜಸೇವಕ ಅನಂತ್ ಮೂರ್ತಿ ಹೆಗಡೆಯವರಿಗೆ ಟಿಕೇಟ್ ನೀಡುವಂತೆ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಬಿಜೆಪಿ ಕಾರ್ಯಕರ್ತ ವಿವೇಕ್ ನಾಯ್ಕ  ಪತ್ರಿಕಾಗೋಷ್ಟಿಯನ್ನು ನಡೆಸಿದ್ದು, ಜಿಲ್ಲೆಯಲ್ಲಿ ನಾವು ಹಿಂದುತ್ವದ ಅಡಿಯಲ್ಲಿ ಕೆಲಸ ಮಾಡುತ್ತ ಬಂದಿದ್ದೇವೆ. ಇಲ್ಲಿಯ ವರೆಗೆ ಭಟ್ಕಳದ ಹೆಸರನ್ನು ಮುಂಚೂಣಿಗೆ ತಂದು ಅಧಿಕಾರ ಗಿಟ್ಟಿಸಿಕೊಂಡುವರು ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಪರೋಕ್ಷವಾಗಿ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಕಿಡಿಕಾರಿದರು.

ಚುನಾವಣೆ ಬಂದಾಗ ಮಾತ್ರ ನಾಯಕರಿಗೆ ಉತ್ತರಕನ್ನಡ ಜಿಲ್ಲೆ ಹಾಗೂ ಭಟ್ಕಳ  ನೆನಪಾಗುತ್ತದೆ. ಕಳೆದ ಹಲವು ದಶಕಗಳಿಂದ ರಾಜಕೀಯ ಲಾಭ ಪಡೆದಿದ್ದು ಸಾಕು ಈಗ ಹೊಸಬರಿಗೆ ಅವಕಾಶ ನೀಡಿ ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಪಾಂಡು ನಾಯ್ಕ, ಶ್ರೀಧರ್ ನಾಯ್ಕ ಮುಂತಾದವರು ಇದ್ದರು.

Read These Next