ಕಾರವಾರ ಪಿಡಬ್ಲೂಡಿ ಸಹಾಯಕ ಇಂಜಿನಿಯರ್ ರಾಜೀವ್ ನಾಯ್ಕ ಮನಡ ಮೇಲೆ ಎಸಿಬಿ ದಾಳಿ. ನಗದು, ಬೆಳ್ಳಿ ಬಂಗಾರ, ವಾಹನಗಳು ವಶಕ್ಕೆ.

Source: SO News | By Laxmi Tanaya | Published on 17th June 2022, 9:13 PM | Coastal News |

ಕಾರವಾರ : ಪಿಡಬ್ಲೂಡಿ ಸಹಾಯಕ ಇಂಜಿನಿಯರ್ ಮೇಲೆ ದಾಳಿ ನಡೆಸಿದ  ಎಸಿಬಿ ಅಧಿಕಾರಿಗಳು   ನಗದು ಹಾಗೂ ಬೆಳ್ಳಿ ಮತ್ತು ಬಂಗಾರವನ್ನ ವಶಪಡಿಸಿಕೊಂಡಿದ್ದಾರೆ. 

ಶುಕ್ರವಾರ ಬೆಳಿಗ್ಗೆ ನಗರದ ಎಂ ಜಿ ರಸ್ತೆ ಪಕ್ಕದಲ್ಲಿರುವ ಬ್ರಂದಾವನ ಅಪಾರ್ಟಮೆಂಟ್ ನಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಪಿಡಬ್ಲೂಡಿ ಸಹಾಯಕ ಇಂಜಿನಿಯರ್  ರಾಜೀವ್ ನಾಯ್ಕ ಮನೆಯಲ್ಲಿ  4 ಲಕ್ಷ ನಗದು,  ಚಿನ್ನಾಭರಣ, ಬೆಳ್ಳಿಯ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ. ಅಲ್ಲದೇ   ಎರಡು ಐಶಾರಾಮಿ  ಕಾರುಗಳನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

 ರಾಜೀವ ನಾಯ್ಕ ಪಿಡಬ್ಲುಡಿ   ಸಹಾಯಕ ಇಂಜಿನಿಯರ್ ಕಳೆದ 6 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು  ಹೊನ್ನಾವರದಲ್ಲಿ 20 ಎಕರೆ ಆಸ್ತಿ,,  5 ರಿಂದ 6 ಬೇರೆಯವರ ಹೆಸರಿನ ಮೇಲೆ ಖರೀದಿ ಮಾಡಿದ ಸೈಟ್‌ಗಳಿರೋದು ಬೆಳಕಿಗೆ ಬಂದಿದೆ. ವಾಮ ಮಾರ್ಗದಲ್ಲಿ ಅಕ್ರಮ ಆಸ್ತಿ ಸಂಪಾದಿಸಿರೋದು ತಿಳಿದು ಬಂದಿದೆ. ಇಲಾಖೆಯ ಕಾಮಗಾರಿಗಳಿಗೆ ಪರ್ಸೆಂಟೇಜ್ ತೆಗೆದುಕೊಳ್ಳುತ್ತಿದ್ದ ಆರೋಪ ಇದೆ. ರಾಜೀವ್ ನಾಯಕ್ 25 ವರ್ಷ ಮುನ್ಸಿಪಾಲಿಟಿಯಲ್ಲಿ ಅಧಿಕಾರಿಯಾಗಿದ್ದರು. 

Read These Next