ಮಹಿಳೆ ನೇಣಿಗೆ ಶರಣು
ಮುಂಡಗೋಡ: ಸಾಲಬಾಧೆಯಿಂದ ಮಹಿಳೆಯೋರ್ವಳು ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದೂರ ಪಂಚಾಯತ್ ವ್ಯಾಪ್ತಿಯ ಕೊಪ್ಪ ಗ್ರಾಮದಲ್ಲಿ ನಡೆದಿದೆ.
ಗೌರವ್ವಾ ಶಂಬಣ್ಣಾ ನರಸೋಜಿ, ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾಳೆ. ಮಹಿಳೆಯು ವಿವಿಧ ಸಂಘ ಸಂಸ್ಥೆ ಬ್ಯಾಂಕಗಳಲ್ಲಿ ಸಾಲವನ್ನು ಮಾಡಿದ್ದಳು ಎನ್ನಲಾಗಿದೆ. ಸಾಲವನ್ನು ತೀರಿಸಲಾಗದೇ ಮನನೊಂದು ತನ್ನ ಮನೆಯ ಮೇಲ್ಚಾವಣಿಗೆ ಹಗ್ಗದಿಂದ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಇಲ್ಲಿನ ಪಿ.ಐ. ಶಿವಾನಂದ ಚಲವಾದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ