ಉತ್ತರಕನ್ನಡ ಜಿಲ್ಲಾಡಳಿತದಿಂದ ನಿರ್ಗಮಿತ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ರವರಿಗೆ ಆತ್ಮೀಯ ಬೀಳ್ಕೊಡುಗೆ.

Source: SO News | By Laxmi Tanaya | Published on 28th July 2023, 10:13 PM | Coastal News | Don't Miss |

ಕಾರವಾರ : ಉತ್ತರಕನ್ನಡ  ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ 9 ತಿಂಗಳುಗಳ ಕಾಲ  ಸೇವೆ ಸಲ್ಲಿಸಿದ್ದೇನೆ. ಸಮಯ ಚಿಕ್ಕದಾಗಿರಬಹುದು ಆದರೆ ಕೆಲಸ ಮಾಡಲು ಅಷ್ಟು ಸಮಯ ಸಾಕು, ಸಮಯಕ್ಕಿಂತ ಕೆಲಸದ ಪರಿಣಾಮ ಮುಖ್ಯವಾಗಿರುತ್ತದೆ ಎಂದು ನಿರ್ಗಮಿತ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.

ನಗರದ  ಜಿಲ್ಲಾಧಿಕಾರಿಗಳ  ಕಾರ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ  ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಯ ಎಷ್ಟೇ ಇರಲಿ ಸೇವೆಯ ವಿಷಯದಲ್ಲಿ ನಮ್ಮನ್ನೂ ಕುಗ್ಗಿಸಲು ಸಾಧ್ಯವಿಲ್ಲ ಎಂದರು.

ಸಾರ್ವಜನಿಕ ಸೇವೆಯಲ್ಲಿ ಇರವುವವರು ಯಾವ ಒಬ್ಬ ವ್ಯಕ್ತಿಯ ಸೇವಕ ಆಗಬಾರದು. ಹಾಗೆಯೇ ನಾನು ನನ್ನ ಅಧಿಕಾರವಧಿಯಲ್ಲಿ  ಕೆಲಸ ಮಾಡಿರುತ್ತೇನೆ. ಹಾಗೆಯೇ ನನ್ನ ಅಧಿಕಾರವಧಿಯಲ್ಲಿ ಜಿಲ್ಲೆಯ ಜನರು  ಉತ್ತಮ ಸ್ಪಂದನೆ ಸಹಕಾರ ನೀಡಿದ್ದಾರೆ. ಹಾಗೆಯೇ  ಅಧಿಕಾರಿಗಳ ಸಹಕಾರಕ್ಕೆ ಕೃತಜ್ಞತೆ ತಿಳಿಸಿದರು. 
 
ಬಳಿಕ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ರವರು ಮಾತನಾಡಿ, ಕಡಿಮೆ ಅವಧಿಯಲ್ಲಿ  ನಿರ್ಗಮಿತ ಜಿಲ್ಲಾಧಿಕಾರಿಗಳು  ಜಿಲ್ಲೆಯಲ್ಲಿ ಮಾಡಿದ ಕೆಲಸಕ್ಕೆ ಹೆಮ್ಮೆ ಇದೆ ಎಂದರು. ಇವರ ಅಧಿಕಾರವಧಿಯಲ್ಲಿ ವಿಶೇಷವಾಗಿ ಪೌರ ಕಾರ್ಮಿಕರಿಗೆ ಉತ್ತಮ ಸಹಕಾರ ನೀಡಿದ್ದಾರೆ. ಈ ಜಿಲ್ಲೆಯ ಜನರು ಉತ್ತಮ ನಡುವಳಿಕೆ ಹೊಂದಿದವರು ಸರಿ ಇದ್ದರೆ ನೇರವಾಗಿಯೇ ಹೇಳುತ್ತಾರೆ. ಅದಕ್ಕೆ ಈ ಸಮಾರಂಭಕ್ಕೆ ಬಂದ ಜನರೇ ಸಾಕ್ಷಿ  ಎಂದರು.  ಜಿಲ್ಲೆಯ ಎಲ್ಲಾ ಇಲಾಖೆಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸುತ್ತೇನೆ ಎಂದರು. 

ಬಳಿಕ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಮಾತನಾಡಿ,  ಜನರು ವ್ಯಕ್ತಿಗಳನ್ನು ಮರೆಯಬಹುದು. ಆದರೆ ಅವರ ಕೆಲಸಗಳನ್ನು ಮರೆಯುದಿಲ್ಲ. ನಿರ್ಗಮಿತ ಜಿಲ್ಲಾಧಿಕಾರಿಗಳು ಹಾಗೆಯೇ ಕೆಲಸ ನಿರ್ವಹಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು.

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...