ಭಟ್ಕಳ: ನಿಯಂತ್ರಣ ತಪ್ಪಿದ ಕಾರು: ಐದು ಮಂದಿ ಗಾಯ
ಭಟ್ಕಳ: ನವಾಯತ್ ಕಾಲೋನಿಯ ರಾ.ಹೆ. ೬೬ರಲ್ಲಿ ನಿಯಂತ್ರಣ ತಪ್ಪಿದ ಕಾರೊಂದು ಮೊದಲು ಬೈಕ್, ಆಟೋರಿಕ್ಷಾ ನಂತರ ಲೂನಾ ಕ್ಕೆ ಡಿಕ್ಕಿ ಹೊಡೆದು ಐದು ಮಂದಿಯನ್ನು ಗಾಯಗೊಳಿಸಿದ ಘಟನೆ ಮಂಗಳವಾರ ಜರಗಿದೆ.
ಮಂಗಳೂರಿನಿಂದ ಹೊನ್ನಾವರ ಕಡೆಗೆ ಹೋಗುತ್ತಿದ್ದ ಕಾರೋಂದು ನಗರದ ನವಯಾತ್ ಕಾಲೋನಿಯ ರಾ.ಹೆ.೬೬ರಲ್ಲಿನ ಹೊಟೇಲ್ ಯಮ್ಮೀಸ್ ಬಳಿ ನಿಯಂತ್ರಣ ಕಳೆದುಕೊಂಡಿದ್ದು ಮೊದಲು ಬೈಕ್, ಆಟೋ ರಿಕ್ಷಾ ಹಾಗೂ ಲೂನಾ ಬೈಕಿಗೆ ಡಿಕ್ಕಿ ಹೊಡೆಯಿತು ಎಂದು ಪ್ರತ್ಯೆಕ್ಷದರ್ಶಿಗಳು ತಿಳಿಸಿದ್ದಾರೆ.
ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.