ಜಮಾಅತೆ ಇಸ್ಲಾಮೀ ಹಿಂದ್ನ ಮಕ್ಕಳ ವಿಭಾಗ ‘ಗುಲ್ಶನ್’ವತಿಯಿಂದ ‘ನೀರು ಉಳಿಸಿ ಭವಿಷ್ಯ ಸಂರಕ್ಷಿಸಿ’ ಘೋಷವಾಕ್ಯದಡಿ ಆಯೋಜಿಸಲಾದ ರಾಜ್ಯ ಮಟ್ಟದ ಅಭಿಯಾನದ ಸಮಾರೋಪ ಸಮಾರಂಭವು ಉಡುಪಿಯ ಅಜ್ಜರಕಾಡಿನಲ್ಲಿರುವ ಪುರಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ನೀರಿನ ಉಳಿತಾಯದ ಮಹತ್ವ ಮತ್ತು ಜಾಗ್ರತಿಗೆ ಸಮಬಂಧಪಟ್ಟ ಅನೇಕ ಚಿತ್ರಗಳು, ಮೋಡೆಲ್ಗಳು ಹಾಗೂ ಕಿರು ಚಿತ್ರಗಳನ್ನು ಪ್ರದಶಿಸಲಾಗಿತು.
ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ Mrs. Shubha( H. O. D, Media studies, school of communication, Manipal) ಜಮಾಅತೆ ಇಸ್ಲಾಮೀ ಹಿಂದ್ ಜಿಲ್ಲಾ ಸಂಚಾಲಕಿ ಹುಮೇರ, ಜಿಲ್ಲಾ ಸಂಚಾಲಕರಾದ ಎಂ.ಶಬ್ಬೀರ್ ಮಲ್ಪೆ. ಸ್ಥಾನೀಯ ಅದ್ಯಕ್ಷರಾದ ಅಬ್ದುಲ್ ಅಝೀಝ್ ಮಣಿಪಾಲ. ಮಲ್ಪೆ ಸ್ಥಾನೀಯ ಅಧ್ಯಕ್ಷರಾದ ರಹ್ಮತುಲ್ಲಾ ಸಿದ್ದೀಕ್, ಶಾಹಿದ ರಿಯಾಝ್, ಮೆಹರುನ್ನೀಸ ಉಪಸ್ಥಿತರಿದ್ದರು.