ಜಾತಿಪದ್ದತಿ ವಿರೋಧಿ ರ‍್ಯಾಪರ್ ಸುಮಿತ್

Source: sonews | By Staff Correspondent | Published on 7th August 2018, 11:27 PM | National News | Special Report |

ಹೊಸದಿಲ್ಲಿ:  ಅಮೆರಿಕಾದಲ್ಲಿ ಒಂದು ಕಾಲದಲ್ಲಿ ಜನಾಂಗೀಯ ತಾರತಮ್ಯವನ್ನು ವಿರೋಧಿಸಿ ಹಿಪ್-ಹಾಪ್ ಸಂಗೀತದ ಸಂಸ್ಕೃತಿ ಹುಟ್ಟಿಕೊಂಡಿತ್ತು. ಈ ಹಿಪ್ ಹಾಪ್ ಸಂಗೀತ ಅಂದಿನಿಂದ ದನಿಯಿಲ್ಲದವರ ದನಿಯಾಗಿ ಬಿಟ್ಟಿದೆ. ಭಾರತದಲ್ಲೂ ಹಲವಾರು ಹಿಪ್ ಹಾಪ್ ಸಂಗೀತಗಾರರಿದ್ದರೂ ಸಾಮಾಜಿಕ ಸಮಸ್ಯೆಗಳತ್ತ ತಮ್ಮ ಸಂಗೀತದ ಮೂಲಕ ಬೆಳಕು ಚೆಲ್ಲುವ ಪ್ರಯತ್ನವನ್ನು ಅವರು ಮಾಡಿಲ್ಲ.

ಜೆಎನ್‍ಯು ವಿದ್ಯಾರ್ಥಿ ಸುಮಿತ್ ಸಮೋಸ್(24)  ಒಡಿಶಾದ ತೆಂತುಲಿಪಡರ್ ಗ್ರಾಮದ ನಿವಾಸಿ. ಇತ್ತೀಚೆಗೆ ಅವರು ತಮ್ಮ  ಮೊತ್ತ ಮೊದಲನೇ ಹಿಪ್ ಹಾಪ್ ಹಾಡು `ಲಡಾಯಿ ಸೀಖ್ ಲೇ"  ಬಿಡುಗಡೆಗೊಳಿಸಿದ್ದು ಇದು ಭಾರತದಲ್ಲಿ ಜಾತಿ ಆಧರಿತ ತಾರತಮ್ಯದತ್ತ ಬೆಳಕು ಚೆಲ್ಲಿದೆ. ಈ ಸಂಗೀತ ವೀಡಿಯೋದ ಅರಂಭವನ್ನು ಸುಮೀತ್ ತಮ್ಮದೇ ಅನುಭವದ ಆಧಾರದಲ್ಲಿ ಮಾಡಿದ್ದು ದಲಿತರು ಎದುರಿಸುವ ತಾರತಮ್ಯವನ್ನು ಅವರು ಈ ಸಂಗೀತ ವೀಡಿಯೋ ಮೂಲಕ ವಿವರಿಸಿದ್ದಾರೆ.

ಹಿಂದಿಯಲ್ಲಿ ಬರೆಯಲಾದ ಈ ಹಾಡು ಮೇಲ್ಜಾತಿಯವರಿಗೆ ಹಲವಾರು ಪ್ರಶ್ನೆಗಳನ್ನು ಕೇಳುವುದದಲ್ಲದೆ ದಲಿತರು ವಿರೋಧಿಸುವುದನ್ನು ಕಲಿಯಬೇಕೆಂದು ತಿಳಿಸುತ್ತದೆ.

ಸ್ಪ್ಯಾನಿಶ್ ಮತ್ತು ಲ್ಯಾಟಿನ್ ಅಮೆರಿಕನ್ ಸಾಹಿತ್ಯದಲ್ಲಿ ಸ್ನಾತ್ತಕೋತ್ತರ ಪದವೀಧರರಾಗಿರುವ ಸುಮಿತ್  ತಮ್ಮನ್ನು ಜಾತಿ ವಿರೋಧಿ ವಿದ್ಯಾರ್ಥಿ ಹೋರಾಟಗಾರನೆಂದು ಕರೆಸಿಕೊಳ್ಳಲು ಬಯಸುತ್ತಾರೆ. ಅವರು ಜೆಎನ್‍ಯು ಕ್ಯಾಂಪಸ್ಸಿನಲ್ಲಿ ಅಂಬೇಡ್ಕರ್ ವಾದಿ ಆಂದೋಲನದಲ್ಲಿ ಕಾಣಿಸಿಕೊಂಡವರು. ದಲಿತ ಸಮುದಾಯದಲ್ಲಿ “ಹುಟ್ಟಿದ್ದಕ್ಕೆ ನಮಗೆ ಹೆಮ್ಮೆಯೂ ಇಲ್ಲ. ನಾಚಿಕೆಯೂ ಇಲ್ಲ. ಇದು ನಮ್ಮ ಇತಿಹಾಸದ ಗುರುತಿನ ಭಾಗವಾಗಿದೆ” ಎಂದು ಅವರು ಹೇಳುತ್ತಾರೆ.

ಸುಮಿತ್ ಅವರು ಜೋಯ್ನರ್ ಲುಕಸ್, ಚೈಲ್ಡಿಶ್ ಗ್ಯಾಂಬಿನೊ, ಕೆಂಡ್ರಿಕ್ ಲಮರ್  ಮುಂತಾದವರಿಂದ ಪ್ರಭಾವಿತರಾದವರು. ತಮ್ಮ ಪ್ರಥಮ ಸಂಗೀತ ವೀಡಿಯೋದಲ್ಲಿ ಸುಮೀತ್ ಅವರು ಜೆಎನ್‍ಯು ಕ್ಯಾಂಪಸ್ಸಿನಲ್ಲಿ ತಾವು ಎದುರಿಸಿದ ತಾರತಮ್ಯ, ಪರೀಕ್ಷೆಯಲ್ಲಿ ಉತ್ತಮ ಅಂಕಗಳು ದೊರೆತ ಹೊರತಾಗಿಯೂ ವಿದ್ಯಾರ್ಥಿವೇತನ ನಿರಾಕರಣೆಯ ಬಗ್ಗೆ ವಿವರಿಸಿದ್ದಾರೆ.

ವೀಡಿಯೊ ನೋಡಲು ಇಲ್ಲಿ ಕ್ಲಿಕ್ಕಿಸಿ: https://youtu.be/qsigWJdUl6U

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...