ಕಾರವಾರ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸನಿಹ (ವಾರ್ತಾ ಇಲಾಖೆ ಕಚೇರಿ ಎಡಕ್ಕೆ)ದಲ್ಲೇ ನೂತನವಾಗಿ ಜಿಲ್ಲಾ ಪತ್ರಿಕಾ ಭವನ ನಿರ್ಮಾಣವಾಗಿದ್ದು, ಇನ್ಮುಂದೆ ಜಿಲ್ಲಾ ಕೇಂದ್ರ ಕಾರವಾರದಲ್ಲಿ ನಡೆಯುವ ಎಲ್ಲರೀತಿಯ ಪತ್ರಿಕಾಗೋಷ್ಠಿಗಳನ್ನು ಮಾ. 20 ರಿಂದಲೇ ಅನ್ವಯವಾಗುವಂತೆ ಇದೇ ಪತ್ರಿಕಾ ಭವನದಲ್ಲೇ ಹಮ್ಮಿಕೊಳ್ಳುವಂತೆ ಸಂಘಟಕರಲ್ಲಿ ಕೋರಲಾಗಿದೆ.
ಪತ್ರಿಕಾ ಭವನದಲ್ಲಿ ಸದ್ಯವೇ ಓರ್ವ ಸಹಾಯಕ ಸಿಬ್ಬಂದಿಯನ್ನು ನೇಮಿಸಲಾಗುತ್ತಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಅವರ ಸಂಪರ್ಕ ಮೊಬೈಲ್ ಸಂಖ್ಯೆಯನ್ನು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗುತ್ತದೆ. ಅಷ್ಟರವರೆಗೂ ಜಿಲ್ಲಾಕೇಂದ್ರದಲ್ಲಿ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಳ್ಳುವವರು ಪತ್ರಿಕಾ ಭವನ ನಿರ್ವಹಣಾ ಸಮಿತಿಯ ಅಧ್ಯಕ್ಷ ಟಿ.ಬಿ.ಹರಿಕಾಂತ (ಮೊ.9902043454) ಉಪಾಧ್ಯಕ್ಷ ಕಡತೋಕ ಮಂಜು (ಮೊ: 9632201537) ಕಾರ್ಯದರ್ಶಿ ದೀಪಕ ಶೇಣ್ವಿ (ಮೊ…7899868121) ಖಜಾಂಜಿ ಸುಭಾಷ ದೂಪದಹೊಂಡ (ಮೊ 9886449412) ಇವರನ್ನು ಸಂಪರ್ಕಿಸ ಬಹುದೆಂದು ನಿರ್ವಹಣಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.