ಮುಂಡಗೋಡ : ತ್ಯಾಗ ಮತ್ತು ಬಲಿದಾನ ಸಂಕೇತ ಸಾರುವ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ತಾಲೂಕಾದ್ಯಂತ ಶಾಂತಿ, ಶೃದ್ಧಾ ಭಕ್ತಿಯಿಂದ ಆಚರಿಸಿದರು
ಪಟ್ಟಣದ ಐದು ಮಸೀದಗಳ ಜಮಾತಿನ ಮುಸ್ಲಿಂ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳ ಮುಸ್ಲಿಂ ಬಾಂದವರು ಯಲ್ಲಾಪುರ ರಸ್ತೆಯ ನೂರಾನಿ ಮಸಿದ ಹತ್ತಿರ ಶ್ವೇತ ವಸ್ತ್ರಧರಿಸಿ ಜಮಾವಣೆಗೊಂಡು ಈದಗಾ ಮೈದಾನಕ್ಕೆ ತೆರಳಿ ಈದ್-ಉಲ್-ಜಹಾ ನಮಾಜ ಪೊರೈಸಿದರು.
ಅಲ್ಲಾಹನ ಗೆ ಪ್ರಾರ್ಥನೆ ಸಲ್ಲಿಸಿ ಎಲ್ಲಡೆ ಮಳೆ ಬೆಳೆ ಸರಿಯಾಗಿ ಬರಲಿ, ಜನರಲ್ಲಿ ಭಾತೃತ್ವ ಭಾವನೆ ಬೆಳೆಯಲಿ ಎಂದು ಅಲ್ಲಾಹನ ಹತ್ತಿರ ಮೊರೆ ಇಟ್ಟು ಪ್ರಾರ್ಥಸಿದರು.
ಮುಸ್ಲಿಂ ಬಾಂದವರು ಒಬ್ಬರನ್ನೊಬರು ಆಲಿಂಗಿಸಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.