ಬೆಳಕಿಂಡಿ ಪ್ರಕಾಶನದಿಂದ ಜಾನಪದ ಹಬ್ಬ ಶ್ರೀ ಹರಿಸೇವಾ ಕಾರ್ಯ ಕೃತಿ ಬಿಡುಗಡೆ

Source: sonews | By I.G. Bhatkali | Published on 15th July 2017, 8:02 PM | Coastal News | State News | Don't Miss |

ಭಟ್ಕಳ: ಬೆಳಕಿಂಡಿ ಪ್ರಕಾಶನ ಶಿರಾಲಿಯ ವತಿಯಿಂದ ಡಾ. ಆರ್. ವಿ. ಸರಾಫ್ ಅವರು ರಚಿಸಿದ ಕೃತಿ ಭಟ್ಕಳ ತಾಲೂಕಿನ ಜಾನಪದ ಹಬ್ಬ ಶ್ರೀ ಹರಿಸೇವಾ ಕಾರ್ಯ ಕೃತಿಯನ್ನು ಶಿರಾಲಿಯ ಜನತಾ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಶಾಸಕ ಮಂಕಾಳ ವೈದ್ಯ ಬಿಡುಗಡೆಗೊಳಿಸಿದರು. 
ನಂತರ ಮಾತನಾಡಿದ ಅವರು ವಿಶೇಷವಾಗಿ ಭಟ್ಕಳ ತಾಲೂಕಿನಲ್ಲಿ ಮಾತ್ರ ತಿರುಪತಿ ತಿಮ್ಮಪ್ಪ ದೇವರ ಪ್ರೀತ್ಯರ್ಥವಾಗಿ ನಡೆಯುತ್ತಿರುವ ಹರಿಸೇವಾ ಕಾರ್ಯವು ಅತ್ಯಂತ ಭಕ್ತಿ-ಭಾವದಿಂದ ನಡೆಯುವ ದೇವತಾ ಕಾರ್ಯಗಳಲ್ಲಿ ಒಂದಾಗಿದೆ. ಇಲ್ಲಿಯ ತನಕ ಹರಿಸೇವಾ ಕಾರ್ಯಗಳು ನಡೆಸಿಕೊಂಡು ಬರಲಾಗುತ್ತಿದ್ದು ಅದಕ್ಕೆ ಅದರದೇ ಆದ ಹಲವಾರು ಕಟ್ಟುಪಾಡುಗಳಿವೆ. ಅಂತಹ ಕಟ್ಟುಪಾಡುಗಳಿಗೆ ಇಲ್ಲಿಯ ತನಕ ಲಿಖಿತ ರೂಪವಿಲ್ಲವಾಗಿತ್ತು. ಡಾ. ಆರ್. ವಿ. ಸರಾಫ್ ಅವರು 2-34 ವರ್ಷಗಳಿಂದ ಅವುಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರ ತಂದಿರುವುದು ಒಂದು ದಾಖಲೆಯಾಗಿ ಉಳಿಯಲಿದೆ. ಯಾವುದೇ ಒಂದು ವ್ಯಕ್ತಿ ಇರುವ ತನಕ ಮಾತ್ರ, ಆದರೆ ಪುಸ್ತಕಗಳು ಸರ್ವಕಾಲಿಕ ದಾಖಲೆಯಾಗಬಲ್ಲವು ಎಂದೂ ಹೇಳಿದರು. 
ಇಂದು ಕರಾವಳಿಯಲ್ಲಿ ಮಳೆ, ಬೆಳೆ, ಜನ-ಜೀವನ ಉತ್ತಮವಾಗಿರಬೇಕಾದರೆ ನಮ್ಮ ಧಾರ್ಮಿಕ ಕಟ್ಟಳೆಗಳು, ನಂಬಿಕೆಗಳೇ ಕಾರಣವಾಗಿದೆ. ನಾವು ಆಚರಿಸುವ ಧಾರ್ಮಿಕ ಆಚರಣೆಗಳು ನಮ್ಮ ಈ ಭಾಗವನ್ನು ಸುರಕ್ಷಿತವಾಗಿಟ್ಟಿದೆ ಎಂದೂ ಅವರು ಅಭಿಪ್ರಾಯ ಪಟ್ಟರು. ಹರಿಸೇವಾ ಕಾರ್ಯದ ಕುರಿತು ಎಲ್ಲರಿಗೂ ತಿಳಿಯುವಂತೆ ಈ ಪುಸ್ತಕವನ್ನು ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳ ಗ್ರಂಥಾಲಯಗಳಿಗೆ ಹಾಗೂ ಸಾರ್ವಜನಿಕ ಗ್ರಂಥಾಲಯಗಳಿಗೆ ಪುಸ್ತಕವನ್ನು ಇಡುವಂತೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. 
ಕಾರ್ಯಕ್ರಮದಲ್ಲಿ  ಉಧ್ಯಮಿ ಡಿ.ಜೆ. ಕಾಮತ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.  ಮುಖ್ಯ ಅತಿಥಿಗಳಾಗಿ ಶಿರಾಲಿ ಗ್ರಾ.ಪಂ.ಅಧ್ಯಕ್ಷ ವೆಂಕಟೇಶ ನಾಯ್ಕ, ಜ್ಯೂನಿಯರ್ ಕಾಲೇಜು ಉಪನ್ಯಾಸಕ ದೇವೇಂದ್ರ ನಾಯ್ಕ,  ಅತಿಥಿಗಳಾಗಿ ನಾಮಧಾರಿ ಸಮಾಜದ ಪ್ರಮುಖ ಜೆ.ಜೆ.ನಾಯ್ಕ,  ಮೊಗೇರ ಸಮಾಜದ ಪ್ರಮುಖ ಗೋವಿಂದ ನಾರಾಯಣ ಮೊಗೇರ, ದೇವಾಡಿಗ ಸಮಾಜದ ಪ್ರಮುಖ ವೆಂಕ್ಟಯ್ಯ ಭೈರುಮನೆ, ನಿವೃತ್ತ ಶಿಕ್ಷಕ ಎಂ.ಬಿ.ನಾಯ್ಕ  ಮುಂತಾದವರು ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಶಾರದಹೊಳೆಯ ಜೆ.ಜೆ. ನಾಯ್ಕ ಕೃತಿ ಪರಿಚಯ ಮಾಡಿದರು. 
ವಿದ್ಯಾರ್ಥಿನಿಯರಾದ ದೀಕ್ಷಾ ಮತ್ತು ಫಾತಿಮಾ ಪ್ರಾರ್ಥನೆ ಹಾಡಿದರು. ಕೃತಿ ರಚಿಸಿದ ಡಾ. ಆರ್. ವಿ. ಸರಾಫ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಶ್ರೀಧರ ಶೇಟ್ ಕಾರ್ಯಕ್ರಮ ನಿರೂಪಿಸಿದರು. 

ಶಿರಾಲಿ ಜನತಾವಿದ್ಯಾಲಯ ಶಾಲೆಯಲ್ಲಿ ಧ್ಯಾನ ಮತ್ತು ಯೋಗ ಶಿಬಿರ
ಭಟ್ಕಳ: ಧ್ಯಾನದಿಂದ ಜೀವನದಲ್ಲಿ ಮಹತ್ತರ ಬದಲಾವಣೆಯನ್ನು ಕಾಣಬಹುದು, ಅತ್ಯಂತ ಶಾಂತಚಿತ್ತರಾಗಿ ಧ್ಯಾನ ಕೈಗೊಂಡಾಗ ಮನಸ್ಸಿಗೆ ಶಾಂತಿ ದೊರೆಯುತ್ತದೆ ಎಂದು ಶಿರಾಲಿಯ ಸಮಾಜ ಸೇವಕ ಡಾ. ಆರ್. ವಿ. ಸರಾಫ್ ಹೇಳಿದರು. 
ಅವರು ಶಿರಾಲಿಯ ಜನತಾ ವಿದ್ಯಾಲಯ ಪ್ರೌಢ ಶಾಲೆಯಲ್ಲಿ ಎರ್ಪಡಿಸಲಾಗಿದ್ದ 2016-17ನೇ ಸಾಲಿನ ಧ್ಯಾನ ಮತ್ತು ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡುತ್ತಿದ್ದರು. 
ಪ್ರತಿಯೊಂದು ವಿದ್ಯಾರ್ಥಿಗೂ ಕೂಡಾ ಧ್ಯಾನ, ಯೋಗದಿಂದ ಮನಸ್ಸಿನ ಎಕಾಗ್ರತೆ ದೊರೆತು ವಿದ್ಯಾಭ್ಯಾಸದಲ್ಲಿಯೂ ಅದು ಅತ್ಯಂತ ಸಹಕಾರಿಯಾಗುವುದು.  ಅಲ್ಲದೇ ಜೀವನದಲ್ಲಿ ಎಂತಹ ಕಠಿಣ ಪರಿಸ್ಥಿತಿ ಬಂದರೂ ಸಹ ಅದನ್ನು ಎದುರಿಸುವಂತಹ ಧೈರ್ಯ ಬರುವುದು. ಜೀವನದಲ್ಲಿ ಎಲ್ಲವೂ ಇದ್ದು ಮಾನಸಿಕ ಶಾಂತಿಯೇ ಇಲ್ಲವಾದಲ್ಲಿ ಎಲ್ಲವೂ ಗೌಣವಾಗುವುದು. ಧ್ಯಾನ, ಯೋಗವನ್ನು ಜೀವನದಲ್ಲಿ ಅಳವಡಿಸಿಕೊಂಡು ಶಾಂತಿಯಿಂದ ಜೀವನ ನಡೆಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನತಾ ವಿದ್ಯಾಲಯ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಎಂ. ಎ. ನಾಯ್ಕ ವಹಿಸಿದ್ದರು. 
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಯೋಗ ಗುರು ಗೋವಿಂದ ದೇವಡಿಗ ಅವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಕಲಿತ ವಿದ್ಯೆಯು ಜೀವನ ಶಿಕ್ಷಣವಾಗುವುದು.  ಮುಂದೆ ತಮ್ಮ ಜೀವನದಲ್ಲಿ ಅದು ಅತ್ಯಂತ ಸಹಕಾರಿ. ಪ್ರೌಢ ಶಾಲಾ ಹಂತದಲ್ಲಿಯೇ ಧ್ಯಾನ, ಯೋಗವನ್ನು ಮಾಡುವುದರಿಂದ ಮನಸ್ಸಿನ ಎಕಾಗ್ರತೆ ಹೆಚ್ಚಿ ವಿದ್ಯಾಭ್ಯಾಸಕ್ಕೆ ಅತ್ಯಂತ ಸಹಕಾರಿಯಾಗುವುದು. ದೊರೆತಿರುವ ಅವಕಾಶವನ್ನು ಬಳಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. 
ಇನ್ನೋರ್ವ ಮುಖ್ಯ ಅತಿಥಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಮಾತನಾಡಿ ನಮ್ಮ ಶಿಕ್ಷಣ ಪದ್ಧತಿಯಲ್ಲಿ ಜೀವನ ಶಿಕ್ಷಣದ ಕಡೆಗೆ ಗಮನವನ್ನೇ ನೀಡಿಲ್ಲ.  ಇಂದಿನ ವಿದ್ಯಾರ್ಥಿಗಳು ಮುಂದೆ ಸಮಾಜದಲ್ಲಿ ಎದುರಿಸಬೇಕಾದ ಸುಖ-ಕಷ್ಟಗಳ ಕುರಿತು ಅರಿಯದೇ ಇರುವುದರಿಂದ ಅನೇಕರು ಸಂಕಷ್ಟಕ್ಕೆ ಸಿಲುಕುತ್ತಾರೆ.  ಅದು ನಮ್ಮ ಶಿಕ್ಷಣವಾಗಬೇಕು, ಶಿಕ್ಷಣ ಪದ್ಧತಿ ಬದಲಾದಾಗ ಮಾತ್ರ ವಿದ್ಯಾರ್ಥಿ ಮುಂದೆ ಯಶಸ್ವೀ ನಾಗರೀಕನಾಗಬಲ್ಲ.  ಯೋಗ ಶಿಕ್ಷಣದಲ್ಲಿ ಕಡ್ಡಾಯ ಗೊಳಿಸಿದಾಗ ಮಾತ್ರ ನಾವು ಮುಂದಿನ ಸಮಾಜವನ್ನು ಸದೃಢ ಸಮಾಜವನ್ನಾಗಿ ನೋಡಲು ಸಾಧ್ಯವಾಗುವುದು ಎಂದರು. 
ಸಾನಿಯಾ ಮತ್ತು ದೀಕ್ಷಾ ಪ್ರಾರ್ಥನೆ ಹಾಡಿದರು.  ಶಿಕ್ಷಕಿ ಸುಕನ್ಯಾ ಭಟ್ಟ ಸ್ವಾಗತಿಸಿದರು. ಶಿಕ್ಷಕಿ ಲೀಲಾವತಿ ಮೊಗೇರ ನಿರ್ವಹಿಸಿದರು. ಶಿಕ್ಷಕಿ ಆಶಾ ಭಟ್ಟ ವಂದಿಸಿದರು. 

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...