ಭಟ್ಕಳ:1994ರ  S.S.L.C.ವಾಟ್ಸಾಪ್ ಗ್ರೂಪ್ ನಿಂದ  ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ಧನ ಸಹಾಯ

Source: so english | By Arshad Koppa | Published on 24th May 2017, 9:31 AM | Coastal News | Special Report |

ಭಟ್ಕಳ:ದಿನ ಬೆಳಗಾದರೆ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್ ಹಾಗೂ ಫೇಸ್ ಬುಕ್‍ಗಳಲ್ಲಿ ಯಾರ್ಯಾರನ್ನೋ ಅವಹೇಳನ ಮಾಡುವುದು. ಯಾರದೋ ಪೋಟೋವನ್ನು ಅಸಂಬದ್ಧವಾಗಿ ರೀತಿಯಲ್ಲಿ ಪೋಟೋಶಾಪ್ ಮಾಡಿ ನಂತರ ಅದು ಪೋಲಿಸ್ ಕೇಸ್ ಆಗಿ ಜೈಲಿಗೆ ಹೋಗಿರುವುದನ್ನು ಕೇಳಿರುತ್ತೀರಿ ಅಥವಾ ನೋಡಿರುತ್ತೀರಿ. ಆದರೆ ಹಳೆಯ ಸ್ನೇಹಿತರೆಲ್ಲ ಸೇರಿ ಮಾಡಿದ ವಾಟ್ಸಾಪ್ ಗ್ರೂಪ್ ಮೂಲಕ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ಧನ ಸಹಾಯವನ್ನು ನೀಡಿರುವುದು ವಿಶೇಷವೇ ಸರಿ ಎನ್ನಬಹುದು. 

ಈ ವಾಟ್ಸಾಪ್ ಗ್ರೂಪ್ ಮಾಡಿರುವುದು 1994 ನೇ ಸಾಲಿನಲ್ಲಿ ಭಟ್ಕಳದ ನ್ಯೂ ಇಂಗ್ಲೀಷ್ ಶಾಲೆಯಲ್ಲಿ S.S.L.C.ಅ. ಮುಗಿಸಿ ಮುಂದಿನ ವಿದ್ಯಾಭ್ಯಾಸದ ನಿಮಿತ್ತ ಬೇರಾದ ಯುವಕರು ತಂಡವಾಗಿದ್ದು, ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ವಾಟ್ಸಾಪ್ ಗ್ರೂಪ್ ಮುಖಾಂತರ ಒಂದುಗೊಡಿ ಒಂದು ಸಮಾಜಮುಖ ಕೆಲಸ ಮಾಡಿದ್ದಾರೆ. ವಾಟ್ಸಾಪ್ ಗ್ರೂಪ ಏನೋ ಮಾಡಿದರು ಆದರೆ ಬೇರೆಲ್ಲ ಗ್ರೂಪ್ ತರಹ ಕೇವಲ ಚಾಟಿಂಗ್, ಟಾಕಿಂಗ್ ಮಾಡುತ್ತಾ ಕಾಲಹರಣ ಮಾಡದೇ ಸಮಾಜದಲ್ಲಿನ ಜನರಿಗೆ ಸಹಾಐ ಮಾಡಬೇಕೆಂಬ ನಿರ್ಧರಿಸಿ ವಾಟ್ಸಾಪ್ ಗ್ರುಪ್ ನಲ್ಲಿನ ಸದಸ್ಯರೆಲ್ಲ ಸೇರಿ ಹಣ ಸಂಗ್ರಹಿಸಿ, ತಾಲೂಕಿನ ಚೌಥನಿಯ ನಿವಾಸಿ ಸುರೇಶ ನಾಯ್ಕ ಎನ್ನುವವರಿಗೆ ರೂ. 25,000ಗಳ ಧನಸಹಾಯ ನೀಡಿದರು. ಸುರೇಶ ನಾಯ್ಕ ಹಲವು ವರ್ಷದಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಬಗ್ಗೆ ಮಾಹಿತಿ ಪಡೆದ ವಾಟ್ಸಾಪ್ ಗ್ರೂಪ್ ಸದಸ್ಯರು ಸಹಾಯ ಮಾಡಿದರು.  ಈ ಗುಂಪಿನ ನಿರ್ವಾಹಕರಾದ ನಾಗರಾಜ ನಾಯ್ಕ ತಮ್ಮ ಗುಂಪಿನ ಮುಖಾಂತರ ಮುಂದಿನ ದಿನಗಳಲ್ಲಿ ಬೇರೆ ಬೇರೆ ರೀತಿಯ ಸಮಾಜಿಕ ಕಾರ್ಯಗಳನ್ನು ಮಾಡುವ ಇರಾದೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಗ್ರೂಪ್‍ನ ಸದಸ್ಯರಾದ ಶ್ರೀ ದಿನೇಶ ನಾಯ್ಕ, ಚೌಥನಿ, ಉಮೇಶ ಬಾಳಗಿ, ಹರೀಶ ನಾಯ್ಕ, ಶಿವಪ್ರಸಾದ ಪ್ರಭು ಹಾಜರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...