ಭಟ್ಕಳದಲ್ಲಿ 9 ಎಕರೆ ಜಮೀನು ಬೆಳೆ ನಷ್ಟ     

Source: S.O. News Service | By MV Bhatkal | Published on 19th October 2018, 3:06 PM | Coastal News | Special Report |

ಭಟ್ಕಳ : 2018-19ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಠಿಯಿಂದ ಭತ್ತದ ಬೆಳೆಯೂ ಹಾನಿಯುಂಟಾಗಿದ್ದು, ತಾಲೂಕಿನಲ್ಲಿ 10 ರೈತರ ಒಟ್ಟು 9 ಎಕರೆ 2 ಗುಂಟೆ ಕೃಷಿ ಜಮೀನಿನಲ್ಲಿ ಬೆಳೆ ನಷ್ಟ ಸಂಭವಿಸಿದೆ ಎಂದು ಕೃಷಿ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
ಈ ಬಾರಿಯ ಅತಿವೃಷ್ಠಿ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ರೈತರು ಬೆಳೆದ ಭತ್ತಗಳು ನೆಲಕ್ಕೆ ಅಡ್ಡಬಿದ್ದು, ತೆನೆಗಳು ಮಣ್ಣು ಕಚ್ಚಿ ಹೋಗಿರುವುದರಿಂದ ಬೆಳೆಗಳು ನಾಶವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಇಲ್ಲಿನ ಮಾವಳ್ಳಿ-1 ಹಾಗೂ ಬೆಂಗ್ರೆ ಹೋಬಳಿಯಲ್ಲಿನ 10 ರೈತರ ಒಟ್ಟು 9 ಎಕರೆ 2 ಗುಂಟೆ ಕೃಷಿ ಜಮೀನಿನಲ್ಲಿ ಭತ್ತದ ಬೆಳೆಯು ನಾಶವಾಗಿದೆ. ಮಾವಳ್ಳಿ-1ರಲ್ಲಿ 6 ರೈತರ 5 ಎಕರೆ 2 ಗುಂಟೆ ಕೃಷಿ ಜಮೀನಿನಲ್ಲಿ 14,076 ರೂ ಹಾನಿಯಾಗಿದ್ದು, ಬೆಂಗ್ರೆ 4 ರೈತರ 3 ಎಕರೆ 35 ಗುಂಟೆ ಕೃಷಿ ಜಮೀನಿನಲ್ಲಿ 10,450 ರೂ ಹಾನಿಯಾಗಿದ್ದು, ಒಟ್ಟು 9 ಎಕರೆ 2 ಗುಂಟೆ ಕೃಷಿ ಜಮೀನಿನಲ್ಲಿ 24,616 ರೂ ಹಾನಿ ಮೊತ್ತವನ್ನು ಕೃಷಿ ಇಲಾಖೆಯಿಂದ ತಿಳಿಸಿದ್ದಾರೆ.
ಈಗಾಗಲೇ ಮುಂಗಾರು ಬೆಳೆಯಾಗಿ ಬೆಳೆದ ಬಹುತೇಕ ಗದ್ದೆಗಳಲ್ಲಿ ಭತ್ತದ ತೆನೆಗಳು ಕಟಾವು ಕಾರ್ಯ ನಡೆಯುತ್ತಿದ್ದು, ಈ ಸಮಯದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಭತ್ತದ ತೆನೆಗಳು ನೀರಿನಲ್ಲಿ ತೋಯ್ದು ಹೋಗುತ್ತಿದೆ. ಹವಾಮಾನ ವೈಪರೀತ್ಯದಿಂದ ಸುರಿದ ಮಳೆಯಿಂದಾಗಿ ಬೆಳೆದು ನಿಂತ ಭತ್ತದ ಕೊಯ್ಲಿನ ಕಾರ್ಯಕ್ಕೆ ರೈತರಿಗೆ ತೀವ್ರ ತೊಂದರೆ ಉಂಟಾಗಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...