ಪ್ಲಾಸ್ಟಿಕ್ ಮಾದರಿಯ ಚರ್ಮ ಹೊಂದಿರುವ ಮಗುವಿಗೆ ಜನ್ಮ ನೀಡಿದ ಮಹಿಳೆ: ಶಿಶುವಿಗೆ ಅಪರೂಪದ ಕಾಯಿಲೆ!

Source: The New Indian Express | By MV Bhatkal | Published on 11th June 2023, 12:58 PM | State News | Don't Miss |

ಬೆಂಗಳೂರು: ಬಿಗಿಯಾದ, ಮೇಣದಂಥ ಮತ್ತು ಕಾಗದದಂತಹ ಚರ್ಮ ಹೊಂದಿರುವ ಮಗುವಿಗೆ ಮಹಿಳೆ ಜನ್ಮ ನೀಡಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ಸುಮಾರು ನಾಲ್ಕು ವಾರಗಳ ಕಾಲ ತೀವ್ರವಾದ ಚಿಕಿತ್ಸೆ ನೀಡಿದ ಬಳಿಕ ಮಗು ಬದುಕಿ ಉಳಿದಿದೆ. ಮಗುವಿನ ದೇಹ ದಟ್ಟವಾದ ಪೊರೆಯಲ್ಲಿ ಸುತ್ತುವರಿದಿದ್ದರಿಂದ ಹಲವಾರು ಸವಾಲುಗಳನ್ನು ಎದುರಿಸಿತು. ಪರಿಣಾಮವಾಗಿ ಇದು ಕಣ್ಣಿನ ರೆಪ್ಪೆಗಳನ್ನು ಮುಚ್ಚಲು ಅಸಮರ್ಥವಾಗಿ ಮತ್ತು ಮೇಲಿನ ತುಟಿಯೂ  ಅಸಹಜತೆಗಳಿಂದ ಕೂಡಿತ್ತು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. 
ಮಗುವಿನ ಚರ್ಮ ಪ್ಲಾಸ್ಟಿಕ್ ಹೊದಿಕೆಯನ್ನು ಹೋಲುವಂತಿತ್ತು. ಒಣ, ತುರಿಕೆ ಚರ್ಮ ಮಗುವನ್ನು ರಬ್ಬರ್ ತರಹದ ಆಕೃತಿ ಕಾಣುವಂತೆ ಮಾಡಿತ್ತು ಎಂದು ನಾರಾಯಣ ಹೆಲ್ತ್ ನ ಮಜುಮ್ದಾರ್  ಷಾ ವೈದ್ಯಕೀಯ ಕೇಂದ್ರದ ಶಿಶುವೈದ್ಯಶಾಸ್ತ್ರ ಮತ್ತು ನಿಯೋನಾಟಾಲಜಿ ವೈದ್ಯರಾದ ಡಾ. ಹರಿಣಿ ಶ್ರೀಧನ್ ಹೇಳಿದ್ದಾರೆ.
ಈ ಸ್ಥಿತಿಯಿಂದಾಗಿ ತಾಯಿಗೆ ಮಗುವಿಗೆ ಹಾಲು ಕುಡಿಸುವುದೂ ಕಷ್ಟವಾಗುತ್ತಿತ್ತು. ಇದಷ್ಟೇ ಅಲ್ಲದೇ ಮಗುವಿನ ಈ ರೀತಿಯ ಚರ್ಮದ ಸಮಸ್ಯೆಯಿಂದಾಗಿ ಸೋಂಕುಗಳು, ಉಸಿರಾಟದ ತೊಂದರೆ ಮತ್ತು ಎಲೆಕ್ಟ್ರೋಲೈಟ್ ಅಸಮತೋಲನಗಳೂ ಎದುರಾಗುತ್ತಿತ್ತು. ಮಗುವಿಗೆ ನಾಲ್ಕು ವಾರಗಳ ಕಾಲ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಯಿತು.  ಚರ್ಮಶಾಸ್ತ್ರಜ್ಞರು, ನೇತ್ರಶಾಸ್ತ್ರಜ್ಞರು ಮತ್ತು ನವಜಾತಶಾಸ್ತ್ರಜ್ಞರ ಚಿಕಿತ್ಸೆಯ ಪರಿಣಾಮದಿಂದ ಮಗು ಬದುಕಿ ಉಳಿಯಿತು. 
ಈ ರೀತಿಯ ವಿಚಿತ್ರ ಸಮಸ್ಯೆ 3 ಲಕ್ಷ ಮಕ್ಕಳಲಲ್ಲಿ ಒಂದು ಮಗುವಿನಲ್ಲಿ ಮಾತ್ರ ಕಾಣಿಸಿಕೊಳ್ಳಲಿದೆ ಎಂದು ವೈದ್ಯರು ಹೇಳಿದ್ದಾರೆ.
ಕೊಲೊಡಿಯನ್ ಮೆಂಬರೇನ್ ಕಾಲಾನಂತರದಲ್ಲಿ ಕಿತ್ತುಬರುತ್ತದೆ. ಆದಾಗ್ಯೂ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ವರದಿಯ ಪ್ರಕಾರ, ಹತ್ತನೇ ಒಂದು ಭಾಗದಷ್ಟು ರೋಗಿಗಳು ಮಾತ್ರ ನಂತರ ಸಾಮಾನ್ಯ ಚರ್ಮವನ್ನು ಹೊಂದುತ್ತಾರೆ. ಜಾಗತಿಕವಾಗಿ ಇಂತಹ ಸಂಕೀರ್ಣ ಪ್ರಕರಣಗಳಲ್ಲಿ ಮರಣ ಪ್ರಮಾಣ ಶೇ.53 ರಷ್ಟಿದೆ ಎಂದು ವೈದ್ಯರು ಹೇಳಿದ್ದಾರೆ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಬಿಜೆಪಿ ಮುಖಂಡನಿಗೆ ಪೆನ್‌ಡ್ರೈವ್ ನೀಡಿದ್ದೆ; ಪ್ರಜ್ವಲ್ ಕಾರು ಚಾಲಕನಿಂದ ಹೇಳಿಕೆ

ಪ್ರಜ್ವ ರೇವಣ್ಣರದ್ದು ಎನ್ನಲಾದ ಅಶ್ಲೀಲ ವೀಡಿಯೊ ಪೆನ್ ಡ್ರೈವ್ ಬಿಜೆಪಿ ಮುಖಂಡರೂ ಆಗಿರುವ ವಕೀಲ ದೇವರಾಜೇಗೌಡ ಬಿಟ್ಟು ಬೇರೆ ಯಾರಿಗೂ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಅವಧಿ ಉಲ್ಲೇಖಿಸದೇ ಪ್ರಜ್ವಲ್ ರೇವಣ್ಣ ಜೆಡಿಎಸ್‌ನಿಂದ ಅಮಾನತು

ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಪ್ರಕರಣ ಸಂಬಂಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ರೇವಣ್ಣ, ಪ್ರಜ್ವಲ್ ಉಚ್ಚಾಟನೆಗೆ ಜೆಡಿಎಸ್ ಶಾಸಕರ ಪಟ್ಟು

ರಾಜ್ಯದ ಜನತೆಯ ಮುಂದೆ ತಲೆ ತಗ್ಗಿಸುವಂತಹ ಕೆಲಸ ಮಾಡಿದವರನ್ನು ರಾಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಘನತೆಯನ್ನು ಉಳಿಸಬೇಕಿದೆ ಎಂದು ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ: ಕುಮಾರಸ್ವಾಮಿ

ಜೆಡಿಎಸ್ ಸಂಸದ ಪ್ರಜಿ ಕುಮಾರಸ್ವಾಮಿ ಡ್ರೈವ್ ಪ್ರಕರಣದಲ್ಲಿ ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ' ಎಂದು ಮಾಧ್ಯಮಗಳ ಮುಂದೆ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ತ್ವರಿತಗತಿಯಲ್ಲಿ ತನಿಖೆ ನಡೆಸಿ, ವರದಿ ಸಲ್ಲಿಸಲು ಸೂಚನೆ: ಪರಮೇಶ್ವ‌ರ್

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿ, ವರದಿ ಸಲ್ಲಿಸುವಂತೆ ...