ಮುಂಡಗೋಡ: ಮಾವಿನ ತೋಪಿಗೆ ಬೆಂಕಿ ತಗುಲಿ ರೈತನಿಗೆ ಅಪಾರ ನಷ್ಟವುಂಟಾದ ಘಟನೆ ತಾಲೂಕಿನ ಚವಡಳ್ಳಿ ಪಂಚಾಯತ್ ವ್ಯಾಪ್ತಿಯ ಮಲವಳ್ಳಿ ಗ್ರಾಮದಲ್ಲಿ ನಡೆದಿದೆ.
ಕೃಷ್ಣಪ್ಪ ಓಣಿಕೇರಿ ಎಂಬುವರಿಗೆ ಸೇರಿದ ಮಾವಿನ ತೋಟದ ಪಕ್ಕದಲ್ಲಿ ಕಸಕ್ಕೆ ಯಾರೋ ಕಿಡಗೇಡಿಗಳು ಬೆಂಕಿ ಹಚ್ಚಿದ್ದಾರೆ ಈ ಬೆಂಕಿಯು ಹೊತ್ತಿಕೊಂಡ ನಂತರ ತೋಟವನ್ನು ಆವರಿಸಿದೆ ಎಂದು ತಿಳಿದುಬಂದಿದೆ. ಮಾಹಿತಿಯನ್ನು ಪಡೆದ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಸುಮಾರು ಒಂದು ತಾಸು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ. ಈ ಅವಘಡದಿಂದ ಸುಮಾರು 30 ಸಾವಿರ ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಅಗ್ನಿಶಾಮಕದಳದ ಸಿಬ್ಬಂದಿಗಳಾದ ಕೆ.ಆರ್. ಮಾಳಗಿ, ಬಸವರಾಜ ನಾನಾಪುರ, ಬಸವರಾಜ ಇಂಚಲ, ಚಂದ್ರಪ್ಪ ಲಮಾಣಿ, ಹರೀಶ ಪಟಗಾರ, ದುರ್ಗಪ್ಪಾ ಹರಿಜನ, ಸ್ವಪ್ನಿಲ್, ಕಾರ್ಯಾಚರಣೆಯಲ್ಲಿದ್ದರು.