ಮಾವಿನ ತೋಪಿಗೆ ಬೆಂಕಿ ರೈತನಿಗೆ ನಷ್ಟ

Source: sonews | By Staff Correspondent | Published on 17th March 2019, 11:29 PM | Coastal News |

ಮುಂಡಗೋಡ: ಮಾವಿನ ತೋಪಿಗೆ ಬೆಂಕಿ ತಗುಲಿ ರೈತನಿಗೆ ಅಪಾರ ನಷ್ಟವುಂಟಾದ ಘಟನೆ ತಾಲೂಕಿನ ಚವಡಳ್ಳಿ ಪಂಚಾಯತ್ ವ್ಯಾಪ್ತಿಯ ಮಲವಳ್ಳಿ ಗ್ರಾಮದಲ್ಲಿ ನಡೆದಿದೆ.

ಕೃಷ್ಣಪ್ಪ ಓಣಿಕೇರಿ ಎಂಬುವರಿಗೆ ಸೇರಿದ ಮಾವಿನ ತೋಟದ ಪಕ್ಕದಲ್ಲಿ ಕಸಕ್ಕೆ ಯಾರೋ ಕಿಡಗೇಡಿಗಳು ಬೆಂಕಿ ಹಚ್ಚಿದ್ದಾರೆ ಈ ಬೆಂಕಿಯು ಹೊತ್ತಿಕೊಂಡ ನಂತರ ತೋಟವನ್ನು ಆವರಿಸಿದೆ ಎಂದು ತಿಳಿದುಬಂದಿದೆ. ಮಾಹಿತಿಯನ್ನು ಪಡೆದ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಸುಮಾರು ಒಂದು ತಾಸು ಕಾರ್ಯಾಚರಣೆ ನಡೆಸಿ  ಬೆಂಕಿಯನ್ನು ನಂದಿಸಿದ್ದಾರೆ. ಈ ಅವಘಡದಿಂದ ಸುಮಾರು 30 ಸಾವಿರ ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಅಗ್ನಿಶಾಮಕದಳದ ಸಿಬ್ಬಂದಿಗಳಾದ ಕೆ.ಆರ್. ಮಾಳಗಿ, ಬಸವರಾಜ ನಾನಾಪುರ, ಬಸವರಾಜ ಇಂಚಲ, ಚಂದ್ರಪ್ಪ ಲಮಾಣಿ, ಹರೀಶ ಪಟಗಾರ, ದುರ್ಗಪ್ಪಾ ಹರಿಜನ, ಸ್ವಪ್ನಿಲ್, ಕಾರ್ಯಾಚರಣೆಯಲ್ಲಿದ್ದರು. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...