ಮಂಗಳೂರು : ಭಾರತೀಯ ಜನತಾ ಪಾರ್ಟಿಯ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ಗುರುವಾರ ಮಂಗಳೂರಿನ ಟಿ.ವಿ. ರಮಣ ಪೈ ಕನ್ವೆನ್ಶನ್ ಸೆಂಟರ್ನಲ್ಲಿ ನಡೆಯಿತು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯಕಾರಿಣಿ ಸಮಿತಿ ಸಭೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಯಾವುದೇ ಚುನಾವಣೆಯಲ್ಲಿ ಕಾರ್ಯಕರ್ತರು ಚುನಾವಣೆಯನ್ನು ಹಗುರವಾಗಿ ಪರಿಗಣಿಸಬಾರದು. ಸಂಘಟನೆ ಮುಖ್ಯ.ಅಧಿಕಾರ ಬಂದು ಜನರ ಆಶೋತ್ತರಗಳನ್ನು ಈಡೇರಿಸಲು ನಾವು ಪಕ್ಷವನ್ನು ಕಟ್ಟಬೇಕು. ಮೊನ್ನೆ ನಡೆದ ಉಪ ಚುನಾವಣೆಯಲ್ಲಿ ಅರ್ ಅರ್ ನಗರದಲ್ಲಿ ಬಾರೀ ಅಂತರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿ ವಿಪಕ್ಷಗಳಿಗೆ ಮುಖ ಬಂಗ ಮಾಡಲಿದೆ ಎಂದರು.
ಮುಂದಿನ ವಿಧಾನ ಸಭೆಯಲ್ಲಿ ಬಾರೀ ಗೆಲುವು ಸಾಧಿಸಲು ಈಗಾಗಲೇ ಪಕ್ಷದ ಬಲವರ್ಧನೆ ಅಗಬೇಕು.ಕೊವೀಡ್ ನಂತರ ಅರ್ಥಿಕ ಸ್ಥಿತಿ ಗಂಭಿರವಾದರೂ ಈಗ ಯಥಾ ಸ್ಥಿತಿಗೆ ಬರುತ್ತಿದೆ. ಮಂಗಳೂರು ಮಹಾತ್ಮಾಗಾಂಧಿ ವಿಕಾಸ ಯೋಜನೆಗೆ ೧೨೫ ಕೋಟಿ ಮಂಜೂರು ಮಾಡಲು ಯೋಚಿಸಿದ್ದೇನೆ. ಇತರ ಜಿಲ್ಲೆಗೆ ೫೦ಕೋಟಿ ನೀಡಿದ್ದೇನೆ. ಸ್ಮಾರ್ಟ್ ಸಿಟಿಯ ಮೂಲಕ ವಿವಿಧ ಯೋಜನೆಗೆ ಸಹಕಾರ ನೀಡುತ್ತೇನೆ. ರಾಜ್ಯವನ್ನ ಯಾವುದೇ ಮುಲಾಜಿಲ್ಲದೇ ಡ್ರಗ್ಸ್ ಮಾಫಿಯವನ್ನು ತಡೆಯಲು ಕಠಿಣ ಕ್ರಮ ಕೈಗೊಂಡಿದ್ದೇನೆ. ಮೀನುಗಾರಿಗೆ ವಿಶೇಷ ಅರ್ಥಿಕ ಭದ್ರತೆ ನೀಡುವುದು ಮತ್ತು ಪ್ರವಾಸೋದ್ಯವನ್ನು ಉತ್ತೇಜಿಸುವುದು ಈ ರೀತಿ ರಾಜ್ಯವನ್ನು ಬಲಪಡಿಸುವುದು. ಮತ್ಸ್ಯ ಸಂಪದ ಯೋಜನೆಗೆ ವಿದ್ಯುತ್ ಸೌಲಭ್ಯ ನೀಡುವುದು. ಉದ್ಯೋಗವನ್ನು ಉತ್ತೇಜಿಸುವುದು ಕೊರೊನಾ ಪಿಡುಗು ದೂರ ಮಾಡಲು ಶ್ರಮ ವಹಿಸಲಿದ್ದೇವೆಂದರು.
ರಾಜ್ಯದಲ್ಲಿ ಹೆಣ್ಮಕ್ಕಳ ಮತಾಂತರ ಮಾಡುವವರ ಬಗ್ಗೆ ಕಠಿಣ ಕ್ರಮ ಜರಗಿಸಲು ಕ್ರಮ ಕೈಗೊಳ್ಳುವುದು ಎಂಬುದಾಗಿ ಮುಖ್ಯಮಂತ್ರಿ ಗಳು ತಿಳಿಸಿದರು.
ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆ ವಹಿಸಿದರು. ಕಮಿಟಿ ಸದಸ್ಯರಾಗಿರುವ ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ, ಪ್ರಹ್ಲಾದ್ ಜೋಷಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಗೋವಿಂದ ಕಾರಜೋಳ್ವ ,ಆರ್,ಆಶೋಕ್,ಜಗದೀಶ್ ಶೆಟ್ಟರ್, ಈಶ್ವರಪ್ಪ ,ಅರವಿಂದ ಲಿಂಬಾವಳಿ ಮತ್ತಿತರರು ಭಾಗವಹಿಸಿದ್ದಾರೆ. ರಾಜ್ಯ ಬಿಜೆಪಿಯ ವಿವಿಧ ಪದಾಧಿಕಾರಿಗಳು, ಸಂಚಾಲಕರು, ಪ್ರಭಾರಿಗಳು, ಸಹ ಪ್ರಭಾರಿಗಳು,ಮೋರ್ಚಾಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದರು.