ಭೂಗತಪಾತಾಕಿ ಬಲಗೈ ಬಂಟನಿಗೆ ಎನ್ಕೌಂಟರ್ ಭೀತಿ. ನ್ಯಾಯಾಧೀಶರಿಗೆ ಪತ್ರ ಬರೆದ ಶರಣ್.

Source: SO News | By Laxmi Tanaya | Published on 30th October 2020, 9:19 PM | Coastal News | Don't Miss |

ಕಾರವಾರ : ಭೂಗತಪಾತಕಿ ವಿಕ್ಕಿಶೆಟ್ಟಿ ಬಲಗೈ ಬಂಟನಿಗೆ ಎನ್ಕೌಂಟರ್ ಭೀತಿ ಎದುರಾಗಿದೆ.

ಮಂಗಳೂರಿನ ರೌಡಿಶೀಟರ್ ಆಕಾಶಭವನ ಶರಣ್‌ ಅಲಿಯಾಸ್ ಶರಣ್ ಪೂಜಾರಿ ಭೀತಿ ಎದುರಿಸುತ್ತಿದ್ದಾತ. ಸದ್ಯ ಬೆಂಗಳೂರು ಸೆಂಟ್ರಲ್ ಜೈಲ್ ನಲ್ಲಿರುವ ಶರಣ್, ತುಳು ಚಿತ್ರನಟ ಸುರೇಂದ್ರ ಬಂಟ್ವಾಳ ಮರ್ಡರ್ ಕೇಸ್ ನಲ್ಲಿ ವಿಚಾರಣೆ ಎದುರಿಸುತ್ತಿದ್ದಾನೆ.

ಬಾಡಿ ವಾರಂಟ್ ಪಡೆದು ವಿಕ್ಕಿಶೆಟ್ಟಿ ಬಲಗೈ ಬಂಟ ಶರಣ್ ನನ್ನು  ವಿಚಾರಣೆಗಾಗಿ ಬಂಟ್ವಾಳ ಪೊಲೀಸರು‌ ಕರೆತರುತ್ತಿದ್ದಾರೆ. ವಿಚಾರಣೆಗೆ ಕರೆ ತಂದಾಗ ಎನ್ ಕೌಂಟರ್ ಮಾಡುವ ಭೀತಿ ಇದೆ ಎಂದು  ಬಂಟ್ವಾಳ ಜೆ.ಎಂ.ಎಫ್.ಸಿ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾನೆ.

ತನ್ನ ಜೀವಕ್ಕೆ ಅಪಾಯ ಇದೆ. ಹೀಗಾಗಿ  ವಿಚಾರಣೆಯಿಂದ ವಿನಾಯಿತಿ ನೀಡಿ ಎಂದು ಪತ್ರದಲ್ಲಿ ಕೋರಿದ್ದಾನೆ. ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಪತ್ರಬರೆದು ವಿನಂತಿಸಿದ್ದಾನೆ.

Read These Next

ಕಾಂಗ್ರೆಸ್‌ನ ಅಭೂತಪೂರ್ವ ಕಾರ್ಯಗಳಿಗೆ ಶುಭಾಶಯ ತಿಳಿಸಿದ ಹಿಂದುತ್ವ ನಾಯಕ ಚಕ್ರವರ್ತಿ ಸೂಲಿಬೆಲೆ

“ಕೆಲವು ವಿಚಾರ ನಾನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ನಾನು ಕಾಂಗ್ರೆಸಿಗರಿಗೆ ಶುಭಾಶಯ ತಿಳಿಸುತ್ತೇನೆ. ನೀವು ...