ಪತಂಜಲಿ ವಿರುದ್ಧ ಮೌನ ವಹಿಸಿದ್ದ ಕೇಂದ್ರ ಸರಕಾರಕ್ಕೂ ಸುಪ್ರೀಂ ತರಾಟೆ

Source: Vb | By I.G. Bhatkali | Published on 3rd April 2024, 7:57 PM | National News |

ಹೊಸದಿಲ್ಲಿ: ತನ್ನ ಉತ್ಪನ್ನಗಳು ಕೋವಿಡ್ -19 ಸೋಂಕುರೋಗವನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದೆಯೆಂದು ಘೋಷಿಸಿಕೊಂಡಿದ್ದ ಪತಂಜಲಿ ಆಯುರ್ವೇದ ಸಂಸ್ಥೆಯ ವಿರುದ್ದ ಕೇಂದ್ರ ಸರಕಾರವು ಯಾಕೆ ಯಾವುದೇ ಕಾನೂನು ಕ್ರಮವನ್ನು ಕೈಗೊಂಡಿಲ್ಲವೆಂದು ಪ್ರಶ್ನಿಸಿದೆ.

ಕೋವಿಡ್ ಸೋಂಕಿಗೆ ಸಂಬಂಧಿಸಿ ಪತಂಜಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಉತ್ಪನ್ನಗಳನ್ನು ಇತರ ಔಷಧಿಗಳ ಜೊತೆ ಪೂರಕವಾಗಿ ಮಾತ್ರವೇ ತೆಗೆದುಕೊಳ್ಳಬಹುದೆಂದು ಆಯುಷ್ ಇಲಾಖೆಯ ಸಮಿತಿಯು ವರದಿ ನೀಡಿದ್ದರೂ, ಕೇಂದ್ರ ಸರಕಾರ ಪತಂಜಲಿಯ ಘೋಷಣೆಗಳ ಬಗ್ಗೆ ಯಾವುದೇ ಕಾನೂನುಕ್ರಮ ಕೈಗೊಂಡಿಲ್ಲವೆಂದು ನ್ಯಾಯಪೀಠ ತಿಳಿಸಿತು.

ಅಲೋಪಥಿ ಔಷಧಿಯನ್ನು ಟೀಕಿಸುವ ಹಾಗೂ ತನ್ನ ಉತ್ಪನ್ನಗಳು ಕೆಲವು ನಿರ್ದಿಷ್ಟ ಕಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿವೆಯೆಂದು ಘೋಷಿಕೊಂಡಿರುವ ಪತಂಜಲಿ ಸಂಸ್ಥೆಯ ವಿರುದ್ದ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆಯೆಂಬ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಸುಪ್ರೀಂಕೋರ್ಟ್ ನ್ಯಾಯಪೀಠವು ಕೇಂದ್ರ ಸರಕಾರಕ್ಕೆ ಫೆ.27ರಂದು ನೋಟಿಸ್ ಜಾರಿಗೊಳಿಸಿತ್ತು. ಮಾರ್ಚ್ 19ರ ಆಲಿಕೆಯ ಸಂದರ್ಭದಲ್ಲಿ ಕೇಂದ್ರ ಸರಕಾರವು ಇನ್ನೂ ಅಫಿಡವಿಟ್ ಸಲ್ಲಿಸದೆ ಇರುವ ಬಗ್ಗೆ ಗಮನಸೆಳೆದ ನ್ಯಾಯಾಲಯವು ಈ ಬಗ್ಗೆ ಪ್ರತಿ ಅಫಿಡವಿಟ್ ಸಲ್ಲಿಸುವುದಕ್ಕೆ ಕೊನೆಯ ಅವಕಾಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಆಯುಷ್ ಸಚಿವಾಲಯವು ಮಂಗಳವಾರ 42 ಪುಟಗಳ ಅಫಿಡವಿಟ್ ಸಲ್ಲಿಸಿತ್ತು.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...