ಭಟ್ಕಳ: ತಾಲೂಕಿನ ಶಿರಾಲಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಮಾವಳ್ಳಿ ಹೋಬಳಿಯ ಶಿರಾಲಿ-1 ಗ್ರಾಮದ ಮಣ್ಣಹೊಂಡ ಮಜರೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಒಂದು ಲಾರಿ ಮರಳನ್ನು ಶುಕ್ರವಾರ ರಾತ್ರಿ ತಹಶಿಲ್ದಾರ ವಿ.ಪಿ. ಕೊಟ್ರಳ್ಳಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಡಿಢೀರ ದಾಳಿ ನಡೆಸಿ ಮರಳು ತುಂಬಿದ ಲಾರಿ ವಶಕ್ಕೆ ಪಡೆದುಕೊಂಡರು.
ಮಾರಾಟ ಅಕ್ರಮವಾಗಿ ಮರಳು ದಾಸ್ತಾನು ಮಾಡಿ ಬೇರೆಡೆ ಮಾಡಲು ಲಾರಿಯಲ್ಲಿ ತುಂಬುತ್ತಿರುವ ಖಚಿತ ಮಾಹಿತಿಯ ಮೇರೆಗೆ ತಹಸೀಲ್ದಾರ ಸಮ್ಮುಖದಲ್ಲಿ ಲಾರಿಯನ್ನು ವಶಕ್ಕೆ ಪಡೆದುಕೊಂಡು ತಹಸೀಲ್ದಾರ ಕಛೇರಿಯಲ್ಲಿ ಇರಿಸಲಾಗಿದ್ದು ಶನಿವಾರ ಬೆಳಿಗ್ಗೆ ಅದೇ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಎರಡು ಲಾರಿಯಾಗುವಷ್ಟು ಮರಳನ್ನು ವಶಪಡಿಸಿಕೊಂಡು ಆ ಮರಳನ್ನು ಸರ್ಕಾರಿ ಕಾಮಗಾರಿಗೆ ಉಪಯೋಗಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತಗೆ ಒಪ್ಪಿಸಿದ್ದಾರೆ.
ಕಾರ್ಯಚರಣೆಯಲ್ಲಿ ಮಾವಳ್ಳಿ ಕಂದಾಯ ನಿರೀಕ್ಷಕ ಚಾನ ಬಾಷಾ, ಗ್ರಾಮ ಲೆಕ್ಕಾಧಿಕಾರಿ ಶರಣ ಗೌಡ, ಜಿಲ್ಲಾ ಪಂಚಾಯತ ಇಂಜಿನಿಯರ್ ಬಸವರಾಜ, ಗ್ರಾಮ ಸಹಾಯಕರು ಇದ್ದರು.