ಚಂಡಿಗಡ: ಕೃಷಿ ಕಾನೂನುಗಳ ವಿರುದ್ದ ನಿರ್ಣಯಕ್ತ ಪಂಜಾಬ್ ವಿಧಾನಸಭೆ ಅಂಗೀಕಾರ

Source: VB | By S O News | Published on 7th March 2021, 6:45 PM | National News |

ಚಂಡಿಗಡ: ರೈತರು ಮತ್ತು ಪಂಜಾಬಿನ ಹಿತಾಸಕ್ತಿಯಲ್ಲಿ ಕೃಷಿ ಕಾನೂನುಗಳನ್ನು ಬೇಷರತ್ ಹಿಂದೆಗೆದುಕೊಳ್ಳಬೇಕು ಮತ್ತು ಸರಕಾರದಿಂದ ಎಂಎಸ್ ಪಿ ಆಧಾರಿತ ಆಹಾರಧಾನ್ಯಗಳ ಖರೀದಿಯ ಹಾಲಿ ವ್ಯವಸ್ಥೆಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿ ನಿರ್ಣಯವೊಂದನ್ನು ಪಂಜಾಬ್ ವಿಧಾನಸಭೆಯು ಅಂಗೀಕರಿಸಿದೆ. ಸದನದಲ್ಲಿ ನಿರ್ಣಯದ ಮೇಲೆ ಮಾತನಾಡಿದ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಕೃಷಿ ಕಾನೂನುಗಳ ಹಿಂದಿನ ಸರಕಾರದ ನಿಜವಾದ ಉದ್ದೇಶವನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ದೇಶದ ಮುಂದೆ 10 ಪ್ರಶ್ನೆಗಳನ್ನಿರಿಸಿದರು. ಯಾವುದೇ ಸಂದರ್ಭದಲ್ಲಿಯೂ ರೈತರಿಗೆ ಮತ್ತು ರಾಜ್ಯಕ್ಕೆ ಈ ಕಾನೂನುಗಳು ಸ್ವೀಕಾರಾರ್ಹವಲ್ಲ ಎಂದರು.

ವಿಧಾನಸಭೆಯ ಅಂಗೀಕಾರ: ಸಂಪೂರ್ಣವಾಗಿ ನಿಯಂತ್ರಣಮುಕ್ತ ಖಾಸಗಿ ಮಂಡಿ ಗಳಿಂದ ಯಾರಿಗೆ ಲಾಭವಾಗಲಿದೆ? ಕಾರ್ಪೊರೇಟ್ ಸಂಸ್ಥೆಗಳೊಂದಿಗೆ ಮಾಡಿಕೊಂಡ ಒಪ್ಪಂದಕ್ಕೆ ಸಂಬಂಧಿಸಿದ ಯಾವುದೇ ವಿವಾದದಲ್ಲಿ ರೈತರು ಸಿವಿಲ್ ನ್ಯಾಯಾಲಯಗಳ ಮೆಟ್ಟಿಲೇರುವುದನ್ನು ನಿಷೇಧಿಸುವುದರಿಂದ ಯಾರು ಲಾಭ ಪಡೆಯಲಿದ್ದಾರೆ ಎಂದು ಸಿಂಗ್‌ ಪ್ರಶ್ನಿಸಿದರು.

ರಾಜೆ ಪರಿಹಾರಕ್ಕಾಗಿ ಅನುಕೂಲಕರ ವಾತಾವರಣವನ್ನು ನಿರ್ಮಿಸಲು ಪ್ರತಿಭಟನಾನಿರತ ರೈತರ ವಿರುದ್ದ ಎಲ್ಲ ಪ್ರಕರಣಗಳು ಮತ್ತು ನೋಟಿಸುಗಳನ್ನು ಹಿಂದೆಗೆದುಕೊಳ್ಳುವಂತೆ ಅವರು ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಂಡರು.

ಆಪ್ ಮತ್ತು ಶಿರೋಮಣಿ ಅಕಾಲಿ ದಳ ಸದಸ್ಯರ ಗೈರುಹಾಜರಿಯಲ್ಲಿ ಅಂಗೀಕಾರಗೊಂಡ ನಿರ್ಣಯವು, ಪರಿಸ್ಥಿತಿಯನ್ನು ಹದಗೆಡಿಸಿರುವ ಮತ್ತು ರೈತರಲ್ಲಿ ಅಶಾಂತಿ ಹಾಗೂ ಆಕ್ರೋಶವನ್ನು ಹೆಚ್ಚಿಸಿರುವ ಕೇಂದ್ರ ಸರಕಾರದ ವಿಚಾರಶೂನ್ಯ ಮತ್ತು ನಿರ್ಲಿಪ್ತ ನಿಲುವಿನ ವಿರುದ್ಧ ಸದಸ್ಯರ ಕಳವಳವನ್ನು ವ್ಯಕ್ತಪಡಿಸಿದೆ.

ರಾಜ್ಯಪಾಲರ ಭಾಷಣಕ್ಕೆ ಉತ್ತರಿಸುತ್ತಿದ್ದ ಸಿಂಗ್ ಪ್ರತಿಭಟನಾನಿರತ ರೈತರನ್ನು ದೇಶವಿರೋಧಿಗಳೆಂದು ಬಣ್ಣಿಸುತ್ತಿರುವುದಕ್ಕಾಗಿ ಬಿಜೆಪಿ ನಾಯಕತ್ವವನ್ನು ತರಾಟೆಗೆತಿಕೊಂಡರು.

ಪಂಜಾಬಿನ ರೈತರು ಮತ್ತು ಕೃಷಿಕಾರ್ಮಿಕರು ಕಳೆದ ವರ್ಷ ಭಾರತದ ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ರಕ್ಷಿಸಲು ಗಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ಯೋಧರಷ್ಟೇ ದೇಶಭಕ್ತರು ಮತ್ತು ರಾಷ್ಟ್ರವಾದಿಗಳಾಗಿದ್ದಾರೆ ಎಂದರು.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...